ಶಂಕರನಾರಾಯಣ: ಹೊಳೆಗೆ ಬಿದ್ದು ಮಹಿಳೆ ಮೃತ್ಯು

ಶಂಕರನಾರಾಯಣ: ಮನೆಯ ತೋಟದ ಅಡಿಕೆ ಹೆಕ್ಕಲೆಂದ ಹೋದ ಮಹಿಳೆಯೊಬ್ಬರು ತೋಟದ ಬದಿಯಲ್ಲಿ ಹರಿಯುವ ಹೊಳೆಯ ನೀರಿಗೆ ಬಿದ್ದು ಮೃತಪಟ್ಟ ಘಟನೆ ಇಂದು ಬೆಳಗ್ಗೆ 10:45ರ ಸುಮಾರಿಗೆ ಹಳ್ಳಿಹೊಳೆಯಿಂದ ವರದಿಯಾಗಿದೆ.
ಸುರೇಶ್ ಎಂಬವರ ಪತ್ನಿ ಮೂಕಾಂಬು (45) ಬೆಳಗ್ಗೆ ಮನೆಯ ತೋಟದಲ್ಲಿ ಅಡಿಕೆ ಹೆಕ್ಕುವುದಾಗಿ ಹೇಳಿ ಹೋಗಿದ್ದು, ಅಪರಾಹ್ನ 12ಗಂಟೆಯಾದರೂ ಮನೆಗೆ ಮರಳದಾಗ ಸುರೇಶ್ ಹುಡುಕಿಕೊಂಡು ತೋಟಕ್ಕೆ ಹೋಗಿದ್ದರು.
ತೊಟದ ಬದಿಯಲ್ಲಿ ಹರಿಯುವ ಹೊಳೆ ಕಟ್ಟಿನ ನೀರಿನಲ್ಲಿ ಮುಖ ಕೆಳಗಾಗಿ ಬಿದ್ದಿದ್ದು ನೋಡಿದ ಕೂಡಲೇ ಸುರೇಶ್, ಹೆಂಡತಿ ಯನ್ನು ಎಳೆದು ದಡಕ್ಕೆ ಹಾಕಿ ಉಪಚರಿಸಿದ್ದರು. ಕೂಡಲೇ ಆಸುಪಾಸಿನ ಮನೆಯವರನ್ನು ಕರೆದು ಚಿಕಿತ್ಸೆಗಾಗಿ ಹಳ್ಳಿಹೊಳೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಮೂಕಾಂಬು ಮೃತಪಟ್ಟಿ ರುವುದಾಗಿ ತಿಳಿಸಿದರು.
ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





