Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಕಾರ್ಕಳ| ಎಸ್.ವೈ.ಎಸ್ ವತಿಯಿಂದ...

ಕಾರ್ಕಳ| ಎಸ್.ವೈ.ಎಸ್ ವತಿಯಿಂದ ಸರ್ವಧರ್ಮಗಳ ‘ಸೌಹಾರ್ದ ಸಂಚಾರʼ

ವಾರ್ತಾಭಾರತಿವಾರ್ತಾಭಾರತಿ14 July 2025 9:29 PM IST
share
ಕಾರ್ಕಳ| ಎಸ್.ವೈ.ಎಸ್ ವತಿಯಿಂದ ಸರ್ವಧರ್ಮಗಳ ‘ಸೌಹಾರ್ದ ಸಂಚಾರʼ

ಕಾರ್ಕಳ : ಸರ್ವಧರ್ಮ ಸಮನ್ವಯದ ಸೌಹಾರ್ದತೆಯ ಸಂಚಾರ ಇಂದು ಕಾರ್ಕಳ ಜಾಮಿಯಾ ಮಸೀದಿಯಿಂದ ಕಾರ್ಕಳ ಬಸ್ ನಿಲ್ದಾಣದ ವರೆಗೆ ವಿವಿಧ ಧರ್ಮಗಳ ಧರ್ಮಗುರುಗಳ ಹಾಗೂ ಧಾರ್ಮಿಕ ನಾಯಕರ ಕೂಡುವಿಕೆಯಿಂದ ನಡೆಯಿತು.

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ಕರಾವಳಿ ಕರ್ನಾಟಕದಲ್ಲಿ ಕೋಮು ಸೌಹಾರ್ದವನ್ನು ಬಲಪಡಿಸುವ ಉದ್ದೇಶದಿಂದ ಹೃದಯ ಹೃದಯಗಳನ್ನು ಬೆಸೆಯೋಣ ಎಂಬ ಧೈಯವಾಕ್ಯದೊಂದಿಗೆ ಹಮ್ಮಿಕೊಳ್ಳಲಾದ ’ಸೌಹಾರ್ದ ಸಂಚಾರ’ವನ್ನು ಕಾರ್ಕಳ ಬಸ್ಟ್ಯಾಂಡ್ ವಠಾರದಲ್ಲಿ ಸಾರ್ವಜನಿಕರನ್ನು ದ್ದೇಶಿಸಿ ಮಾತನಾಡಿದ ಎಮ್ ಎಸ್ ಎಮ್ ಅಬ್ದುಲ್ ರಶೀದ್ ಝೈನಿ ಖಾಮಿಲ್ ಸಖಾಫಿ, ನಡಿಗೆ ಹೃದಯದ ಸಂಚಲನ ಉತ್ತಮಗೊಳಿಸಿದರೆ ಸೌಹಾರ್ದ ನಡಿಗೆ ಮನುಷ್ಯನ ಮನಸ್ಸು ಮನಸ್ಸುಗಳ ಸೌಹಾರ್ದತೆಯನ್ನು ಅಮರಗೊಳಿಸುತ್ತದೆ. ಭಾರತದ ವಿಶಾಲ, ಅದ್ಭುತ, ಉಜ್ವಲ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮನ ಮನಸ್ಸುಗಳನ್ನು ಜೋಡಿಸುವ ಸೌಹಾರ್ದತೆಯ ಕೊಂಡಿಗಳಾದ ನಾವು ಆಚಾರ, ವಿಚಾರ, ಕರ್ಮ, ಧರ್ಮ, ಬೇರೆ ಬೇರೆಯಾದ ಧರ್ಮಗಳ ಅನುಯಾಯಿಗಳಾಗಿದ್ದರೂ ಎಲ್ಲಾ ಧರ್ಮಗಳ ಸಾರ ಒಂದೇ ಆಗಿದೆ. ದೇಶದಲ್ಲಿ ಸಾವಿರಾರು ಭಾಷೆ ಚಾಲ್ತಿಯಲ್ಲಿದ್ದರೂ ಹೃದಯದ ಭಾಷೆ ಒಂದೇ ಆಗಿದೆ. ಮನುಷ್ಯನ ಆರ್ಥವತ್ತಾದ, ನಿಷ್ಕಲ್ಮಶ, ನಿಷ್ಕಳಂಕ ಮಾತು ಮನುಷ್ಯನ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಲಿದೆ ಎಂದರು.

ಮೂಡಬಿದ್ರಿ ಜೈನ ಮಠದ ಧರ್ಮಗುರುಗಳಾದ ಸ್ವಸ್ತಿಶ್ರೀ ಶ್ರೀ ಚಾರು ಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಮಾತನಾಡಿ, ತಮ್ಮ ಧರ್ಮಗಳನ್ನು ಶ್ರದ್ಧೆಯಿಂದ ಆಚರಿಸುವ ಜೊತೆಗೆ ಇತರ ಧರ್ಮ ಗಳನ್ನ ಗೌರವಿಸಬೇಕು, ಪರಧರ್ಮವನ್ನು ಗೌರವಿಸಿದರೆ ಮಾತ್ರ ವಸುದೈವ ಕುಟುಂಬಕಮ್ ಎಂಬ ನಮ್ಮ ಧ್ಯೇಯ ವಾಕ್ಯ ನಮ್ಮ ಸಂಸ್ಕೃತಿ, ನಮ್ಮ ಧರ್ಮದ ಸಾರವನ್ನು ಎತ್ತಿ ಹಿಡಿದಂತಾಗುತದೆ. ನಮ್ಮ ದೇಶಾ ಭಿಮಾನ, ಶಾಂತಿ, ಸೌಹಾರ್ದತೆ, ಮಾನವ ಧರ್ಮ ನೆಲೆ ನಿಲ್ಲುವವರೆಗೆ ನಾವು ಯಾರು ವಿರಮಿಸಬಾ ರದು ಎಂದು ಅವರು ಕರೆ ನೀಡಿದರು.

ಇತಿಹಾಸ ಪ್ರಸಿದ್ಧ ಕಾರ್ಕಳ ಅತ್ತೂರು ರೆವರೆಂಡ್ ಫಾದರ್ ಅಲ್ವಿನ್ ಡಿಸೋಜ ಮಾತನಾಡಿ ನಮ್ಮ ನಾಡಿನಲ್ಲಿ ಸ್ವರ್ಗ ರಾಜ್ಯ ಕಟ್ಟೋದು ನಮ್ಮ ಧರ್ಮ, ಮನುಷ್ಯ ಮನುಷ್ಯನನ್ನು ಪ್ರೀತಿಸಿ ಗೌರವಿಸುವುದೇ ನಿಜವಾದ ಧರ್ಮ. ಮನುಷ್ಯರೆಲ್ಲರೂ ಒಂದಾಗಿ ಶಾಂತಿ ಸೌಹಾರ್ದತೆ ಪರಧರ್ಮ ಸಹಿಷ್ಣುತೆಯಿಂದ ಬೇರೆ ಧರ್ಮಗಳನ್ನು ಗೌರವದಿಂದ ಬಾಳಿ ಬದುಕಿದಾಗ ರಾಷ್ಟ್ರೀಯ ಏಕತೆ ಸಾಧ್ಯ. ಮಾನವೀಯತೆ ಮನುಷ್ಯನ ಮೂಲ ಮಂತ್ರ ವಾಗಬೇಕು ಎಂದರು.

ವೆಂಕಟರಮಣ ದೇವಳದ ಆಡಳಿತ ಮುಕ್ತೇಸರ ಉಲ್ಲಾಸ್ ಶೆಣೈ ಮಾತನಾಡಿ, ದೇವರು ಪ್ರಾಣಿಗಳಿಗೆ ಮನುಷ್ಯನ ಹಾಗೆ ಬುದ್ಧಿ ನೀಡಲಿಲ್ಲ ಬದಲಾಗಿ ದೇವರು ಮನುಷ್ಯನಿಗೆ ಬುದ್ಧಿ, ಜ್ಞಾನ ಅರಿವು ನೀಡಿದ್ದಾನೆ. ಪ್ರಾಣಿಗಳಲ್ಲಿ ಮೃಗಿಯ ವರ್ತನೆ ತಮ್ಮ ಆಹಾರಕ್ಕಾಗಿ ಹೊರತು ತೊಂದರೆಗೊಳಿಸುವುದಕ್ಕಾಗಿ ಅಲ್ಲ. ನಾವು ಅದನ್ನು ಮರೆತು ಮೃಗಗಳಾಗುವುದನ್ನು ಬಿಟ್ಟು ಮನುಷ್ಯರಾಗುವುದನ್ನು ಕಲಿಯಬೇಕು. ಈ ಸೌಹಾರ್ದ ನಡಿಗೆಯಲ್ಲಿ ಅರಿವಿನ ಗುರುಗಳ ಮಾರ್ಗದರ್ಶನ ಚೆನ್ನಾಗಿ ಮೂಡಿ ಬಂದಿದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಎಸ್‌ವೈಎಸ್‌ ಉಪಾಧ್ಯಕ್ಷರಾದ ಅಸ್ಸೈಯ್ಯದ್ ಇಲ್ಯಾಸ್ ತಂಙಳ್ ಕೊಡಗು, ಸೌಹಾರ್ದ ಸಂಚಾರ ಕರ್ನಾಟಕ ಸ್ವಾಗತ ಸಮಿತಿ ಅಧ್ಯಕ್ಷ ಅಸೈಯದ್ ಮೊಹಮ್ಮದ್ ಶಾಫಿ ನಯೀಮಿ ತಂಙಳ್ ಹಾಸನ, ಎಸ್ ವೈ ಎಸ್ ರಾಜ್ಯ ಅಧ್ಯಕ್ಷ ಬಶೀರ್ ಸಅದಿ ಆಪ್ಲ್ಯಾಳಿ ಬೆಂಗಳೂರ್, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಮೊಂಟುಗೊಳಿ, ಎಸ್ ವೈ ಎಸ್ ಮುಖಂಡ ಮೊಹಮ್ಮದ್ ಅಲಿ ಸಖಾಫಿ ಸುರಿಬೈಲ್, ತ್ವಯಿಭಾ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಅಹ್ಮದ್ ಶರೀಫ್ ಸಹದಿ ಕಿಲ್ಲೂರ್, ಎಸ್ ವೈ ಎಸ್ ಕಾರ್ಕಳ ವಲಯ ಅಧ್ಯಕ್ಷ ಸುಲೈಮಾನ್ ಸಹದಿ ಅಪ್ಲಲಿ ಹೊಸ್ಮಾರು, ಪ್ರ.ಕಾರ್ಯದರ್ಶಿ ಕೆ.ಎಂ.ಸಿದ್ದೀಖ್ ಮೋಂಟುಗೋಳಿ, ಕೋಶಾಧಿಕಾರಿ ಮನ್ಸೂರ್ ಶಿವಮೊಗ್ಗ, ಸ್ವಾಗತ ಸಮಿತಿ ಚೇರ್ಮನ್ ನಿಟ್ಟೆ ಮುಹ್ಯಿದ್ದೀನ್ ಹಾಜಿ, ಕಾಂಗ್ರೆಸ್ ನಾಯಕ ಶುಭದ ರಾವ್, ಶೇಕ್ ಶಬ್ಬೀರ್ ಮಿಯ್ಯಾರು, ಕರ್ನಾಟಕ ಮುಸ್ಲಿಂ ಜಮಾತ್ ಕಾರ್ಕಳ ಅಧ್ಯಕ್ಷ ನಾಸಿರ್ ಶೇಕ್, ದ.ಸಂ.ಸ ಮುಖ್ಯಸ್ಥ ಅಣ್ಣಪ್ಪ ನಕ್ರೆ, ಕ.ರ.ವೇ ಅಧ್ಯಕ್ಷ ಇಮ್ರಾನ್, ಹನೀಫ್, ಕೌನ್ಸಿಲರ್ ಅಶ್ಫಾಖ್ ಅಹ್ಮದ್ ಉಪಸ್ಥಿತರಿದ್ದರು.

N.C.ರಹೀಂ ಕಾರ್ಯಕ್ರಮ ನಿರೂಪಿಸಿದರು. ಹುಸೈನ್ ಸ'ಅದಿ ಹೊಸ್ಮಾರ್ ಸ್ವಾಗತಿಸಿ, ಕಿಲ್ಲೂರು ಶರೀಫ್ ಸಅದಿ ಧನ್ಯವಾದವಿತ್ತರು.









share
ವಾರ್ತಾಭಾರತಿ
ವಾರ್ತಾಭಾರತಿ
Next Story
X