ಇಂದ್ರಾಳಿ ಮೇಲ್ಸೇತುವೆಯ ಬೌಸ್ಟ್ರಿಂಗ್ ಗರ್ಡರ್ ಜೋಡಣೆಗೆ ಚಾಲನೆ: ಭಾರತೀಯ ರೈಲ್ವೆಯಿಂದ ಅನುಮತಿ
ವಾರದೊಳಗೆ ಕಾಮಗಾರಿ ಪೂರ್ಣ

ಉಡುಪಿ : ಏಳು ವರ್ಷಗಳ ಹಿಂದೆ ಆರಂಭವಾದ ರಾಷ್ಟ್ರೀಯ ಹೆದ್ದಾರಿ 169 ಎ ಇದರ ಇಂದ್ರಾಳಿ ಸೇತುವೆ ಕಾಮಗಾರಿಯು ಕುಂಟುತ್ತ ಸಾಗುತ್ತಿದ್ದು, ಇಂದು ಮೇಲ್ಸೇತುವೆಯ ಬೌಸ್ಟ್ರಿಂಗ್ ಗರ್ಡರ್ ಜೋಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಭಾರತೀಯ ರೈಲ್ವೆ ನೀಡಿದ ಅನುಮತಿಯಂತೆ 450ಮೆಟ್ರಿಕ್ ಟನ್ ತೂಕದ ಸುಮಾರು 60 ಮೀಟರ್ ಉದ್ದದ ಈ ಗರ್ಡರ್ನ್ನು ಹಳಿಯ ಮಧ್ಯೆ ನಿರ್ಮಿಸಲಾದ ಪಿಲ್ಲರ್ಗೆ ಜೋಡಿಸುವ ಕಾರ್ಯ ಬೆಳಗ್ಗೆ ಆರಂಭಿಸ ಲಾಯಿತು. ರೈಲು ಸಂಚರಿಸದ ಬೆಳಗ್ಗೆ 11.30ರಿಂದ 1.45ರ ಮಧ್ಯಾವಧಿಯಲ್ಲಿ ಇದಕ್ಕೆ ವೇಗ ನೀಡಲಾ ಯಿತು. ಮಧ್ಯಾಹ್ನದ ರೈಲು ಸಂಚರಿಸಿದ ಬಳಿಕ ಮತ್ತೆ ಅಳವಡಿಕೆ ಕಾರ್ಯ ಮುಂದುವರೆಸಲಾಯಿತು.
20 ನಿಮಿಷಕ್ಕೆ 2.4ಮೀಟರ್ನಷ್ಟು ಮುಂದಕ್ಕೆ ದೂಡಲ್ಪಡುವ ಈ ಗರ್ಡರ್ ಸಂಜೆಯೊಳಗೆ ಸಂಪೂರ್ಣ ವಾಗಿ ಇನ್ನೊಂದು ತುದಿಯನ್ನು ತಲುಪುವ ಸಾಧ್ಯತೆ ಇದೆ. ಇಲ್ಲದಿದ್ದರೆ ನಾಳೆ ಬೆಳಗ್ಗೆ ಒಳಗೆ ಪೂರ್ಣಗೊಳಿ ಸುವ ಭರವಸೆಯನ್ನು ರೈಲ್ವೆ ಇಂಜಿನಿಯರ್ ಗೋಪಾಲಕೃಷ್ಣ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಹಿರಿಯ ಇಂಜಿನಿಯರ್ ಮಂಜುನಾಥ್ ನೀಡಿದ್ದಾರೆ.
ಎರಡು ಪಿಲ್ಲರ್ಗಳಲ್ಲಿ ಗರ್ಡರ್ ಜೋಡಣೆ ಮಾಡಿದ ಬಳಿಕ, ಅದಕ್ಕೆ ಆಧಾರವಾಗಿ ಇರಿಸಲಾದ ಕ್ರಿಬ್ಸ್ ಗಳನ್ನು ತೆಗೆಯಲಾಗುತ್ತದೆ. ಅದಕ್ಕಾಗಿ ಮತ್ತೆ ಗರ್ಡರ್ನ್ನು ಒಂದು ಮೀಟರ್ನಷ್ಟು ಮೇಲಕ್ಕೆತ್ತಲಾಗು ವುದು. ಬಳಿಕ ಮುಂದೆ ರಸ್ತೆ ಕಾಮಗಾರಿ ಆರಂಭಿಸಿ ಶೀಘ್ರ ವಾಹನ ಸಂಚಾರಕ್ಕೆ ಮುಕ್ತ ಮಾಡಿ ಕೊಡಲಾ ಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಹಿರಿಯ ಇಂಜಿನಿಯರ್ ಮಂಜುನಾಥ್ ತಿಳಿಸಿದ್ದಾರೆ.
ಸಂಸದ ಕೋಟ ಭೇಟಿ: ಇಂದ್ರಾಳಿ ಸೇತುವೆ ಕಾಮಗಾರಿ ಸ್ಥಳಕ್ಕೆ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ, ಗರ್ಡರ್ ಅಳವಡಿಕೆ ಕಾರ್ಯವನ್ನು ಪರಿಶೀಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದ್ರಾಳಿ ರೈಲ್ವೆ ಸೇತುವೆ ಬಹಳ ವರ್ಷಗಳಿಂದ ನನಗುದಿಗೆ ಬಿದ್ದಿತ್ತು. ಏಳೆಂಟು ತಿಂಗಳುಗಳಿಂದ ಇದಕ್ಕೆ ಅಧಿಕೃತ ವೇಗ ಸಿಕ್ಕಿತ್ತು. ಗರ್ಡರ್ ಪೂರ್ಣ ಸಿದ್ಧ ವಾಗಿ, ಜೋಡಣೆಗೆ ಭಾರತೀಯ ರೈಲ್ವೆಯಿಂದ ಅನುಮತಿ ಬೇಕಾಗಿತ್ತು. ಈ ಸಂಬಂಧ ಲಕ್ನೋದಿಂದ ಬಂದ ಆರ್ಡಿಎಸ್ಓ ಸ್ಥಳ ತನಿಖೆ ಮಾಡಿ ಗರ್ಡರ್ಗೆ ಹೆಚ್ಚುವರಿ ವೆಲ್ಡಿಂಗ್ ಮಾಡುವಂತೆ ಅವಶ್ಯಕತೆ ಯನ್ನು ವಿವರಿಸಿ ಜೋಡಣೆಗೆ ಅನುಮತಿ ನೀಡಿದ್ದಾರೆ ಎಂದರು.
ಬೆಳಗ್ಗೆ 11.30ಯಿಂದ ಎರಡು ಗಂಟೆಗಳ ಕಾಲ ರೈಲನ್ನು ನಿಲ್ಲಿಸಿ ಗರ್ಡರ್ ಜೋಡಣೆಗೆ ಅನುಮತಿ ನೀಡ ಲಾಗಿದೆ. ಆ ನಂತರ ಹಂತಹಂತವಾಗಿ ಮುಂದು ವರೆಸಲಾಗುವುದು. ನಾಳೆ ಬೆಳಗ್ಗೆಯ ಒಳಗೆ ಅಂತಿಮ ರೂಪ ತಲುಪಿ ಇನ್ನೊಂದು ತುದಿಯನ್ನು ತಲುಪುತ್ತದೆ. ಅಲ್ಲಿಂದ ಕಾಮಗಾರಿಗೆ ಇನ್ನಷ್ಟು ವೇಗ ದೊರೆಯು ತ್ತದೆ. ಇದೀಗ ಕೊನೆಯ ಹಂತಕ್ಕೆ ಬಂದಿದ್ದು, ಗರ್ಡರ್ ಸಂಪೂರ್ಣ ಅಳವಡಿಸುವ ಕಾರ್ಯಕ್ಕೆ ಎಂಟು ದಿನ ಗಳು ಬೇಕಾಗುತ್ತದೆ. ಮುಂದೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುತ್ತದೆ. ಆದಷ್ಟು ಬೇಗ ಈ ಕಾರ್ಯ ಮಾಡ ಲಾಗುವುದು ಎಂದು ಸಂಸದರು ತಿಳಿಸಿದರು.
ಈ ಸಂದರ್ಭ ನಗರಸಭೆ ಸದಸ್ಯರಾದ ಗಿರೀಶ್ ಅಂಚನ್, ಅಶೋಕ್ ನಾಯಕ್, ಬಿಜೆಪಿ ಮುಖಂಡ ಕುಯಿಲಾಡಿ ಸುರೇಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ತಿಂಗಳೊಳಗೆ ಕಟಪಾಡಿ ಅಂಡರ್ಪಾಸ್ ಕಾಮಗಾರಿ ಆರಂಭ
ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ ಹಾಗೂ ಸಂತೆಕಟ್ಟೆಯಲ್ಲಿ ಈಗಾಗಲೇ ಕಾಮಗಾರಿ ಆರಂಭಿಸಿವು ರುವುದರಿಂದ ಈ ಮಧ್ಯೆ ಕಟಪಾಡಿ ಯಲ್ಲೂ ಕಾಮಗಾರಿಗೆ ಕೈಗೆತ್ತಿಕೊಂಡರೆ ಸಂಚಾರಕ್ಕೆ ತುಂಬಾ ತೊಂದರೆ ಆಗುತ್ತದೆ. ಸಂತೆಕಟ್ಟೆ ಅಂಡರ್ಪಾಸ್ ಕಾಮಗಾರಿ ಒಂದು ತಿಂಗಳೊಳಗೆ ಮುಗಿಯುವ ನಿರೀಕ್ಷೆ ಇದೆ. ಆ ಕೂಡಲೇ ಕಟಪಾಡಿ ಅಂಡರ್ಪಾಸ್ ಕಾಮಗಾರಿ ಆರಂಭಿಸಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಕರಾವಳಿ ಬೈಪಾಸ್- ಆದಿಉಡುಪಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿ ಏಕಾಏಕಿ ಕಟ್ಟಡ ತೆರವುಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎರಡು ಹಂತದ ಭೂಸ್ವಾಧೀನಕ್ಕೆ ಈಗಾಗಲೇ ಪರಿಹಾರ ನೀಡಲಾಗಿದೆ. 24 ಮಂದಿಯ ಖಾತೆಗೆ ಇಂದು ಪರಿಹಾರ ಹಣ ಬರುತ್ತದೆ. ಇನ್ನು ಉಳಿದವರಿಗೆ ತಾಂತ್ರಿಕ ಸಮಸ್ಯೆಯಿಂದ ಹಣ ಬಂದಿಲ್ಲ ಎಂದು ಹೇಳಿದರು.
ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿಯವರಿಗೆ ತಿಳಿಸಿದ್ದೇನೆ. ಅದಕ್ಕೆ ಪರಿಹಾರ ಸಿಗದ ಮಾಲಕರು ಜಿಲ್ಲಾಧಿಕಾರಿ ಅಥವಾ ರಾಷ್ಟ್ರೀಯ ಹೆದ್ದಾರಿಯವರು ಲಿಖಿತವಾಗಿ ನೀಡಿದರೆ ಜಾಗವನ್ನು ಬಿಟ್ಟು ಕೊಡುವು ದಾಗಿ ಒಪ್ಪಿದ್ದಾರೆ. ಈ ಮಧ್ಯೆ ತೆರವು ಕಾರ್ಯಾಚರಣೆಯಿಂದ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ತೊಂದರೆ ಆಗಿದೆ. ಅವರಿಗೆ ನೋವಾದರೆ ಕ್ಷಮೆ ಕೋರುತ್ತೇನೆ. ಆದರೆ ಕಾಮಗಾರಿ ಮುಂದುವರೆಸುವುದು ಅನಿವಾ ರ್ಯವಾಗಿದೆ ಎಂದು ಅವರು ತಿಳಿಸಿದರು.







