ಸ್ಕೂಟರ್ ಸಮೇತ ತೋಡಿಗೆ ಬಿದ್ದು ಸವಾರ ಮೃತ್ಯು

ಕಾರ್ಕಳ, ಜ.18: ಸ್ಕೂಟರ್ ಸಮೇತ ತೋಡಿಗೆ ಬಿದ್ದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಸಾಣೂರು ಗ್ರಾಮದ ಮುದ್ದಣ್ಣನಗರ ಬೆರ್ಕೆದಗುರಿ ಎಂಬಲ್ಲಿ ಜ.17ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಶ್ರೀರಾಮನಗರ ನಿವಾಸಿ ಹರೀಶ(46) ಎಂದು ಗುರುತಿಸಲಾಗಿದೆ. ಇವರು ಮುದ್ದಣ್ಣ ನಗರ ಕಡೆಯಿಂದ ತನ್ನ ಮನೆಗೆ ಸ್ಕೂಟರ್ನಲ್ಲಿ ಹೋಗುತ್ತಿ ದ್ದಾಗ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಸ್ಕೂಟರ್ ಸಮೇತ ತೋಡಿಗೆ ಬಿದ್ದರೆನ್ನ ಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





