ಮಹಿಳೆ ಆತ್ಮಹತ್ಯೆ
ಉಡುಪಿ, ಮೇ 15: ಕೌಟುಂಬಿಕ ಕಾರಣದಿಂದ ಮಾನಸಿಕವಾಗಿ ನೊಂದ ಮಹಿಳೆಯೊಬ್ಬರು ಮರಣ ಪತ್ರ ಬರೆದು ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಮೇ 14ರಂದು ಕೊರಂಗ್ರಪಾಡಿ ಸಾಯಿಬಾಬ ಮಂದಿರದ ಬಳಿ ನಡೆದಿದೆ.
ಮೃತರನ್ನು ಭಾರತಿ ಶೆಟ್ಟಿಗಾರ್(63) ಎಂದು ಗುರುತಿಸಲಾಗಿದೆ. ಇವರು ತನ್ನ ಗಂಡ ಮನೆಯಲ್ಲಿ ಇಲ್ಲದ ಕಾರಣ ಮನ ನೊಂದು ಅಡುಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರಣ ಪತ್ರದಲ್ಲಿ ನಾನು ಇಷ್ಟೆಲ್ಲ ಮಾಡಿ ನನ್ನ ಸೊಸೆಗೆ ಮಕ್ಕಳಿಗೆ ಬೇಡವಾದ ಮೇಲೆ ಏಕೆ ಇರಬೇಕು ಎಂಬುದಾಗಿ ಬರೆದಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story