ಉಡುಪಿ ವಲಯ ಮಟ್ಟದ ಐಸಿವೈಎಂ ಯುವಜನರ ಸಮಾವೇಶ

ಉಡುಪಿ: ಉಡುಪಿ ವಲಯ ಮಟ್ಟದ ಐಸಿವೈಎಂ ಯುವಜನರ ಸಮಾವೇಶ ’ಯುವ ಸಮಾಗಮ್ 2025’ ಮೂಡುಬೆಳ್ಳೆ ಸಂತ ಲೊರೆನ್ಸ್ ಚರ್ಚ್ ವಠಾರದಲ್ಲಿರುವ ಸಮುದಾಯ ಭವನದಲ್ಲಿ ಜರಗಿತು.
ಮೂಡುಬೆಳ್ಳೆ ಸಂತ ಲಾರೆನ್ಸರ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ವಂ.ಜೊರ್ಜ್ ತೋಮಸ್ ಧ್ವಜಾರೋಹಣ ನೆರವೇರಿಸಿದರು. ಯುಪಿಎಸ್ಸಿ ನಾಗರಿಕ ಸೇವಾ ಸಾಧಕ ಶ್ರೇಯಾಂಸ್ ಗೋಮ್ಸ್ ಉಡುಪಿ ವಲಯದ ವಿವಿಧ ಘಟಕಗಳ ಹೆಸರು ಮತ್ತು ಲೋಗೊವನ್ನು ಅನಾವರಣ ಗೊಳಿಸುವುದ ರೊಂದಿಗೆ ’ಯುವ ಸಮಾಗಮ್ 2025’ಕ್ಕೆ ಚಾಲನೆ ನೀಡಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಸೈಬರ್ ಕ್ರೈಂ ವಿಷಯದ ಬಗ್ಗೆ ಯುವ ವಕೀಲ ರಾಯನ್ ಫೆರ್ನಾಂಡಿಸ್ ಮಾಹಿತಿ ನೀಡಿದರು. ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉಡುಪಿ ವಲಯದ ವಿವಿಧ ಘಟಕಗಳ ಐಸಿವೈಎಂ ಸದಸ್ಯರಿಗೆ ಹಮ್ಮಿಕೊಳ್ಳಲಾಗಿತ್ತು. ಮೂಡುಬೆಳ್ಳೆ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಪ್ರಿತೇಶ್ ಡೇಸಾ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ವಲಯದ ಪ್ರಧಾನ ಧರ್ಮಗುರುಗಳಾದ ಅತಿ ವಂ.ಚಾರ್ಲ್ಸ್ ಮಿನೆಜಸ್ ವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪೆರಂಪಳ್ಳಿ ಘಟಕದ ಐಸಿವೈಎಂ ಸದಸ್ಯರು ಸಮಗ್ರ ಪ್ರಶಸ್ತಿ ಪಡೆದರೆ ಉದ್ಯಾವರ ಘಟಕದ ಐಸಿವೈಎಂ ಸದಸ್ಯರು ರನ್ನರ್ಸ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಈ ಸಂದರ್ಭ ದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಉಡುಪಿ ಧರ್ಮಪ್ರಾಂತ್ಯದ ಐಸಿವೈಎಂ ನಿರ್ದೇಶಕ ವಂ.ಸ್ಟೀವನ್ ಫೆರ್ನಾಂಡಿಸ್, ಉಡುಪಿ ವಲಯದ ಐಸಿವೈಎಂ ಮಾಜಿ ಅಧ್ಯಕ್ಷ ಸ್ಟೀವನ್ ಕುಲಾಸೊ, ಉಡುಪಿ ವಲಯದ ಯುವಜನರ ನಿರ್ದೇಶಕ ವಂ. ರಾಜೇಶ್ ಪಸನ್ನ, ಮೂಡುಬೆಳ್ಳೆ ಸಂತ ಲಾರೆನ್ಸರ ದೇವಾಲಯದ ಸಹಾಯಕ ಧರ್ಮಗುರುಗಳಾದ ವ.ರಿಕ್ಸನ್ ಮೊಟತೆರೊ, ಐಸಿವೈಎಂ ಮೂಡುಬೆಳ್ಳೆ ಘಟಕ ಅಧ್ಯಕ್ಷ ಆರೋನ್ ಬರ್ಬೋಜಾ ಉಪಸ್ಥಿತರಿದ್ದರು.
ಉಡುಪಿ ವಲದ ಐಸಿವೈಎಂ ಕಾರ್ಯದರ್ಶಿ ಶರನ್ ಕ್ರಾಸ್ಟೋ ಸ್ವಾಗತಿಸಿದರು. ಅಧ್ಯಕ್ಷ ರೋವಿನ್ ಪಿರೇರಾ ಕಲ್ಮಾಡಿ ಮತ್ತು ಅಶ್ಲಿಟ ಮೆಂಡೊನ್ಸಾ ವಂದಿಸಿದರು. ಡೇನ್ ಮೆಂಡೊನ್ಸಾ, ಮೆಲಿಶಾ ಡಿಸೋಜ ಮತ್ತು ರೋವಿನಾ ಡೆಸಾ ಕಾರ್ಯಕ್ರಮ ನಿರೂಪಿಸಿದರು.







