ಜೀವ ವಿಮೆ, ಆರೋಗ್ಯ ವಿಮಾ ಪ್ರೀಮಿಯಂ ಜಿಎಸ್ಟಿ ರದ್ಧತಿಗೆ ಮನವಿ
ಉಡುಪಿ, ಜು.9: ಜೀವ ವಿಮೆ ಮತ್ತು ಆರೋಗ್ಯ ವಿಮೆಯ ಮೇಲಿನ ಜಿಎಸ್ಟಿ ರದ್ದತಿ, ಜೀವ ವಿಮೆಯ ಉಳಿತಾಯಕ್ಕೆ ವಿಶೇಷವಾಗಿ ಕರ ವಿನಾಯಿತಿ ಮತ್ತು ಸಾರ್ವಜನಿಕ ರಂಗದ ನಾಲ್ಕು ಸಾಮಾನ್ಯ ವಿಮಾ ಸಂಸ್ಥೆಗಳನ್ನು ವಿಲೀನಗೊಳಿ ಸಬೇಕೆಂದು ಅಖಿಲ ಭಾರತ ವಿಮಾ ನೌಕರರ ಸಂಘದ ನೇತೃತ್ವದಲ್ಲಿ ದೇಶದಾದ್ಯಂತ ನಡೆಸಲಾಗುತ್ತಿರುವ ಆಂದೋಲ ನದ ಭಾಗವಾಗಿ ವಿಮಾ ನೌಕರರ ಸಂಘ ಉಡುಪಿ ವಿಭಾಗದ ನಿಯೋಗವು ಉಡುಪಿ ಚಿಕ್ಕಮಗಳೂರು ಸಂಸದ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸ ಲಾಯಿತು.
ಜೀವ ವಿಮೆ ಮತ್ತು ಆರೋಗ್ಯ ವಿಮೆಯ ಪ್ರೀಮಿಯಂಗಳ ಮೇಲೆ ಶೇ.18 ಜಿಎಸ್ಟಿಯನ್ನು ಹೇರುವುದರಿಂದ ಜನ ಸಾಮಾನ್ಯ ರಿಗೆ ವಿಮಾ ಕಂತು ಸಂದಾಯ ಮಾಡುವುದು ಕಷ್ಟವಾಗುತ್ತಿದೆ. ಜನರು ತಮ್ಮ ಕುಟುಂಬದ ರಕ್ಷಣೆಗಾಗಿ ತಮ್ಮ ಜೀವ ವಿಮೆ ಮಾಡಿರುವಾಗ ಆ ವಿಮಾ ಕಂತಿನ ಮೇಲೆ ತೆರಿಗೆ ವಿಧಿಸುವುದು ಸರಿಯಲ್ಲ. ಆದುದರಿಂದ ವಿಮಾ ಕಂತಿನ ಮೇಲಿನ ಜಿಎಸ್ಟಿಯನ್ನು ರದ್ದುಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಜೀವ ವಿಮೆಯು ಬೇರೆ ಉಳಿತಾಯ ಸಂಸ್ಥೆಗಳ ಜೊತೆ ಸ್ಪರ್ದಿಸುವ ಅವಶ್ಯಕತೆ ಇದ್ದು, ಹಳೆಯ ಆದಾಯ ಕರ ಪದ್ಧತಿಯ ಪ್ರಕಾರ ಸೆಕ್ಷನ್ 80ಸಿಯಲ್ಲಿ ಉಳಿತಾಯ ಮಾಡುವವರಿಗೆ ಕರದಲ್ಲಿ ರಿಯಾಯಿತಿ ದೊರೆಯುತ್ತಿತ್ತು. ಆದ್ದರಿಂದ ಜೀವ ವಿಮಾ ಉಳಿತಾಯಗಳಿಗೆ ಬೇರೆಯದೇ ರೀತಿಯ ರಿಯಾ ಯಿತಿಗಳನ್ನು ನೀಡಬೇಕು. ಆರೋಗ್ಯ ವಿಮಾ ಕಂತಿಗೆ ಆದಾಯ ಕರ ರಿಯಾಯಿತಿಯನ್ನು ಮತ್ತೆ ಸ್ಥಾಪಿಸಬೇಕು. ಸಾರ್ವಜನಿಕ ರಂಗದ ನಾಲ್ಕು ಸಾಮಾನ್ಯ ವಿಮಾ ಸಂಸ್ಥೆಗಳನ್ನು ವಿಲೀನಗೊಳಿಸಿ ಒಂದು ಬೃಹತ್ ಸಂಸ್ಥೆಯಾಗಿ ರೂಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.