ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್ ವ್ಯವಸ್ಥೆಗೆ ಟಿ.ಎಂ.ಎ.ಪೈ ಕೊಡುಗೆ ಗಮನಾರ್ಹ: ಡಾ.ಶರತ್ ರಾವ್
![ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್ ವ್ಯವಸ್ಥೆಗೆ ಟಿ.ಎಂ.ಎ.ಪೈ ಕೊಡುಗೆ ಗಮನಾರ್ಹ: ಡಾ.ಶರತ್ ರಾವ್ ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್ ವ್ಯವಸ್ಥೆಗೆ ಟಿ.ಎಂ.ಎ.ಪೈ ಕೊಡುಗೆ ಗಮನಾರ್ಹ: ಡಾ.ಶರತ್ ರಾವ್](https://www.varthabharati.in/h-upload/2024/05/29/1269290-ud-m29-mgm.webp)
ಉಡುಪಿ, ಮೇ 29: ಶಿಕ್ಷಣ ಮಾತ್ರವಲ್ಲ ಆರೋಗ್ಯ, ಬ್ಯಾಂಕಿಂಗ್ ವ್ಯವಸ್ಥೆಗೆ ಡಾ.ಟಿ.ಎಂ.ಎ.ಪೈ ಕೊಡುಗೆ ಗಮನಾರ್ಹ. ಕಠಿಣ ಪರಿಶ್ರಮ, ಸೃಜನಶೀಲತೆ, ಜ್ಞಾನ, ಬದ್ಧತೆಯಿಂದ ಇಲ್ಲಿ ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಮಣಿಪಾಲ ಮಾಹೆಯ ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಾಧಿಪತಿ ಡಾ.ಶರತ್ ರಾವ್ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ನ ಕಾರ್ಯದರ್ಶಿ ಬಿ.ಪಿ. ವರದ ರಾಯ ಪೈ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀ ನಾರಾಯಣ ಕಾರಂತ ಶುಭ ಹಾರೈಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಮೇಶ್ ಕಾರ್ಲ ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶೃದ್ಧಾ ಕೆ.ಭಟ್ ವರದಿ ವಾಚಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಮೇಶ್ ಭಟ್ ಸ್ವಾಗತಿಸಿದರು. ಎಂ.ಎಸ್ಸಿ. ಪ್ರತಿನಿಧಿ ಹೃತಿಕ್ರಾಜ್ ವಂದಿಸಿದರು. ವಿದ್ಯಾರ್ಥಿನಿ ವೈಷ್ಣವಿ ಪೈ ನಿರೂಪಿಸಿದರು.