ಉಡುಪಿ ಜಿಲ್ಲಾ ಮಾಹಿತಿ ತಂತ್ರಜ್ಞಾನಾಧಿಕಾರಿ ಮಂಜುನಾಥ ಆನಂದ ನಿಧನ
![ಉಡುಪಿ ಜಿಲ್ಲಾ ಮಾಹಿತಿ ತಂತ್ರಜ್ಞಾನಾಧಿಕಾರಿ ಮಂಜುನಾಥ ಆನಂದ ನಿಧನ ಉಡುಪಿ ಜಿಲ್ಲಾ ಮಾಹಿತಿ ತಂತ್ರಜ್ಞಾನಾಧಿಕಾರಿ ಮಂಜುನಾಥ ಆನಂದ ನಿಧನ](https://www.varthabharati.in/h-upload/2024/05/15/1266793-ud-m15-manjunath.webp)
ಉಡುಪಿ, ಮೇ 15: ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ಮಾಹಿತಿ ತಂತ್ರಜ್ಞಾನಾಧಿಕಾರಿ ಮತ್ತು ಐಟಿ ನಿರ್ದೇಶಕ ಮಂಜುನಾಥ ಆನಂದ(53) ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಮೇ 14ರಂದು ನಿಧನರಾದರು.
ಕುಂದಾಪುರ ಕೋಟ ಮೂಲದ ಇವರು, ಉಡುಪಿಯ ಕುತ್ಪಾಡಿಯಲ್ಲಿ ವಾಸವಾಗಿದ್ದರು. ಇಲಾಖೆಯಲ್ಲಿ 31 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇವರು, ಇ ತಂತ್ರಾಂಶ ನಿರ್ವಹಣೆ, ಚುನಾವಣಾ ಸಮಯ ಐಟಿ ಎಪ್ಲಿಕೇಶನ್ ನಿರ್ವಹಣೆಯನ್ನು ಮಾಡಿದ್ದರು.
2007ರಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಥಮವಾಗಿ ಕಾಗದ ರಹಿತ ಕಚೇರಿಯನ್ನಾಗಿ ಮಾಡಿದ ಸಮಯ ಇವರು ಎನ್ಐಸಿ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲದೆ ಜಿಲ್ಲಾ ವೆಬ್ಸೈಟ್ನ ನಿರ್ವಹಣೆಯನ್ನು ಇವರೇ ಮಾಡು ತ್ತಿದ್ದರು. ಇವರು ಪತ್ನಿ ಗೀತಾ, ಮಕ್ಕಳಾದ ಗ್ರೀಷ್ಮಾ ಮತ್ತು ರೋಷ್ನಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Next Story