ಮಹಿಳೆ ಆತ್ಮಹತ್ಯೆ
ಶಂಕರನಾರಾಯಣ, ಮೇ 7: ಅಸ್ಸಾಂ ಮೂಲದ ಮಹಿಳೆಯೊಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿ ತಾಲೂಕು ಬೆಳ್ವೆ ಎಂಬಲ್ಲಿ ನಡೆದಿದೆ.
ಮೃತರನ್ನು ಅಸ್ಸಾಂ ರಾಜ್ಯದ ರಮೆಶ್ವರ ಹಸ್ಡಾ ಎಂಬವರ ಪತ್ನಿ ಮೀರು ಹೇಮ್ಬ್ರಾಮ್(42) ಎಂದು ಗುರುತಿಸಲಾಗಿದೆ. ಬೆಳ್ವೆ ತೋಟದಲ್ಲಿ ಪತಿ ಜೊತೆ ಕೆಲಸ ಮಾಡಿಕೊಂಡಿದ್ದ ಇವರು ವೈಯಕ್ತಿಕ ಕಾರಣದಿಂದ ಮನನೊಂದು ಮೇ 5ರಂದು ರಾತ್ರಿ ಮನೆಯಲ್ಲಿ ಕೀಟನಾಷಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಗಂಭೀರವಾಗಿ ಅಸ್ವಸ್ಥಗೊಂಡ ಅವರು ಮೇ 7ರಂದು ನಸುಕಿನ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಹಾಲಾಡಿ ಆಸ್ಪತ್ರೆಯಲ್ಲಿ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story