ಅಕ್ರಮ ಮರಳು ಸಾಗಾಟ ಆರೋಪ: ಟಿಪ್ಪರ್ ವಶ

ಬೈಂದೂರು, ಮೇ 10: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯನ್ನು ಬೈಂದೂರು ಪೊಲೀಸರು ತೂದಳ್ಳಿ ಎಂಬಲ್ಲಿ ಮೇ 9ರಂದು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳಾದ ಮಹೇಶ ಹಾಗೂ ಯತಿನ್ ಎಂಬವರು ಇತರರೊಂದಿಗೆ ಸೇರಿ ಅಕ್ರಮವಾಗಿ ಭಟ್ಕಳ ಶಿರಾಲಿಯಿಂದ ಮರಳನ್ನು ಕಳವು ಮಾಡಿ ಬೈಂದೂರು ಕಡೆಗೆ ಸಾಗಿಸುತ್ತಿದ್ದು, ಈ ಬಗ್ಗೆ ಖಚಿತ ಮಾಹಿತಿ ಯಂತೆ ಪೊಲೀಸರು ದಾಳಿ ನಡೆಸಿ ಎರಡೂವರೆ ಟನ್ ಮರಳು ಸಹಿತಿ ಟಿಪ್ಪರನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story