ಶಾಸ್ತ್ರೀಯತೆಗೆ ಸಮಕಾಲೀನತೆಯ ಸ್ಪರ್ಶದಿಂದ ಕಲೆಗಳಲ್ಲಿ ಹೊಸಗಾಳಿ: ನೃತ್ಯ ಕಲಾವಿದೆ ಮಧು ನಟರಾಜ್

ಮಣಿಪಾಲ, ಮಾ.2: ಶಾಸ್ತ್ರೀಯತೆಗೆ ಸಮಕಾಲೀನತೆಯ ಸ್ಪರ್ಶವಾದಾಗ ನೃತ್ಯವೂ ಸೇರಿದಂತೆ ಎಲ್ಲಾ ಕಲೆಗಳಲ್ಲಿ ಹೊಸಗಾಳಿ ಬೀಸಲು ಸಾಧ್ಯ ಎಂದು ಖ್ಯಾತ ನೃತ್ಯ- ನೃತ್ಯ ವಿನ್ಯಾಸ ಕಲಾವಿದೆ ಮಧು ನಟರಾಜ್ ಹೇಳಿದ್ದಾರೆ.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್(ಜಿಸಿಪಿಎಎಸ್)ನಲ್ಲಿ ವಿದ್ಯಾರ್ಥಿ ಗಳನ್ನು ದ್ದೇಶಿಸಿ ಅವರು ಮಾತನಾಡು ತಿದ್ದರು. ಶಾಸ್ತ್ರೀಯ ಕಥಕ್ ಹಾಗೂ ಸಮಕಾಲೀನ ನೃತ್ಯ ಎರಡರಲ್ಲೂ ಪರಿಣಿತಿ ಹೊಂದಿ ರುವ ಮಧು ನಟರಾಜ್, ಬೆಂಗಳೂರಿನ ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ನ ನಿರ್ದೇಶಕರೂ ಆಗಿದ್ದಾರೆ.
ಶಾಸ್ತ್ರೀಯ ನೃತ್ಯದ ಪಠ್ಯಗಳು ಮತ್ತು ತಂತ್ರಗಳು ಪುನರ್ವಾಖ್ಯಾನ ಹಾಗೂ ನವೀಕರಣಕ್ಕೆ ಒಳಗಾದಾಗ, ಅವು ಸಮಕಾ ಲೀನವೂ, ಜನರಿಗೆ ಹತ್ತಿರವೂ ಆಗುತ್ತವೆ ಎಂದು ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ ವಿಜೇತೆ ಮಧು ನಟರಾಜ್ ಅಭಿಪ್ರಾಯಪಟ್ಟರು.
ಹಲವು ವಿಡಿಯೋಗಳ ಮೂಲಕ, ತಮ್ಮ ವಿವಿಧ ಪ್ರಯೋಗಗಳನ್ನು ವಿವರಿಸಿದ ಮಧು ನಟರಾಜ್, ಮುಖ್ಯವಾಗಿ ಪ್ರಕೃತಿ, ಸ್ತ್ರೀ, ಪರಿಸರ ಸಂಬಂಧಿ ವಿಷಯಗಳನ್ನು ನೃತ್ಯ ರೂಪದಲ್ಲಿ ಜನರಿಗೆ ತಲುಪಿಸುವ ಪ್ರಯತ್ನಗಳನ್ನು ಎತ್ತಿ ಹೇಳಿದರು.
ಕಲಾವಿದೆಯರಾದ ರಮ್ಯಾ ನಾಗರಾಜ್ ಹಾಗೂ ಡಾ.ಭ್ರಮರಿ ಶಿವಪ್ರಕಾಶ್ ಇವರ ಪ್ರಾತ್ಯಕ್ಷಿಕೆಯ ಮೂಲಕ ಶಾಸ್ತ್ರೀಯ ನೃತ್ಯ ಪ್ರಕಾರಗಳ ಹೋಲಿಕೆ ಮತ್ತು ಭಿನ್ನತೆಗಳನ್ನು ಮಧು ನಟರಾಜ್ ವಿವರಿಸಿದರು.
ಜಿಸಿಪಿಎಎಸ್ನ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಸಂವಾದವನ್ನು ನಡೆಸಿಕೊಟ್ಟರು.







