ಸಿದ್ಧಾಪುರ: ಒಂಟಿ ಸಲಗ ಸೆರೆಗೆ ಬಂತು ಸಕ್ರೆಬೈಲಿನ ಮೂರು ಆನೆಗಳು!

ಕುಂದಾಪುರ: ಕಳೆದ ಎರಡು ದಿನಗಳಿಂದ ಸಿದ್ಧಾಪುರ -ಹೊಸಂಗಡಿ ಪರಿಸರದಲ್ಲಿ ಓಡಾಡುತ್ತಿರುವ ಒಂಟಿ ಸಲಗವನ್ನು ಸೆರೆಹಿಡಿಯಲು ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನ ಮೂರು ಆನೆಗಳನ್ನು ಕರೆತರಲಾಗಿದೆ.

ಇಂದು ಸಿದ್ಧಾಪುರ ಸಮೀಪದ ಮತ್ತಿಬೇರು ಅರಣ್ಯದಲ್ಲಿ ಕಾಡಾನೆ ಕಂಡುಬಂದಿದ್ದು, ಈ ಒಂಟಿ ಸಲಗವನ್ನು ಸೆರೆಹಿಡಿಯಲು ಸಕ್ರೆಬೈಲಿನ ಬಹದ್ಧೂರ್, ಬಾಲಣ್ಣ, ಸೋಮಣ್ಣ ಆನೆಗಳು ಸಿದ್ಧಾಪುರಕ್ಕೆ ಬಂದಿವೆ. ನಾಗರಹೊಳೆ ಮತ್ತಿಗೋಡಿನಿಂದ 3 ಆನೆಗಳು ಬರುವ ನಿರೀಕ್ಷೆ ಇದ್ದು, ಕಾರ್ಯಾಚರಣೆಗೆ ಸಕಲ ಸಿದ್ಧತೆ ನಡೆಯುತ್ತಿದೆ.

ಅರಣ್ಯ ಇಲಾಖೆ, ವನ್ಯಜೀವಿ ವಿಭಾಗದ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಸ್ಥಳಕ್ಕೆ ಕುಂದಾಪುರ ಉಪವಿಭಾಗದ ಎಸಿ ರಶ್ಮಿ ಎಸ್.ಆರ್., ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಭೇಟಿ ನೀಡಿ, ಇಲಾಖಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.

Next Story







