ರೈಸ್ ಮಿಲ್ನಲ್ಲಿ ಅಕ್ರಮ ದಾಸ್ತಾನು ಆರೋಪ: ಪಡಿತರ ಅಕ್ಕಿ ವಶ

ಸಾಂದರ್ಭಿಕ ಚಿತ್ರ
ಬ್ರಹ್ಮಾವರ, ಜ.17: ರೈಸ್ ಮಿಲ್ನಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡ ಘಟನೆ ಉಪ್ಪೂರಿನಲ್ಲಿ ಜ.16ರಂದು ಸಂಜೆ ವೇಳೆ ನಡೆದಿದೆ.
ಉಪ್ಪೂರು ಗ್ರಾಮದ ಶ್ರೀಗಣೇಶ್ ರೈಸ್ ಮಿಲ್ಲಿನಲ್ಲಿ ಪಡಿತರ ಅಕ್ಕಿಯನ್ನು ಕಾನೂನು ಬಾಹಿರವಾಗಿ ಸಂಗ್ರಹಿಸಿಟ್ಟಿರುವ ಬಗ್ಗೆ ಮಾಹಿತಿಯ ಮೇರೆಗೆ ಉಡುಪಿಯ ಆಹಾರ ನಿರೀಕ್ಷಕ ಪ್ರವೇಶ್ ಕುಮಾರ್ ದಾಳಿ ಮಾಡಿದ್ದು, ಅಲ್ಲಿ 62 ಚೀಲಗಳಲ್ಲಿ ಅಕ್ರಮ ವಾಗಿ ಸಂಗ್ರಹಿಸಿಟ್ಟಿದ್ದ 18.18 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





