ಮಹಡಿಯ ದಂಡೆಯಿಂದ ಬಿದ್ದು ಯುವಕ ಮೃತ್ಯು

ಮಣಿಪಾಲ, ಜ.17: ಮನೆಯ ಮೇಲ್ಗಡೆಯ ದಂಡೆಯಲ್ಲಿ ಹಾಡು ಕೇಳುತ್ತ ಕುಳಿತ್ತಿದ್ದ ಯುವಕನೋರ್ವ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಬಡಗುಬೆಟ್ಟು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಬಡಗುಬೆಟ್ಟು ಗ್ರಾಮದ ಕಾರ್ತಿಕ್(21) ಎಂದು ಗುರುತಿಸ ಲಾಗಿದೆ. ಮಣಿಪಾಲದ ಡಿಪಾರ್ಟ್ಮೆಂಟ್ ಆಫ್ ಕಾಮರ್ಸ್ನಲ್ಲಿ ಮೂರನೇ ವರ್ಷದ ಬಿಕಾಂ ವ್ಯಾಸಾಂಗ ಮಾಡುತ್ತಿದ್ದ ಇವರು, ಜ.12ರಂದು ಮನೆಯಲ್ಲಿ ಊಟ ಮುಗಿಸಿ ಮಹಡಿಗೆ ಹೋಗಿ ಮನೆಯ ಮೇಲ್ಗಡೆಯ ದಂಡೆಯಲ್ಲಿ ಕುಳಿತು ಮೊಬೈಲ್ನಲ್ಲಿ ಹಾಡು ಕೇಳುತ್ತಿದ್ದರು.
ಈ ವೇಳೆ ಅವರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾ ಗಿದ್ದ ಅವರು, ಜ.16 ರಂದು ಬೆಳಗ್ಗಿನ ಜಾವ 2:40ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





