ಕಟ್ಟಡದಿಂದ ಬಿದ್ದು ಪೈಂಟರ್ ಮೃತ್ಯು

ಹಿರಿಯಡ್ಕ, ಮೇ 2: ಕಟ್ಟಡದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹಿರಿಯಡ್ಕ ಸಮೀಪದ ಕೋಟ್ನಕಟ್ಟೆ ಎಂಬಲ್ಲಿ ಮೇ 1ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಬೊಮ್ಮರಬೆಟ್ಟು ಗ್ರಾಮದ ಶ್ರೀಧರ(50) ಎಂದು ಗುರುತಿಸಲಾಗಿದೆ. ಇವರು ಕೃಷ್ಣ ಕಾಂಪ್ಲೆಕ್ಸ್ನಲ್ಲಿ ಪೈಂಟಿಂಗ್ ಕೆಲಸ ಮಾಡಿ ಅಲ್ಲಿಯೇ ಉಳಿದಿದ್ದರು. ರಾತ್ರಿ ಕಟ್ಟಡದ ಪೈಂಟಿಂಗ್ ಕೆಲಸ ಮುಗಿಸಿ ಪೆರ್ಡೂರಿಗೆ ಹೋಗಿ ವಾಪಾಸು ಕಟ್ಟಡದ ಮೇಲೆ ಬಂದ ಇವರು, ಆಕಸ್ಮಿಕವಾಗಿ ಕಾಲು ಜಾರಿ ಅಯತಪ್ಪಿಕಟ್ಟಡದಿಂದ ಕಳೆಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಉಡುಪಿಯ ಅಜ್ಜರಕಾಡು ಆಸ್ಪತ್ರೆ ಕರೆದುಕೊಂಡು ಹೋಗುವ ದಾರಿ ಮಧ್ಯೆಯೇ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





