ತೊಟ್ಟಂ ಚರ್ಚಿನ ಪಾಲಕರ ಸ್ಮರಣೆಯ ಮಹೋತ್ಸವ

ಮಲ್ಪೆ: ದೇವರು ಮಾನವರ ಮೇಲೆ ತೋರುವ ಪ್ರೀತಿ ಶಾಶ್ವತ ವಾಗಿದ್ದು ಅದಕ್ಕೆ ಎಂದಿಗೂ ಅಂತ್ಯವಿರು ವುದಿಲ್ಲ. ದೇವರಲ್ಲಿ ನಮ್ಮ ವಿಶ್ವಾಸವನ್ನು ಕಡಿಮೆಗೊಳಿಸದೆ ಜೀವಿಸಿದಾಗ ಎಂದಿಗೂ ನಿಷ್ಕ್ರೀಯಗೊಳಿ ಸಲು ಬಿಡುವುದಿಲ್ಲ ಎಂದು ಮಂಗಳೂರು ಬಿಕರ್ನಕಟ್ಟೆ ಇನ್ ಫೆಂಟ್ ಜೀಸಸ್ ಚರ್ಚಿನ ವಂ.ಸ್ಟೀಫನ್ ಪಿರೇರಾ ಹೇಳಿದ್ದಾರೆ.
ತೊಟ್ಟಂ ಚರ್ಚಿನ ಪಾಲಕರಾದ ಸಂತ ಅನ್ನಮ್ಮ ಮತ್ತು ಸಂತ ಜೋಕಿಮ್ ಅವರ ವಾರ್ಷಿಕ ಸ್ಮರಣೆಯ ಪವಿತ್ರ ಬಲಿಪೂಜೆಯ ನೇತೃತ್ವ ವಹಿಸಿ ಅವರು ಶನಿವಾರ ಸಂದೇಶ ನೀಡಿದರು.
ಚರ್ಚಿನ ಪ್ರಧಾನ ಧರ್ಮಗುರು ವಂ.ಡೆನಿಸ್ ಡೆಸಾ ಮಾತನಾಡಿ, ಸಂತ ಅನ್ನಮ್ಮ ಮತ್ತು ಸಂತ ಜೋಕಿಮ್ ಹಿರಿಯರ ಪಾಲಕಿಯರಾಗಿದ್ದು ಇಂದಿನ ದಿನಗಳಲ್ಲಿ ನಮ್ಮ ವೃದ್ಧ ಅಜ್ಜ ಅಜ್ಜಿಯಂದಿರನ್ನು ಮನೆಯಲ್ಲಿ ಇರಿಸದೆ ಆಶ್ರಮಗಳಲ್ಲಿ ಇರಿಸುವುದನ್ನು ಹೆಚ್ಚಾಗಿ ಕಾಣುತ್ತೇವೆ. ಹಿರಿ ಜೀವಗಳು ಮಕ್ಕಳಿಗೆ ಮೌಲ್ಯಗಳನ್ನು ಕಲಿಸುವುದರೊಂದಿಗೆ ಉತ್ತಮ ಜೀವನ ನಡೆಸಲು ಮಾರ್ಗ ದರ್ಶಕರಾಗಿದ್ದಾರೆ. ಅವರು ಕಲಿಸುವ ತಾಳ್ಮೆ ಹಾಗೂ ಸಹನೆಯ ಪಾಠಗಳು ಸದಾ ನಮಗೆ ದಾರಿದೀಪವಾಗುತ್ತದೆ ಎಂದರು.
ಹಬ್ಬದ ಆಚರಣೆಗೆ ಪ್ರಾಯೋಜಕತ್ವ ವಹಿಸಿದವರನ್ನು ಬಲಿಪೂಜೆಯ ಸಂದರ್ಭದಲ್ಲಿ ಗೌರವಿಸಲಾಯಿತು. ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಉಡುಪಿ ವಲಯ ಪ್ರಧಾನ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್, ಪೆರ್ನಾಲ್ ಚರ್ಚಿನ ಧರ್ಮಗುರು ವಂ.ಜೆರೋಮ್ ಮೊಂತೆರೋ, ವಂ.ವಿನ್ಸೆಂಟ್ ಕ್ರಾಸ್ತಾ, ವಂ.ಸುನೀಲ್ ಡಿಸಿಲ್ವಾ, ವಂ.ಪಿಲಿಪ್ ನೆರಿ ಆರಾನ್ಹಾ, ವಂ.ವಿಕ್ಟರ್ ಡಿಸೋಜ, ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ, ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫೆರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು.







