ಸ್ಥಳೀಯವಾಗಿಯೂ ಒಳ್ಳೆಯ ನಾಯಕರನ್ನು ಆಯ್ಕೆ ಮಾಡಬೇಕು: ರಕ್ಷಿತ್ ಶೆಟ್ಟಿ
ಉಡುಪಿ: ಚಿತ್ರನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಕುಕ್ಕಿಕಟ್ಟೆಯ ಅನುದಾನಿತ ಶಾಲೆಯಲ್ಲಿರುವ ಮತಗಟ್ಟೆಗೆ ತನ್ನ ತಂದೆ ಮತ್ತು ತಾಯಿ ಜೊತೆ ಆಗಮಿಸಿ ಮತದಾನ ಮಾಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿ ಬಾರಿಯೂ ಮತ ಹಾಕುವಾಗ ಕಳೆದ ಐದು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಯಾವ ರೀತಿಯ ಪ್ರಗತಿ ಆಗಿದೆ ಮತ್ತು ಮುಂದೆ ಐದು ವರ್ಷಗಳಲ್ಲಿ ನಮ್ಮ ಕನಸನ್ನು ಎಂತಹ ನಾಯಕ ಬಂದು ನಿರ್ವಹಿಸುತ್ತಾರೆ ಎಂಬುದರ ಬಗ್ಗೆ ಯೋಚನೆ ಮಾಡಿ ಮತದಾನ ಮಾಡಿದ್ದೇನೆ. ನಮ್ಮ ಪರಿಚಯಸ್ಥರು ಮತ್ತು ರಾಜಕೀಯ ಆಸಕ್ತ ರೊಂದಿಗೆ ಚರ್ಚಿಸಿ ಒಂದು ನಿರ್ಣಯಕ್ಕೆ ಬಂದು ಮತದಾನ ಮಾಡುತ್ತೇನೆ ಎಂದು ತಿಳಿಸಿದರು.
ಪ್ರತಿ ಬಾರಿಯೂ ಒಂದೇ ಪಕ್ಷಕ್ಕೆ ಮತದಾನ ಮಾಡಬೇಕಾಗಿಲ್ಲ. ನಾವು ಒಳ್ಳೆಯ ನಾಯಕರನ್ನು ಆಯ್ಕೆ ಮಾಡಬೇಕು. ಅದು ಸ್ಥಳೀಯವಾಗಿ ಮತ್ತು ನಮ್ಮ ದೇಶವನ್ನು ಮುನ್ನಡೆಸಿಕೊಂಡು ಹೋಗುವವರನ್ನು. ಒಟ್ಟಾರೆ ನಮ್ಮ ದೇಶಕ್ಕೆ ಒಳ್ಳೆಯದಾಗಬೇಕು ಎಂದು ಅವರು ಹೇಳಿದರು.
Next Story