ಪೂರ್ಣಗೊಂಡ ಸುರಂಗ ಮಾರ್ಗದ ದುರಸ್ತಿ: ಕೊಂಕಣ ರೈಲುಮಾರ್ಗದಲ್ಲಿ ಶೀಘ್ರ ರೈಲು ಓಡಾಟ
ಉಡುಪಿ : ತಂತ್ರಜ್ಞರ, ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಅವಿರತ ಪರಿಶ್ರಮದಿಂದ ಮಹಾರಾಷ್ಟ್ರದ ಪೆರ್ನೆಮ್ ಸುರಂಗ ಮಾರ್ಗದಲ್ಲಿ ರಾತ್ರಿ 8:35ರ ಸುಮಾರಿಗೆ ನೀರು ಸೋರಿಕೆಯನ್ನು ಯಶಸ್ವಿಯಾಗಿ ತಡೆಗಟ್ಟಿ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿದ್ದು, ರೈಲು ಸಂಚಾರಕ್ಕೆ ‘ಟ್ರಾಫಿಕ್ ಸರ್ಟಿಫಿಕೇಟ್’ನ ಹಸಿರು ನಿಶಾನೆಯನ್ನು ನೀಡಲಾಗಿದೆ ಎಂದು ಕೊಂಕಣ ರೈಲ್ವೆಯ ಮಂಗಳೂರು ವಿಭಾಗದ ಪಿಆರ್ಓ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಈಗಾಗಲೇ ಈ ಮಾರ್ಗದಲ್ಲಿ ಗೂಡ್ಸ್ ರೈಲೊಂದು ಓಡಾಟ ನಡೆಸಲು ಸಿದ್ಧತೆಗಳಾಗಿದ್ದು, ಶೀಘ್ರವೇ ಮತ್ತೆ ರೈಲುಗಳ ಸಂಚಾರವೂ ಪ್ರಾರಂಭಗೊಳ್ಳಲಿದೆ. ಹೀಗಾಗಿ ಇನ್ನು ಮುಂದಿನ ಎಲ್ಲಾ ರೈಲುಗಳು ಮತ್ತೆ ಎಂದಿನಂತೆ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸಲಿವೆ ಎಂದು ಅವರು ಹೇಳಿದರು.
Next Story