ಉಡುಪಿ: ಎರಡು ದಿನಗಳ ಹಲಸು ಮೇಳ ಉದ್ಘಾಟನೆ

ಉಡುಪಿ, ಜೂ.8: ಅಂಜನ್ ಕನ್ಸ್ಸ್ಟ್ರಕ್ಷನ್ ವತಿಯಿಂದ ದೊಡ್ಡಣಗುಡ್ಡೆ ತೋಟಗಾರಿಕೆ ಇಲಾಖೆ, ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾದ ಹಲಸು ಮೇಳವನ್ನು ಕಾಂಗ್ರೆಸ್ ಮುಖಂಡ ಪ್ರಖ್ಯಾತ್ ಶೆಟ್ಟಿ ಶನಿವಾರ ಉದ್ಘಾಟಿಸಿದರು.
ಕಾರ್ಯಕ್ರಮ ಆಯೋಜಕರಾದ ಶೈಲಾ ಪೈ, ಅಕ್ಷತ್ ಪೈ, ತಕ್ಷತ್ ಪೈ, ಸಂದೀಪ್ ಅಲೆವೂರು, ಶ್ರೀಕಾಂತ್ ಅಲೆವೂರು, ಪ್ರಮುಖರಾದ ಫ್ರೆಡಿಲೋ, ಸೂರಜ್, ಅಫ್ರಿದ್ ದೊಡ್ಡಣಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.
ಚಂದ್ರ ಹಲಸು, ಏಕಾದಶಿ, ರುದ್ರಾಕ್ಷಿ ಮುಂತಾದ ಸಿಹಿ ಹಾಗೂ ರುಚಿಕರ ವಾದ ಹಲಸಿನ ಹಣ್ಣು ಮೇಳದಲ್ಲಿದ್ದು, ಹಲಸಿನ ಖಾದ್ಯ ಹೋಳಿಗೆ, ಪತ್ರೊಡೆ, ಹಲ್ವ, ಮುಳ್ಕ, ಗಟ್ಟಿ, ಜ್ಯೂಸ್, ಐಸ್ಕ್ರೀಂ, ವೈವಿಧ್ಯಮಯ ಸ್ವಾದವುಳ್ಳ ಉತ್ಪನ್ನ ಗಳನ್ನು ತಯಾರಿಸಿ ಗ್ರಾಹಕರಿಗೆ ನೀಡಲಾಗುತ್ತಿದೆ.
ಅಲ್ಲದೆ ಮಾವು ಹಾಗೂ ಇತರ ಮಳಿಗೆಗಳು ಇದ್ದು, ತುಮಕೂರು, ದಾವಣಗೆರೆ, ಉಡುಪಿ ಸಹಿತ ಹಲವು ಜಿಲ್ಲೆಗಳ ರೈತರು ಮತ್ತು ಹಲಸು, ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ 60ಕ್ಕೂ ಅಧಿಕ ಮಳಿಗೆಗಳಿವೆ.
Next Story





