ಮಣಿಪಾಲ| ಡಿವೈಡರ್ಗೆ ಸ್ಕೂಟರ್ ಢಿಕ್ಕಿ: ನೇಪಾಲ ಮೂಲದ ಯುವಕ ಮೃತ್ಯು
![ಮಣಿಪಾಲ| ಡಿವೈಡರ್ಗೆ ಸ್ಕೂಟರ್ ಢಿಕ್ಕಿ: ನೇಪಾಲ ಮೂಲದ ಯುವಕ ಮೃತ್ಯು ಮಣಿಪಾಲ| ಡಿವೈಡರ್ಗೆ ಸ್ಕೂಟರ್ ಢಿಕ್ಕಿ: ನೇಪಾಲ ಮೂಲದ ಯುವಕ ಮೃತ್ಯು](https://www.varthabharati.in/h-upload/2024/06/11/1271494-accident-5.webp)
ಮಣಿಪಾಲ, ಜೂ.11: ಸ್ಕೂಟರ್ ಡಿವೈಡರ್ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ನೇಪಾಲ ಮೂಲದ ಯುವಕ ಮೃತಪಟ್ಟ ಘಟನೆ ಜೂ.9ರಂದು ರಾತ್ರಿ ವೇಳೆ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ನೇಪಾಳದ ಮೂಲದ ಪ್ರಸ್ತುತ ಮಣಿಪಾಲ ವಿದ್ಯಾರತ್ನ ನಗರದ ನಿವಾಸಿ ಕೇಶವ (18) ಎಂದು ಗುರುತಿಸಲಾ ಗಿದೆ. ಮಣಿಪಾಲದ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ಸ್ಕೂಟರ್ನ್ನು ಅತೀವೇಗದಿಂದ ಚಲಾಯಿಸಿದ ಪರಿಣಾಮ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರ ಪರಿಣಾಮ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಕೇಶವ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story