ಬಂಟಕಲ್ಲು ಮಹಾವಿದ್ಯಾಲಯದಲ್ಲಿ ಐಕ್ಯ ವಿದ್ಯಾರ್ಥಿ ಘಟಕ ಉದ್ಘಾಟನೆ

ಉಡುಪಿ, ಮೇ 9: ಬಂಟಕಲ್ ಶ್ರೀಮಧ್ವ ವಾದಿರಾಜತಾಂತ್ರಿಕ ಮಹಾ ವಿದ್ಯಾಲಯದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮೆಶಿನ್ ಲರ್ನಿಂಗ್ ವಿಭಾಗವು ಸಂಸ್ಥೆಯ ಸಹ ಪಠ್ಯಕ್ರಮ ವಿಭಾಗದ ಸಹಯೋಗ ದೊಂದಿಗೆ ಐಕ್ಯ ವಿದ್ಯಾರ್ಥಿ ಘಟಕವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.
ಇದೇ ಸಂದರ್ಭ ಐಕ್ಯ ವಿದ್ಯಾರ್ಥಿ ಘಟಕದ ಸಹಯೋಗದೊಂದಿಗೆ ಸ್ಮಾರ್ಟ್ ಟೆಕ್ವಿತ್ ಐಒಟಿ ಬಿಲ್ಡಿಂಗ್ ಇಂಟಲಿಜೆನ್ಸ್ ಆ್ಯಂಡ್ ಇನ್ನೋವೆಟಿವ್ ಅಪ್ಲಿಕೇಶನ್ಗಳು ಎಂಬ ಮೂರು ದಿನಗಳ ವಿದ್ಯಾರ್ಥಿ ಕಾರ್ಯಾ ಗಾರವನ್ನು ಡಿಲಿತ್ ಬೆಂಗಳೂರು ಇದರ ಸಹಯೋಗದೊಂದಿಗೆ ಆಯೋಜಿಸಲಾಯಿತು.
ವಿಭಾಗದ ಮುಖ್ಯಸ್ಥೆ ಡಾ.ಮಮತ ಐಇವರು ಐಕ್ಯ ವಿದ್ಯಾರ್ಥಿ ಘಟಕ ಇದರಉದ್ದೇಶವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿಐಕ್ಯವಿದ್ಯಾರ್ಥಿಘಟಕದ ಹದಿನೆಂಟು ಪದಾಧಿಕಾರಿಗಳನ್ನು ಪರಿಚಯಿಸಲಾಯಿತು.
ಬೆಂಗಳೂರು ಡಿಲೈತ್ ಕನ್ಸಲ್ಟೆನ್ಸಿ ಸರ್ವಿಸಸ್ ಪ್ರೈವೆಟ್ ಲಿಮಿಟೆಡ್ನ ತಂತ್ರಜ್ಞಾನ ಮುಖ್ಯಸ್ಥ ವಿಜಯ್ ಜಿ.ಎಚ್., ಐಒಟಿ ಮತ್ತು ಕೃತಕ ಬುದ್ದಿ ಮತ್ತೆಯ ಭವಿಷ್ಯದ ಮಹತ್ವದ ಬಗ್ಗೆ ವಿವರಿಸಿದರು. ಐಒಟಿ ಬಗ್ಗೆ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಪ್ರೊ.ಡಾ.ರಾಧಾಕೃಷ್ಣಎಸ್ ಐತಾಳ್ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು.
ಐಕ್ಯ ವಿದ್ಯಾರ್ಥಿ ಘಟಕ ಆಯೋಜಿಸಿದ್ದ ಪ್ರತೀಕ ಚಿಹ್ನೆ(ಲೋಗೋ) ಸ್ಪರ್ಧೆಯ ವಿಜೇತರಾದ ಮನೀಶ್ ಮತ್ತು ನಿಶಾಂತ್ಅವರಿಗೆ ಬಹುಮಾನ ನೀಡಲಾಯಿತು. ವಿದ್ಯಾರ್ಥಿ ನಾಗೇಂದ್ರ ಪೈ ಸ್ವಾಗತಿಸಿದರು. ಅನಘಾ ಭಟ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಚೇತನ್ ಡಿ.ಎಲ್. ವಂದಿಸಿದರು.