ಬ್ರಹ್ಮಾವರ ಬಸ್ ನಿಲ್ದಾಣದಲ್ಲಿ ಉಚಿತ ಮಜ್ಜಿಗೆ ವಿತರಣೆ
ಬ್ರಹ್ಮಾವರ, ಮೇ 8: ಜಯಂಟ್ಸ್ ಗ್ರೂಪ್ ಮತ್ತು ಜನೌಷಧಿ ಬ್ರಹ್ಮಾವರ ಇದರ ವತಿಯಿಂದ ಬುಧವಾರ ಬ್ರಹ್ಮಾವರದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ರಿಗೆ ಸುಮಾರು 500ಲೋಟ ಮಜ್ಜಿಗೆಯನ್ನು ಉಚಿತವಾಗಿ ವಿತರಿಸಲಾಯಿತು.
ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಬಿ.ಆರ್., ಉಪಾಧ್ಯಕ್ಷೆ ಉಮಾಬಾಯಿ, ಸದಸ್ಯರಾದ ನವೀನ್ ನಾಯಕ್ ಮತ್ತು ಸದಾನಂದ ಪೂಜಾರಿ, ಕಾರ್ಯದರ್ಶಿ ಶೇಖರ್ ನಾಯಕ್ ಹಾಗೂ ಸಿಬ್ಬಂದಿ, ಜಯಂಟ್ಸ್ ಗ್ರೂಪ್ ಮತ್ತು ಜನಔಷಧಿ ಬ್ರಹ್ಮಾವರದ ಸುಂದರ್ ಪೂಜಾರಿ ಮೂಡುಕುಕ್ಕುಡೆ, ಮಧುಸೂಧನ್ ಹೇರೂರು, ಮಿಲ್ಟನ್ ಒಲಿವೆರ, ಶ್ರೀನಾಥ್ ಕೋಟ, ವಿಲ್ಸನ್ ಡಿಸಿಲ್ವ, ಪ್ರತಿಭಾ ಪೂಜಾರಿ ರೊನಾಲ್ಡ್ ಡಯಾಸ್, ಪ್ರದೀಪ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Next Story