ಜನಪದ ವೈದ್ಯಸಿರಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಉಡುಪಿ, ಜು.26: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಜಾನಪದ ವೈದ್ಯಕೀಯ ಸಂಶೋಧನಾ ಕೇಂದ್ರದ ಮೂಲಕ ನೀಡುವ ರಾಜ್ಯ ಮಟ್ಟದ ಜನಪದ ವೈದ್ಯಸಿರಿ ಪ್ರಶಸ್ತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕನಿಷ್ಠ 15 ವರ್ಷ ಸೇವಾನುಭವವುಳ್ಳ ಕರ್ನಾಟಕದ ನುರಿತ ನಾಟಿವೈದ್ಯರು ಅಥವಾ ಅವರ ಪ್ರತ್ಯಕ್ಷ ಮಾಹಿತಿಯುಳ್ಳವರು ಆಯಾ ಗ್ರಾಮ ಪಂಚಾಯತಿನ ಅಧ್ಯಕ್ಷರ ಶಿಫಾರಸು ಪತ್ರದೊಂದಿಗೆ ಕಳುಹಿಸಲು ವಿನಂತಿಸಲಾಗಿದೆ.
ಸಂಪೂರ್ಣ ಹೆಸರು, ಇತ್ತೀಚಿಗಿನ ಭಾವಚಿತ್ರ, ವಯಸ್ಸು, ವಿದ್ಯಾಭ್ಯಾಸ, ವೃತ್ತಿ, ಲಿಂಗ, ಖಾಯಂ ವಿಳಾಸ, ದೂರವಾಣಿ ಸಂಖ್ಯೆ, ಯಾವ ಕಾಯಿಲೆಯ ಚಿಕಿತ್ಸೆಗೆ ಪರಿಣತರು, ಗುರುವಿನ ಹೆಸರು, ಎಷ್ಟು ವರ್ಷದ ಅನುಭವ, ಬಳಸುವ ಔಷಧ ಮೂಲಗಳು (ಸಸ್ಯ/ಖನಿಜ), ಸ್ವಂತ ಔಷಧಿ ತಯಾರಿಸುತ್ತಾರೆಯೇ, ಹಳೆಯ ಗ್ರಂಥಗಳಿವೆಯೇ, ಅನುಭವದ ದಾಖಲಾತಿ ಇದೆಯೋ, ಇತರೆ ಪ್ರಮಾಣಪತ್ರ, ಇತರೆ ಸನ್ಮಾನಪತ್ರ ಇದೆಯೋ ಎಂಬುದರ ಬಗ್ಗೆ ವಾಹಿತಿಯನ್ನು ಪ್ರಾಂಶುಪಾಲರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕುತ್ಪಾಡಿ ಅಂಚೆ, ಉಡುಪಿ ಜಿಲ್ಲೆ - 574118 ವಿಳಾಸಕ್ಕೆ ಆ.25ರ ಒಳಗಾಗಿ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.





