ಮಾತೃ- ದಾದಿಯರ ದಿನಾಚರಣೆ: ಶುಶ್ರೂಕರಿಗೆ ಸನ್ಮಾನ
![ಮಾತೃ- ದಾದಿಯರ ದಿನಾಚರಣೆ: ಶುಶ್ರೂಕರಿಗೆ ಸನ್ಮಾನ ಮಾತೃ- ದಾದಿಯರ ದಿನಾಚರಣೆ: ಶುಶ್ರೂಕರಿಗೆ ಸನ್ಮಾನ](https://www.varthabharati.in/h-upload/2024/05/16/1266918-ud-m16-giants.webp)
ಉಡುಪಿ, ಮೇ 16: ಜಯಂಟ್ಸ್ ಗ್ರೂಪ್ ಉಡುಪಿ ವತಿಯಿಂದ ಮಾತೃ ಮತ್ತು ದಾದಿಯರ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ಹಿರಿಯ ವೈದ್ಯ, ಮಕ್ಕಳ ತಜ್ಞೆ ಡಾ.ಪುಷ್ಪಾ ಜಿ.ಕಿಣಿ ಮಾತೃ ದಿನಾಚರಣೆಯ ಮಹತ್ವ, ದಾದಿಯರ ಸೇವೆಯ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ವೈದ್ಯಕೀಯ ಶುಶ್ರೂತೆ ನೀಡಿ ಸೇವೆಗೈದಿರುವ ಉಜ್ವಲಾ ಕಿರಣ್, ನಾಜಿಯಾ ಹಾಗೂ ಡಯಾನಾ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಯಶವಂತ್ ಸಾಲ್ಯಾನ್ ವಹಿಸಿದ್ದರು. ಜಯಂಟ್ಸ್ ನಿರ್ದೇಶಕ ದಯಾನಂದ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರೀಯ ಸಮಿತಿ ಸದಸ್ಯರಾದ ದಿನಕರ ಕೆ.ಅಮೀನ್, ಜಯಂಟ್ಸ್ ಫೆಡರೇಶನ್ 6ರ ಉಪಾಧ್ಯಕ್ಷ ಪಿ.ತೇಜೇಶ್ವರ ರಾವ್, ಯುನಿಟ್ ಡೈರೆಕ್ಟರ್ ವಿವೇಕ್ ಕಾಮತ್, ಜಯಂಟ್ಸ್ ಉಡುಪಿಯ ನಿಕಟಪೂರ್ವ ಅಧ್ಯಕ್ಷ ಇಕ್ಬಾಲ್ ಮನ್ನಾ, ಕಾರ್ಯದರ್ಶಿ ವಾದಿರಾಜ ಸಾಲ್ಯಾನ್ ಉಪಸ್ಥಿತರಿದ್ದರು.
Next Story