Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಕರ್ನಾಟಕ ಕ್ರೀಡಾಕೂಟ| ಹಾಕಿ ಪಂದ್ಯಾಟ:...

ಕರ್ನಾಟಕ ಕ್ರೀಡಾಕೂಟ| ಹಾಕಿ ಪಂದ್ಯಾಟ: ಬಳ್ಳಾರಿ, ಧಾರವಾಡ ತಂಡ ಫೈನಲಿಗೆ

►ಮಹಿಳಾ ಟೇಬಲ್ ಟೆನಿಸ್: ಬೆಂಗಳೂರಿಗೆ ಚಿನ್ನ, ಧಾರವಾಡಕ್ಕೆ ಬೆಳ್ಳಿ ► ಅರ್ಚರಿ ಸ್ಪರ್ಧೆ: ಯಾದಗಿರಿ, ಬೆಂಗಳೂರು ನಗರಕ್ಕೆ ತಲಾ 2 ಚಿನ್ನ

ವಾರ್ತಾಭಾರತಿವಾರ್ತಾಭಾರತಿ18 Jan 2025 9:00 PM IST
share
ಕರ್ನಾಟಕ ಕ್ರೀಡಾಕೂಟ| ಹಾಕಿ ಪಂದ್ಯಾಟ: ಬಳ್ಳಾರಿ, ಧಾರವಾಡ ತಂಡ ಫೈನಲಿಗೆ

ಉಡುಪಿ, ಜ.18: ಕರ್ನಾಟಕ ಕ್ರೀಡಾಕೂಟ-2025ರಲ್ಲಿ ಇಂದು ಮಣಿಪಾಲದ ಎಂಐಟಿ ಹಾಕಿ ಸ್ಟೇಡಿಯಂನಲ್ಲಿ ನಡೆದ ಪುರುಷರ ಹಾಕಿ ಪಂದ್ಯಾಟದಲ್ಲಿ ಬಳ್ಳಾರಿ ಹಾಗೂ ಧಾರವಾಡ ತಂಡಗಳು ಫೈನಲ್‌ನಲ್ಲಿ ಆಡುವ ಅರ್ಹತೆಯನ್ನು ಪಡೆದುಕೊಂಡಿವೆ.

ಇಂದು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಳ್ಳಾರಿ ತಂಡ, ಬಾಗಲಕೋಟೆ ತಂಡವನ್ನು 3-2ರ ಅಂತರದಿಂದ ಪರಾಭವಗೊಳಿಸಿತು. ವಿಜಯಿ ತಂಡದ ಪರವಾಗಿ ಯಲ್ಲಪ್ಪ, ಸಂದೀಪ್ ಹಾಗೂ ಪವನ್ ಗೋಲುಗಳನ್ನು ಗಳಿಸಿದರೆ, ಬಾಗಲಕೋಟೆ ಪರವಾಗಿ ಉಜ್ವಲ್ ಹಾಗೂ ಬಾಪುಲ್ ಅವರು ಗೋಲುಗಳನ್ನು ಗಳಿಸಿ ಅಂತರವನ್ನು ಕಡಿಮೆಗೊಳಿಸಿದರು.

ಎರಡನೇ ಪಂದ್ಯದಲ್ಲಿ ಧಾರವಾಡ ತಂಡ, ದಕ್ಷಿಣ ಕನ್ನಡ ತಂಡವನ್ನು 6-0 ಅಂತರದಿಂದ ಏಕಪಕ್ಷೀಯವಾಗಿ ಸೋಲಿಸಿ ಫೈನಲ್‌ಗೆ ತೇರ್ಗಡೆಗೊಂಡಿತು. ಧಾರವಾಡ ತಂಡದ ಪರವಾಗಿ ಪ್ರೇಮ್‌ಕುಮಾರ್, ಗಗನ್, ಪವನ್, ನಿಕಿತ್ ಗಾಗ್ಡೆ, ಕರಣ್ ಗಾಗ್ಡೆ ಹಾಗೂ ಅಖೀಲ್ ಅವರು ಗೋಲುಗಳನ್ನು ಹೊಡೆದರು.

ಮಹಿಳಾ ಟೇಬಲ್ ಟೆನಿಸ್: ಬೆಂಗಳೂರಿಗೆ ಚಿನ್ನ, ಧಾರವಾಡಕ್ಕೆ ಬೆಳ್ಳಿ


ಕರ್ನಾಟಕ ಕ್ರೀಡಾಕೂಟ-2025ರ ಅಂಗವಾಗಿ ಮಣಿಪಾಲದ ಮರೀನಾ ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ನಡೆದ ಟೇಬಲ್ ಟೆನಿಸ್‌ನ ಮಹಿಳೆಯರ ತಂಡ ಸ್ಪರ್ಧೆಯಲ್ಲಿ ಬಬೆಂಗಳೂರಿನ ಮಹಿಳೆಯರು ಚಿನ್ನದ ಪದಕವನ್ನು ಗೆದ್ದುಕೊಂಡರು.

ಬೆಂಗಳೂರು ಮಹಿಳೆಯರು, ಫೈನಲ್‌ನಲ್ಲಿ ಧಾರವಾಡದ ಮಹಿಳಾ ತಂಡವನ್ನು 3-0 ಅಂತರದಿಂದ ಪರಾಭವಗೊಳಿಸಿ ದರು. ಬೆಂಗಳೂರು ತಂಡದ ನಿರುಪಮಾ ಪಿ., ಲಾವಣ್ಯ ಎಸ್.ರಾವ್, ದೃಷ್ಟಿ ಎಸ್.ಮೋರೆ ಹಾಗೂ ಅನನ್ಯಾ ಎಚ್.ಪಿ. ಅವರು ತಾವಾಡಿದ ಸಿಂಗಲ್ಸ್ ಹಾಗೂ ಡಬಲ್ಸ್ ಪಂದ್ಯಗಳಲ್ಲಿ ಜಯ ಪಡೆದರು.

ಇದಕ್ಕೆ ಮುನ್ನ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಬೆಂಗಳೂರು ತಂಡ, ದಕ್ಷಿಣ ಕನ್ನಡ ಮಹಿಳಾ ತಂಡವನ್ನು 3-0 ಅಂತರದಿಂದ ಸೋಲಿಸಿದ್ದರೆ, ಮತ್ತೊಂದು ಪಂದ್ಯದಲ್ಲಿ ಧಾರವಾಡ ತಂಡ ಮೈಸೂರು ಮಹಿಳಾ ತಂಡವನ್ನು 3-0 ಅಂತರದಿಂದ ಹಿಮ್ಮೆಟ್ಟಿಸಿ ಫೈನಲ್ ಪ್ರವೇಶಿಸಿದ್ದರು.

ಸೆಮಿಫೈನಲ್‌ನಲ್ಲಿ ಸೋತ ದಕ್ಷಿಣ ಕನ್ನಡ ಹಾಗೂ ಮೈಸೂರು ತಂಡಗಳಿಗೆ ಕಂಚಿನ ಪದಕಗಳನ್ನು ನೀಡಲಾಗಿದೆ. ದಕ್ಷಿಣ ಕನ್ನಡ ತಂಡವನ್ನು ಅರಿಯಾ ಕ್ಲಾರಾ, ಆರಾನ್ನಾ ಸದೋತ್ರಾ, ತೆಹ್ರಾ ಎನ್. ಹಾಗೂ ಪ್ರಶಸ್ತಿ ಶೆಟ್ಟಿ ಪ್ರತಿನಿಧಿಸಿದ್ದರು.

ಅರ್ಚರಿ ಸ್ಪರ್ಧೆ: ಯಾದಗಿರಿ, ಬೆಂಗಳೂರು ನಗರಕ್ಕೆ ತಲಾ 2 ಚಿನ್ನ


ಮಣಿಪಾಲದ ಎಂಜೆಸಿ ಮೈದಾನದಲ್ಲಿ ಇಂದು ನಡೆದ ಕರ್ನಾಟಕ ಕ್ರೀಡಾಕೂಟದ ಅರ್ಚರಿ (ಬಿಲ್ಲುಗಾರಿಕೆ) ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಯಾದಗಿರಿಯ ರಘು ಅವರು ಎರಡು ಚಿನ್ನದ ಪದಕಗಳನ್ನು ಗೆದ್ದುಕೊಂಡರೆ ಮಹಿಳೆಯರ ವಿಭಾಗದಲ್ಲಿ ಬೆಂಗಳೂರು ನಗರದ ಸ್ಪರ್ಧಿಗಳು ಚಿನ್ನದ ಪದಕಗಳನ್ನು ಕೊರಳಿಗೆ ಧರಿಸಿದರು.

ಪುರುಷರ 50ಮೀ. ಇಂಡಿಯನ್ ರೌಂಡ್‌ನಲ್ಲಿ ಯಾದಗಿರಿಯ ರಘು ಅವರು 290 ಅಂಕಗಳೊಂದಿಗೆ ಚಿನ್ನದ ಪದಕ ಪಡೆ ದರೆ, ಅದೇ ತಂಡದ ಮಲ್ಲಿಕಾರ್ಜುನ 288 ಪಾಯಿಂಟ್‌ಗಳೊಂದಿಗೆ ಬೆಳ್ಳಿ ಹಾಗೂ ಬೆಂಗಳೂರಿನ ವಿಠಲ್ ಪರೀತ್ 270 ಅಂಕಗಳೊಂದಿಗೆ ಕಂಚಿನ ಪದಕ ಜಯಿಸಿದರು.

ಮಹಿಳೆಯರ 50ಮೀ. ಇಂಡಿಯನ್ ರೌಂಡ್‌ನಲ್ಲಿ ಚಿನ್ನದ ಪದಕ 265 ಅಂಕ ಸಂಪಾದಿಸಿದ ಬೆಂಗಳೂರು ನಗರದ ಶೋಭಾ ಎಲ್.ಡಿ. ಅವರ ಪಾಲಾಯಿತು.250 ಅಂಕ ಪಡೆದ ಬೆಂಗಳೂರು ನಗರದ ಪ್ರೇಮಾ ಯು. ಅವರು ಬೆಳ್ಳಿ ಪದಕ ಪಡೆದರೆ, 147 ಅಂಕಗಳೊಂದಿಗೆ ಯಾದಗಿರಿಯ ಭಾಗ್ಯಶ್ರೀ ಅವರು ಕಂಚಿನ ಪದಕ ಪಡೆದರು.

ಪುರುಷರ 30ಮೀ. ಇಂಡಿಯನ್ ರೌಂಡ್‌ನಲ್ಲಿ ಯಾದಗಿರಿಯ ರಘು 297 ಅಂಕಗಳಿಸಿ ಚಿನ್ನದ ಪದಕ ಗೆದ್ದರೆ, ರಾಯಚೂರಿನ ದೇವರಾಜ್ 290 ಅಂಕಗಳೊಂದಿಗೆ ಬೆಳ್ಳಿ ಪದಕ ಹಾಗೂ ಬೆಂಗಳೂರಿನ ವಿಜಯ ಪಿ.ಪಾಟೀಲ್ 277 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದುಕೊಂಡರು.

ಮಹಿಳೆಯರ 30ಮೀ. ಇಂಡಿಯನ್ ರೌಂಡ್‌ನಲ್ಲಿ ಬೆಂಗಳೂರು ನಗರದ ಪ್ರೇಮಾ ಯು. ಅವರು 273 ಅಂಕಗಳೊಂದಿಗೆ ಚಿನ್ನ, ಅದೇ ತಂಡ ಶೋಭಾ ಎಲ್.ಡಿ. 227 ಅಂಕಗಳೊಂದಿಗೆ ಬೆಳ್ಳಿ ಹಾಗೂ ಯಾದಗಿರಿಯ ಭಾಗ್ಯಶ್ರೀ 226 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದುಕೊಂಡರು.
























share
ವಾರ್ತಾಭಾರತಿ
ವಾರ್ತಾಭಾರತಿ
Next Story
X