Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಕರ್ನಾಟಕ ಕ್ರೀಡಾಕೂಟ| ಕಯಾಕಿಂಗ್...

ಕರ್ನಾಟಕ ಕ್ರೀಡಾಕೂಟ| ಕಯಾಕಿಂಗ್ ಎಸ್‌ಯುಪಿ: ಉಡುಪಿಗೆ ಎರಡು ಚಿನ್ನದ ಪದಕ

► ಟೇಬಲ್ ಟೆನಿಸ್: ಉಡುಪಿಯ ಪುರುಷರಿಗೆ ಬೆಳ್ಳಿ ಪದಕ ►ಬಿಲ್ಲುಗಾರಿಕೆ: ಚಾಮರಾಜನಗರಕ್ಕೆ ಚಿನ್ನ

ವಾರ್ತಾಭಾರತಿವಾರ್ತಾಭಾರತಿ19 Jan 2025 9:14 PM IST
share
ಕರ್ನಾಟಕ ಕ್ರೀಡಾಕೂಟ| ಕಯಾಕಿಂಗ್ ಎಸ್‌ಯುಪಿ: ಉಡುಪಿಗೆ ಎರಡು ಚಿನ್ನದ ಪದಕ

ಉಡುಪಿ, ಜ.19: ಬ್ರಹ್ಮಾವರ ತಾಲೂಕು ಹೇರೂರು ಮಡಿಸಾಲು ಹೊಳೆಯಲ್ಲಿ ಕರ್ನಾಟಕ ಕ್ರೀಡಾಕೂಟದ ಕಯಾಕಿಂಗ್‌ನ ಸ್ಟಾಂಡ್‌ಅಪ್ ಪೆಡಲ್‌ನ (ಎಸ್‌ಯುಪಿ) ಪುರುಷರ ಹಾಗೂ ಮಹಿಳೆಯರ 500ಮೀ. ಸ್ಪರ್ಧೆಯಲ್ಲಿ ಆತಿಥೇಯ ಉಡುಪಿ ತಂಡ ಚಿನ್ನದ ಪದಕವನ್ನು ಗೆದ್ದುಕೊಂಡವು.

ಮಹಿಳೆಯರ ವಿಭಾಗದಲ್ಲಿ ಉಡುಪಿ ತಂಡ 4.32ಸೆ.ಗಳಲ್ಲಿ ಮೊದಲಿಗರಾಗಿ ದೂರ ಕ್ರಮಿಸುವ ಮೂಲಕ ಚಿನ್ನದ ಪದಕ ಪಡೆದರೆ, ದಕ್ಷಿಣ ಕನ್ನಡ 5.24ಸೆ. ಗಳೊಂದಿಗೆ ಬೆಳ್ಳಿ ಪದಕ ಹಾಗೂ ಉತ್ತರ ಕನ್ನಡ ಜಿಲ್ಲಾ ತಂಡ 6.02ಸೆ. ಗಳೊಂದಿಗೆ ಕಂಚಿನ ಪದಕವನ್ನು ಗೆದ್ದುಕೊಂಡಿತು.

500ಮೀ. ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಉಡುಪಿ 3.53ಸೆ. ಸಾಧನೆಯೊಂದಿಗೆ ಚಿನ್ನದ ಪದಕ ಪಡೆದರೆ, ಬೆಂಗಳೂರು ನಗರ ತಂಡ 3.59ಸೆ.ಗಳೊಂದಿಗೆ ಬೆಳ್ಳಿ ಹಾಗೂ ದಾವಣಗೆರೆ ಕಂಚಿನ ಪದಕಗಳನ್ನು ಗೆದ್ದು ಕೊಂಡವು.

ಚಿತ್ರದುರ್ಗಕ್ಕೆ ಎರಡು ಚಿನ್ನ: ಚಿತ್ರದುರ್ಗದ ತಂಡಗಳು ಡ್ರ್ಯಾಗನ್ ಬೋಟ್ ರೇಸ್‌ನ ಮಿಕ್ಸೆಡ್ 500ಮೀ. ಹಾಗೂ 200ಮೀ. ರೇಸ್ ಎರಡರಲ್ಲೂ ಮೊದಲಿಗರಾಗಿ ಗುರಿಮುಟ್ಟುವ ಮೂಲಕ ಎರಡರಲ್ಲೂ ಚಿನ್ನದ ಪದಕ ಗೆದ್ದುಕೊಂಡವು.

ಪುರುಷರು ಹಾಗೂ ಮಹಿಳೆಯರು ಸೇರಿ 10+2 ಮಂದಿ ಹುಟ್ಟುಹಾಕಿದ ಈ ಸ್ಪರ್ಧೆಯ 200ಮೀ. ರೇಸ್‌ನಲ್ಲಿ ಚಿತ್ರದುರ್ಗ ಚಿನ್ನ, ಬೆಂಗಳೂರು ನಗರ ಬೆಳ್ಳಿ ಹಾಗೂ ಬೆಂಗಳೂರು ಗ್ರಾಮಾಂತರ ಕಂಚಿನ ಪದಕ ಪಡೆದರೆ, 500ಮೀ. ರೇಸ್‌ನಲ್ಲೂ ಚಿತ್ರದುರ್ಗ ಚಿನ್ನ, ಬೆಂಗಳೂರು ನಗರ ಬೆಳ್ಳಿ ಹಾಗೂ ಬೆಂಗಳೂರು ಗ್ರಾಮಾಂತರ ಕಂಚಿನ ಪದಕ ಗೆದ್ದುಕೊಂಡವು.

ಟೇಬಲ್ ಟೆನಿಸ್: ಉಡುಪಿ ಪುರುಷರಿಗೆ ಬೆಳ್ಳಿ ಪದಕ

ಕರ್ನಾಟಕ ಕ್ರೀಡಾಕೂಟದ ಪುರುಷರ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಉಡುಪಿಯ ಪುರುಷರ ತಂಡ ಫೈನಲ್‌ನಲ್ಲಿ ಬೆಂಗಳೂರು ತಂಡದ ಕೈಯಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು.

ಅಶ್ವಿನ್ ಹನಗೋಡು, ಸುದರ್ಶನ್ ಕುಮಾರ್, ಪ್ರೇಮಚಂದರ್ ಜಿ. ಹಾಗೂ ಪ್ರೇಮ್ ಸಾಗರ್ ಅವರನ್ನೊಳಗೊಂಡ ತಂಡ ಚಿನ್ನದ ಪದಕ ಪಡೆದರೆ, ಸನ್ಮಾನ್ ಶಶಿಧರ್ ಮಲ್ಪೆ, ಪರಿತೋಷ್ ಹಾಗೂ ಆದಿತ್ಯ ಕೋಟ್ಯಾನ್ ಅವರ ಉಡುಪಿ ತಂಡ ಬೆಳ್ಳಿ ಪದಕ ಪಡೆಯಿತು.

ಸೆಮಿಫೈನಲ್‌ನಲ್ಲಿ ಸೋತ ತಂಡಗಳಾದ ಮಂಗಳೂರು ಹಾಗೂ ಮೈಸೂರು ತಂಡಗಳು ಕಂಚಿನ ಪದಕಗಳನ್ನು ಪಡೆದವು.

ಸಿಂಗಲ್ಸ್ ಫಲಿತಾಂಶ: ಟೇಬಲ್‌ಟೆನಿಸ್ ಸ್ಪರ್ಧೆಯ ಪುರುಷರ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಬೆಂಗಳೂರಿನ ಅಶ್ವಿನ್ ಹನಗೋಡು ಅವರ ಪಾಲಾದರೆ, ಸುದರ್ಶನ ಕುಮಾರ್ ಬೆಳ್ಳಿ ಪದಕ ಪಡೆದರು. ಧಾರವಾಡದ ಚೇತನ್ ಸಿ. ಅರಳಿಕಟ್ಟೆ ಹಾಗೂ ಬೆಂಗಳೂರಿನ ಪ್ರೇಮಚಂದರ್ ಜಿ. ಕಂಚಿನ ಪದಕ ಪಡೆದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಬೆಂಗಳೂರಿನ ಅನನ್ಯ ಎಚ್.ಪಿ. ಚಿನ್ನದ ಪದಕ ಗೆದ್ದುಕೊಂಡರೆ, ಧಾರವಾಡದ ಸಹನಾ ಕುಲಕರ್ಣಿ ಬೆಳ್ಳಿ ಪದಕ ಪಡೆದರು. ಮಂಗಳೂರಿನ ಅರ್ನಾ ಸದೋತ್ರಾ ಹಾಗೂ ಬೆಂಗಳೂರಿನ ದೃಷ್ಟಿ ಎಸ್.ಮೊರೆ ಕಂಚಿನ ಪದಕಗಳನ್ನು ಹಂಚಿಕೊಂಡರು.

ಬಿಲ್ಲುಗಾರಿಕೆ: ಚಾಮರಾಜನಗರಕ್ಕೆ ಚಿನ್ನ

ಮಣಿಪಾಲ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಬಿಲ್ಲುಗಾರಿಕೆ (ಆರ್ಚರಿ)ಯ ಪುರುಷರ ವಿಭಾಗದ ಇಂಡಿಯನ್ ಎಲಿಮಿನೇಷನ್ ರೌಂಡ್‌ನಲ್ಲಿ ಚಾಮರಾಜ ನಗರದ ಮಲ್ಲಿಕಾರ್ಜುನ ಚಿನ್ನದ ಪದಕ ಪಡೆದರು. ಯಾದಗಿರಿಯ ರಘು ಬೆಳ್ಳಿ ಹಾಗೂ ಉತ್ತರ ಕನ್ನಡದ ಅಮಿತ್ ಕಂಚಿನ ಪದಕ ಗೆದ್ದುಕೊಂಡರು.

ಅದೇ ರೀತಿ ಮಹಿಳೆಯರ ವಿಭಾಗದ ಎಲಿಮಿನೇಷನ್ ರೌಂಡ್‌ನಲ್ಲಿ ಬೆಂಗಳೂರಿನ ಶೋಭಾ ಚಿನ್ನದ ಪದಕ ಜಯಿಸಿದರೆ, ಯಾದಗಿರಿಯ ದೇವಮ್ಮ ಬೆಳ್ಳಿ ಪದಕ ಪಡೆದರು. ಸ್ಪರ್ಧೆಯ ಕಂಚಿನ ಪದಕ ಬೆಂಗಳೂರಿನ ಪ್ರೇಮ ಅವರ ಪಾಲಾಯಿತು.










share
ವಾರ್ತಾಭಾರತಿ
ವಾರ್ತಾಭಾರತಿ
Next Story
X