ಉಡುಪಿ: ಡಯೇರಿಯಾ ತಡೆಗಟ್ಟುವ ಅಭಿಯಾನ
ಉಡುಪಿ, ಜು.9: ನಗರರಾಭಿವೃದ್ಧಿ ಇಲಾಖೆ, ಸ್ವಚ್ಛ ಭಾರತ್ ಮಿಷನ್ (ನಗರ) ಹಾಗೂ ಉಡುಪಿ ನಗರಸಭೆ ವತಿಯಿಂದ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ‘ಶುಚಿತ್ವ ಅಳವಡಿಸಿಕೊಳ್ಳಿ ರೋಗ ವನ್ನು ಓಡಿಸಿ’ ಎಂಬ ಅಭಿಯಾನದ ಭಾಗವಾಗಿ ಗ್ಲೋನ್ಸ್ಟಾರ್ ಅಕಾಡೆಮಿ ಇಂಟಿಗ್ರೇಟೆಡ್ ಡೆವಲಪ್ಮೆಂಟ್ ಸ್ಕೂಲ್ನಲ್ಲಿ ಡಯೇರಿಯಾ ತಡೆಗಟ್ಟುವಿಕೆ ಅಭಿಯಾನವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ನಗರಸಭಾ ಪೌರಾಯುಕ್ತ ರಾಯಪ್ಪ ತ್ಯಾಜ್ಯ ನಿರ್ವಹಣೆ, ಪ್ಲ್ಟಾಕ್ ಬಳಕೆ ನಿಷೇಧ, ಸಾಂಕ್ರಮಿಕ ರೋಗಗಳ ಹರಡುವಿಕೆ ಮತ್ತು ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು.
ನಗರಸಭಾ ಪರಿಸರ ಅಭಿಯಂತರರಾದ ಸ್ನೇಹ ಕೆಎಸ್, ಪ್ರಭಾರ ಆರೋಗ್ಯ ನಿರೀಕ್ಷಕ ಮನೋಹರ್, ಶಾಲಾ ಪ್ರಾಂಶುಪಾಲ ಡಾ.ಟಿ.ಜೆ ಕ್ವಾಡ್ರಸ್, ಮುಖ್ಯೋಪಾಧ್ಯಾಯಿನಿ ಶಾಂತಾ ಫೆರ್ನಾಂಡಿಸ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Next Story