ಬೈಂದೂರು: ಭೂಮಿ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಪ್ರತಿಭಟನೆ

ಬೈಂದೂರು: ಬೈಂದೂರು ತಾಲೂಕು ಕೊರಗರ ಭೂಮಿ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಇಲ್ಲಿನ ಪಟ್ಟಣ ಪಂಚಾಯತ್ನಿಂದ ನಮ್ಮ ಭೂಮಿ ನಮ್ಮ ಹಕ್ಕು ಪ್ರತಿಭಟನೆ ರ್ಯಾಲಿ ಬೈಂದೂರು ಪೇಟೆ ಮಾರ್ಗವಾಗಿ ಹೈವೇ ಸರ್ವಿಸ್ ರಸ್ತೆ ಮೂಲಕ ತಾಲೂಕು ಆಡಳಿತಸೌಧ ತಹಶೀಲ್ದಾರ್ ಕಚೇರಿ ಎದುರಿಗೆ ಭೂಮಿ ಸಮಸ್ಯೆ ಬಗ್ಗೆ ಪ್ರತಿಭಟನೆಯನ್ನು ನಡೆಸಲಾಯಿತು.
ಈ ಸಭೆಗೆ ಸಿಐಟಿಯು ಮುಖಂಡರಾದ ರಾಜು ಪಡುಕೋಣೆ, ಸುರೇಶ್ ಕಲ್ಲಗಾರ್, ದಸಂಸ ಸದಸ್ಯರು, ಸಮುದಾಯದ ಮುಖಂಡರು ಭಾಗವಹಿಸಿದರು.
ಬೈಂದೂರು ಶಾಸಕ ಗುರುರಾಜ್ ಗಂಟೆಹೊಳೆ ಆಗಮಿಸಿ ನಮ್ಮ ಮನವಿ ಸ್ವೀಕರಿಸಿದ್ದು ಕೂಡಲೇ ತುರ್ತು ತಹಶೀಲ್ದಾರ್ ಅವರಿಗೆ ಕೊರಗ ಕುಂದುಕೊರತೆ ಸಭೆಯನ್ನು ಕರೆಯಲು ಸೂಚಿಸಿದರು.
ಕುಂದಾಪುರ ಉಪವಿಭಾಗಾಧಿಕಾರಿಗಳ ನಿರ್ದೇಶನದಂತೆ ಗಿರಿಜನ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ ಸ್ಥಳಕ್ಕೆ ಆಗಮಿಸಿ ಮನವಿಯನ್ನು ಸ್ವೀಕರಿಸಿದರು.
ಶಾಸಕರ ಅಧ್ಯಕ್ಷತೆಯಲ್ಲಿ ಎಸಿ ಅವರ ಉಪಸ್ಥಿತಿಯಲ್ಲಿ ಐಟಿಡಿಪಿ ಇಲಾಖೆಯೊಂದಿಗೆ ಬೈಂದೂರು ತಹಶೀಲ್ದಾರ್ರು ತುರ್ತು ಕೊರಗರ ಭೂಮಿ ಸಮಸ್ಯೆ ಬಗ್ಗೆ ಸಭೆ ಕರೆಯಲು ದಿನಾಂಕ ನಿಗದಿಗೊಳಿಸಿ ಸೂಚಿಸಿದ ಬಗ್ಗೆ ಪ್ರತಿಭಟನೆ ಸಭೆಗೆ ತಿಳಿಸಿ ಪ್ರತಿಭಟನೆಯನ್ನು ಕೈಬಿಡುವಂತೆ ಮನವಿ ಮಾಡಿಕೊಂಡಿದ್ದ ರಿಂದ ಕೊರಗ ಸಮುದಾಯದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಹಾಗೂ ಬೇಡಿಕೆ ಈಡೇರದಿದ್ದಲ್ಲಿ ಮುಂದೆಯೂ ಸಂಘಟಿತ ಹೋರಾಟವನ್ನು ಮಾಡುವುದು ಎಂದು ತೀರ್ಮಾನಿಸಲಾಯಿತು.