Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಕುಂದಾಪುರ, ಬೈಂದೂರಿನಲ್ಲಿ ಹಂದಿಗಳ ಸರಣಿ...

ಕುಂದಾಪುರ, ಬೈಂದೂರಿನಲ್ಲಿ ಹಂದಿಗಳ ಸರಣಿ ಸಾವು ಪ್ರಕರಣ| ಗೊಂದಲಕ್ಕೊಳಗಾಗದೇ ಜಾಗೃತರಾಗಿ: ಜನತೆಗೆ ಅಧಿಕಾರಿಗಳ ಸೂಚನೆ

ವಾರ್ತಾಭಾರತಿವಾರ್ತಾಭಾರತಿ14 July 2026 10:45 PM IST
share
ಕುಂದಾಪುರ, ಬೈಂದೂರಿನಲ್ಲಿ ಹಂದಿಗಳ ಸರಣಿ ಸಾವು ಪ್ರಕರಣ| ಗೊಂದಲಕ್ಕೊಳಗಾಗದೇ ಜಾಗೃತರಾಗಿ: ಜನತೆಗೆ ಅಧಿಕಾರಿಗಳ ಸೂಚನೆ
► ‘ಆಫ್ರಿಕನ್ ಸ್ವೈನ್ ಫೀವರ್ ಹಂದಿಗಳಿಂದ ಹಂದಿಗಳಿಗೆ ಹರಡುವ ಕಾಯಿಲೆ ► ಮನುಷ್ಯರಿಗೆ, ಇತರ ಯಾವುದೇ ಪ್ರಾಣಿಗಳಿಗೆ ಇದು ಹರಡುವುದಿಲ್ಲ

ಕುಂದಾಪುರ, ಜು.14: ಬೈಂದೂರು ಭಾಗದ ಕಾಡಂಚಿನ ಗ್ರಾಮಗಳಲ್ಲಿ ಕಾಡು ಹಂದಿಗಳು ಹಾಗೂ ಸೇನಾಪುರ ಸೇರಿದಂತೆ ಇತರ ಕಡೆಗಳಲ್ಲಿ ಸಾಕು ಹಂದಿಗಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿ ಮರಣೋತ್ತರ ಪರೀಕ್ಷಾ ವರದಿ ಈವರೆಗೆ ಬಂದಿಲ್ಲ. ಮೂಲಗಳ ಪ್ರಕಾರ ಆಫ್ರಿಕನ್ ಸ್ವೈನ್ ಫೀವರ್ ಕಾಯಿಲೆಯಿಂದಾಗಿ ಹಂದಿಗಳು ಈ ರೀತಿ ಸರಣಿಯಲ್ಲಿ ಸಾಯುತ್ತಿರಬಹುದು ಎಂಬ ಶಂಕೆಯನ್ನು ಇಲಾಖೆಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಈಗಾಗಲೇ 2 ಕಾಡು ಹಂದಿ ಹಾಗೂ 1 ನಾಡ ಹಂದಿಯ ಮರಣೋತ್ತರ ಪರೀಕ್ಷಾ ಮಾದರಿಯನ್ನು ಮಂಗಳೂರು ಹಾಗೂ ಬೆಂಗಳೂರಿನ ಭಾರತೀಯ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆ (ಪ್ರಯೋಗಾಲಯ)ಗೆ ಕಳುಹಿಸಲಾ ಗಿದ್ದು ಇದರ ವರದಿ ಇನ್ನಷ್ಟೇ ಬರಬೇಕಿದೆ. ಆ ಬಳಿಕವಷ್ಟೇ ಹಂದಿಗಳ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಅವರು ಹೇಳುತ್ತಾರೆ.

ಜನರಲ್ಲಿ ಕಾಣಿಸುವ ಹಂದಿ ಜ್ವರಕ್ಕೂ, ಹಂದಿಗಳಲ್ಲಿ ಕಂಡುಬರುವ ಜ್ವರಕ್ಕೂ ಬಾರೀ ವ್ಯತ್ಯಾಸವಿದೆ. ಜನರಲ್ಲಿ ಈ ಬಗ್ಗೆ ಆತಂಕ, ಗೊಂದಲ ಬೇಡ. ಆದರೆ ಅಗತ್ಯ ಎಚ್ಚರಿಕೆ ಜೊತೆಗೆ ಅಧಿಕಾರಿಗಳ ಜೊತೆಗೆ ಸಂವಹನ, ಮಾಹಿತಿ ವಿನಿಮಯ ಇರಲಿ ಎಂದು ಅವರು ಸಲಹೆ ನೀಡಿದ್ದಾರೆ.

ಏನಿದು ಆಫ್ರಿಕನ್ ಸ್ವೈನ್ ಫೀವರ್?: ಹಂದಿಗಳಿಗೆ ಪ್ರಮುಖವಾಗಿ ಮೂರು ರೀತಿಯ ರೋಗ ಬರುತ್ತವೆ. ಆಫ್ರಿಕನ್ ಸ್ವೈನ್ ಫೀವರ್, ಕ್ಲಾಸಿಕಲ್ ಸ್ವೈನ್ ಫೀವರ್ ಹಾಗೂ ಹೆಮರೇಜಿಕ್ ಸೆಫ್ಟಿ ಸೀಮಿಯಾ (ಗರಳೆ ರೋಗ). ಕ್ಲಾಸಿಕಲ್ ಸ್ವೈನ್ ಫೀವರ್ ಹಾಗೂ ಗರಳೆ ರೋಗಕ್ಕೆ ಚಿಕಿತ್ಸೆ ಹಾಗೂ ಲಸಿಕೆಯೂ ಇದೆ. ಆದರೆ ಆಫ್ರಿಕನ್ ಸ್ವೈನ್ ಫೀವರ್ ಯಾವುದೇ ರೀತಿಯ ಚಿಕಿತ್ಸೆಯಾಗಲೀ, ಲಸಿಕೆಯಾಗಲಿ ಇಲ್ಲ. ಇದು ವೈರಸ್‌ನಿಂದ ಬರುವ ಕಾಯಿಲೆ. ಒಂದೊಂದು ಪ್ರದೇಶದಲ್ಲಿ ಕೆಲವೊಮ್ಮೆ ಹೆಚ್ಚಾಗಿ ಕಂಡುಬರುತ್ತದೆ.

ಈ ರೋಗ ಮೊದಲಿಗೆ ಕಂಡು ಬಂದಿದ್ದು ಆಫ್ರಿಕನ್ ದೇಶಗಳಲ್ಲಿ. ಹೀಗಾಗಿ ಇದಕ್ಕೆ ಆಫ್ರಿಕನ್ ಸ್ಟೈನ್ ಫೀವರ್ ಎಂದು ಹೆಸರಿಡಲಾಯಿತು. ಭಾರತದಲ್ಲಿ ಮೊದಲಿಗೆ ಈಶಾನ್ಯ ರಾಜ್ಯಗಳಾದ ಅಸ್ಸಾಂನಲ್ಲಿ ಕಂಡು ಬಂದಿತ್ತು. ಚೀನದ ಮೂಲಕ ಅದು ಭಾರತವನ್ನು ಪ್ರವೇಶಿಸಿತ್ತು. ಆ ಬಳಿಕ ದೇಶ ವ್ಯಾಪಿ ಹಲವೆಡೆ ಅದು ಕಂಡುಬಂದಿದೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳ್ಳೆಯಲ್ಲಿ 4 ವರ್ಷಗಳ ದ ಹಿಂದೆ ಹಂದಿ ಫಾರ್ಮೋಂದರಲ್ಲಿ ಇದು ಕಂಡು ಬಂದಿತ್ತು. ಆ ವೇಳೆ ಅಲ್ಲಿ ಕೆಲವೊಂದು ಮುನ್ನೆಚ್ಚರಿಕೆ ಕ್ರಮಕೈಗೊಂಡು, ರೋಗವನ್ನು ನಿಯಂತ್ರಣಕ್ಕೆ ತರಲಾಗಿತ್ತು.

ರೋಗದ ಲಕ್ಷಣಗಳೇನು?: *ಕಾಡು/ ಸಾಕು ಹಂದಿಗಳಲ್ಲಿ ಮೊದಲಿಗೆ ಜ್ವರ ಬರುತ್ತದೆ. *ಅನಂತರ ನಿಶ್ಯಕ್ತಿ, ಉಸಿರಾ ಟದ ತೊಂದರೆ, ಆಹಾರ ಸೇವನೆ ಮಾಡುವುದಿಲ್ಲ. ಕೆಲವೊಮ್ಮೆ ಬೇಧಿ ಉಂಟಾಗುತ್ತದೆ. * ಈ ಜ್ವರ ಬಂದರೆ ಕೆಲವೇ ಗಂಟೆಗಳಲ್ಲಿ ಹಂದಿಗಳು ಸಾಯುತ್ತವೆ. ಬೆಳಗ್ಗೆ ರೋಗ ಕಾಣಿಸಿಕೊಂಡರೆ, ಸಂಜೆಯೊಳಗೆ ಸಾವನ್ನಪ್ಪುತ್ತವೆ. ಕ್ಷಿಪ್ರಗತಿಯಲ್ಲಿ ಹಂದಿಯಿಂದ ಹಂದಿಗೆ ನೀರು, ಗಾಳಿ, ದೈಹಿಕ ಸಂಪರ್ಕದ ಮೂಲಕ ಹರಡುತ್ತದೆ. ಬೇರೆ ಪ್ರಾಣಿಗಳಿಗೆ ಅಥವಾ ಮನುಷ್ಯರಿಗೆ ಈ ರೋಗ ಹರಡುವುದಿಲ್ಲ.

ಹೇಗೆ ಬರಬಹುದು?: ಸೀಮಿತ ಅವಧಿಯ ಹವಾಮಾನ ವೈಪರೀತ್ಯ, ಹಂದಿಗಳಲ್ಲಿ ರೋಗ ನಿರೋಧಕ ಶಕ್ತಿ ಕಮ್ಮಿಯಾದಾಗ, ಕಲುಷಿತ ನೀರಿನ ಸೇವನೆ ಮೊದಲಾದ ಕಾರಣಗಳಿಂದಲೂ ಪೋಗ ಬರುವ ಸಾಧ್ಯತೆಗಳಿದೆ. ಸಾಕು ಹಂದಿಗಳಲ್ಲಿಯೇ ಇದು ಕಂಡುಬಂದಿರುವ ಸಾಧ್ಯತೆ ಇರಬಹುದು. ಆ ಕಾಯಿಲೆಯಿಂದ ಸತ್ತ ಹಂದಿಯನ್ನು ಯಾರಾದರೂ ಕಾಡಿಗೆ ಎಸೆದರೆ ಆ ಮೂಲಕ ಕಾಡಿನ ಹಂದಿಗಳಿಗೂ ಹರಡುವ ಸಾಧ್ಯತೆ ಇರುತ್ತದೆ ಎಂದು ಅಭಿಪ್ರಾಯವನ್ನು ಇಲಾಖಾ ತಜ್ಞರು ವ್ಯಕ್ತಪಡಿಸುತ್ತಾರೆ.

ಪಶ್ಚಿಮ ಘಟ್ಟದಲ್ಲಿರುವ ಹಂದಿಗಳಿಗೆ ಅಪಾಯ?

ಪಶ್ಚಿಮ ಘಟ್ಟ ಪ್ರದೇಶದಲ್ಲಿ 15-20 ಸಾವಿರ ಕಾಡುಹಂದಿಗಳಿರಬಹುದು ಎಂಬ ಅಂದಾಜಿದೆ. ಇತ್ತೀಚೆಗೆ ಕುಂದಾಪುರ, ಬೈಂದೂರು ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಹತ್ತಾರು ಹಂದಿಗಳು ಸಾವನ್ನಪ್ಪಿವೆ. ಒಂದು ವೇಳೆ ಇವು ಆಫ್ರಿಕನ್ ಸ್ವೈನ್ ಫೀವರ್‌ನಿಂದಲೇ ಸಾವನ್ನಪ್ಪಿದ್ದರೆ, ಹಂದಿಗಳಿಂದ ಹಂದಿಗೆ ಹರಡುವ ಕಾಯಿಲೆಯಾದ ಕಾರಣ ಇಡೀ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿರುವ ಕಾಡುಹಂದಿಗಳಿಗೂ ಇದು ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ.

ನಿಯಂತ್ರಣದ ಕ್ರಮಗಳೇನು?: ಹಂದಿಗಳು ಆಫ್ರಿಕನ್ ಸ್ವೈನ್ ಫೀವರ್ ನಿಂದಲೇ ಸಾಯುತ್ತಿರುವುದು ಖಚಿತ ಗೊಂಡರೆ, ಹಂದಿ ಫಾರ್ಮ್‌ನವರು ಕೂಡ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಇದಕ್ಕೆ ಯಾವುದೇ ಚಿಕಿತ್ಸೆ, ಲಸಿಕೆ ಇಲ್ಲದೇ ಇರುವುದರಿಂದ ಕೆಲ ಕ್ರಮ ಅಗತ್ಯವಾಗಿದೆ. ಯಾವುದಾದರೂ ಫಾರ್ಮ್‌ನಲ್ಲಿ ಹಂದಿ ಸತ್ತಿದ್ದರೆ, ಆ ಫಾರ್ಮ್‌ ನಲ್ಲಿರುವ ಎಲ್ಲ ಹಂದಿಗಳನ್ನು ಕಲ್ಲಿಂಗ್ (ಸಾಯಿಸುವುದು) ಮಾಡಬೇಕಾಗುತ್ತದೆ. ಅದಾದ ನಂತರ 8 ಅಡಿ ಆಳದಲ್ಲಿ ರಾಸಾಯನಿಕ ಹಾಕಿ ಹೂತು ಹಾಕಬೇಕು.

ಇದಲ್ಲದೆ 1 ಕಿ.ಮೀ. ಸುತ್ತಮುತ್ತ ವ್ಯಾಪ್ತಿಯಲ್ಲಿ ಹಂದಿ ಫಾರ್ಮ್ ಅಥವಾ ಸಾಕು ಹಂದಿಗಳಿದ್ದರೂ, ಕಲ್ಲಿಂಗ್ ಮಾಡಿ, ಫಾರ್ಮ್ ಬಂದ್ ಮಾಡ ಬೇಕಾಗುತ್ತದೆ. ಜತೆಗೆ 10 ಕಿ.ಮೀ. ವ್ಯಾಪ್ತಿಯಲ್ಲಿ ಬಫರ್ ಜೋನ್ ಮಾಡಿ ಪಶುಸಂಗೋಪನಾ ಇಲಾಖೆ, ಆರೋಗ್ಯ ಇಲಾಖೆಯಿಂದ ನಿಗಾ ವಹಿಸಲಾಗುತ್ತದೆ. ಪ್ರತಿ ಫಾರ್ಮ್‌ಗೆ ಇಲಾಖೆ ವೈದ್ಯರು ಭೇಟಿ ನೀಡಿ ಹಂದಿಗಳ ಆರೋಗ್ಯ ತಪಾಸಣೆ ನಡೆಸುತ್ತಾರೆ. ಆರೋಗ್ಯವಂತ ಹಂದಿಯ ಸ್ಯಾಂಪಲ್ ಕೂಡ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗುತ್ತದೆ.

"ನಾವೀಗ ಸ್ಯಾಂಪಲ್‌ಗಳ ವರದಿಯ ನಿರೀಕ್ಷೆಯಲ್ಲಿದ್ದೇವೆ. ಜನರಲ್ಲಿ ಆತಂಕ ಬೇಡ. ಸದ್ಯಕ್ಕೆ ಹಂದಿಗಳು ಯಾವ ಕಾರಣದಿಂದ ಸಾವನ್ನಪ್ಪುತ್ತಿವೆ ಅನ್ನುವುದು ಖಚಿತಗೊಂಡಿಲ್ಲ. ಒಂದೆರಡು ದಿನಗಳಲ್ಲಿ ವರದಿ ಬರಬಹುದು. ಖಚಿತ ಗೊಂಡರೆ ಪಶು ಸಂಗೋಪನಾ ಇಲಾಖೆ ಪ್ರಮುಖರು, ಜಿಲ್ಲಾಡಳಿತ ಕೆಲವೊಂದು ಅಗತ್ಯ ಕ್ರಮಗಳನ್ನು ಕೈಗೊಳ್ಳು ತ್ತದೆ. ಸಾಕಾಣಿಕೆದಾರರು ಕೂಡ ಫಾರ್ಮ್‌ಗಳಲ್ಲಿ ಬಯೋ ಸೆಕ್ಯೂರಿಟಿ ಕ್ರಮಗಳನ್ನು ಕೈಗೊಳ್ಳಬೇಕು. ಇದು ಮನುಷ್ಯ ರಿಗೆ ಹರಡುವುದಿಲ್ಲ. ಇತರೆ ಪ್ರಾಣಿಗಳಿಗೆ ಹರಡುವುದಿಲ್ಲ. ಈ ಬಗ್ಗೆ ಆತಂಕ ಬೇಡ, ಜಾಗರುಕತೆ ಅಗತ್ಯ. ಕೊಳೆತ ಹಂದಿಗಳ ದೇಹ ನೀರಿಗೆ ಸೇರಿ, ಆ ನೀರಿನಿಂದ ಸಾಂಕ್ರಮಿಕ ರೋಗ ಹರಡುವ ಸಾಧ್ಯತೆಗಳಿರುವ ಕಾರಣ ಎಚ್ಚರಿಕೆ ಇರಲಿ".

-ಡಾ. ಅರುಣ್ ಹೆಗ್ಡೆ, ಸಹಾಯಕ ನಿರ್ದೇಶಕರು ಪಶು ಪಾಲನಾ ಇಲಾಖೆ ಕುಂದಾಪುರ.

Tags

Serial death of pigsKundapurByndoorconfusedalert
share
ವಾರ್ತಾಭಾರತಿ
ವಾರ್ತಾಭಾರತಿ
Next Story
X