Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಎಸ್‌ಐಆರ್ ಮೊದಲ ಹಂತದ ಪ್ರಕ್ರಿಯೆ...

ಎಸ್‌ಐಆರ್ ಮೊದಲ ಹಂತದ ಪ್ರಕ್ರಿಯೆ ಮುಕ್ತಾಯ| ಉಡುಪಿ ಜಿಲ್ಲೆಯಲ್ಲಿ 10,00,545 ಮತದಾರರು ಡಿಜಿಟಲೈಸ್

ವಾರ್ತಾಭಾರತಿವಾರ್ತಾಭಾರತಿ18 Aug 2026 9:54 PM IST
share
ಎಸ್‌ಐಆರ್ ಮೊದಲ ಹಂತದ ಪ್ರಕ್ರಿಯೆ ಮುಕ್ತಾಯ| ಉಡುಪಿ ಜಿಲ್ಲೆಯಲ್ಲಿ 10,00,545 ಮತದಾರರು ಡಿಜಿಟಲೈಸ್
ಹೆಸರು ಕೈಬಿಟ್ಟವರು 63,331 ಮಂದಿ

ಉಡುಪಿ, ಆ.18: ಜಿಲ್ಲೆಯಲ್ಲಿ ಜೂ.30ರಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದ ಮೊದಲ ಹಂತ ಇದೀಗ ಪೂರ್ಣಗೊಂಡಿದ್ದು, ಜಿಲ್ಲೆಯ 2025ರ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿದ್ದ ಒಟ್ಟು 10,63,876 ಮತದಾರರ ಪೈಕಿ 10,00,545 ಮಂದಿಯ ಗಣತಿ ನಮೂನೆಯನ್ನು ಡಿಜಿಟಲೈಸ್ ಮಾಡಲಾಗಿದ್ದು, ಉಳಿದ 63,331 ಮಂದಿಯ ಹೆಸರುಗಳನ್ನು ವಿವಿಧ ಕಾರಣಗಳಿಗಾಗಿ ಆ.24ರಂದು ಪ್ರಕಟಗೊಳ್ಳುವ ಕರಡು ಮತದಾರರ ಪಟ್ಟಯಿಂದ ಕೈಬಿಡಲಾಗುವುದು.

ಬಿಎಲ್‌ಒಗಳು ಜಿಲ್ಲೆಯ ಮತದಾರರಿಗೆ ತಲುಪಿಸಿದ್ದ 10,63,876 ಎನ್ಯೂಮರೇಶನ್ ನಮೂನೆ (ಗಣತಿ ನಮೂನೆ) ಗಳನ್ನು ಮರಳಿ ಪಡೆದು ಅದನ್ನು ಶೇ.100ರಷ್ಟು ಡಿಜಟಲೀಕರಣಗೊಳಿಸುವಾಗ 10,00,545 ಮಂದಿಯ ನಮೂನೆ ಗಳು ಮಾತ್ರ ಡಿಜಿಟಲೈಸ್ ಮಾಡಲಾಗಿದೆ. ಇದು ಒಟ್ಟು ಮತದಾರರ ಶೇ.94.05 ಆಗಿದ್ದು, ರಾಜ್ಯದಲ್ಲೇ ನಂ.1 ಸ್ಥಾನದಲ್ಲಿ ಉಡುಪಿ ಜಿಲ್ಲೆ ವಿರಾಜಮಾನವಾಗಿದೆ. ಉಳಿದ 63,331 (ಶೇ.5.95) ನಮೂನೆಗಳು ವಿವಿಧ ಕಾರಣ ಗಳಿಂದ (ಎಎಸ್‌ಡಿಡಿಒ) ಪಟ್ಟಿಯಿಂದ ಅನರ್ಹಗೊಂಡಿವೆ ಎಂದು ಜಿಲ್ಲಾಧಿಕಾರಿಗಳು ನೀಡಿದ ಅಂಕಿಅಂಶಗಳಿಂದ ಗೊತ್ತಾಗಿದೆ.

ಶೇ.100ರಷ್ಟು ಡಿಜಟಲೀಕರಣಗೊಳಿಸುವಾಗ 9,99,675 (ಶೇ. 93.97) ರಷ್ಟು ನಮೂನೆಗಳು ಮಾತ್ರ ಡಿಜಿಟಲೈಸ್ ಮಾಡಲಾಗಿತ್ತು. ಉಳಿದ 64,201 ನಮೂನೆಗಳು ವಿವಿಧ ಕಾರಣಗಳಿಂದ ಪಟ್ಟಿಯಿಂದ ಅನರ್ಹ ಗೊಂಡಿದ್ದವು. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ವಿವಿದ ದಾಖಲೆ ಗಳೊಂದಿಗೆ ಅಧಿಕಾರಿಗಳನ್ನು ಬೇಟಿಯಾಗಿ ತಮ್ಮ ದಾಖಲೆಗಳನ್ನು ತೋರಿಸಿ ಮತ್ತೆ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳುತಿದ್ದಾರೆ.

ಇದರಿಂದಾಗಿ ಆ.17ರಂದು ಎಸ್‌ಐಆರ್‌ನ ಮೊದಲ ಹಂತದ ಪ್ರಕ್ರಿಯೆ ಮುಗಿದಾಗ ಡಿಜಿಟಲೈಸ್ ಆದವರ ಸಂಖ್ಯೆ 10,00,545ಕ್ಕೆ ನೆಗೆದಿದ್ದರೆ, ಅನರ್ಹಗೊಂಡವರ ಸಂಖ್ಯೆ 63,331ಕ್ಕೆ ಇಳಿದಿತ್ತು. ಇದರಿಂದ 870 ಮಂದಿ ಮತ್ತೆ ತಮ್ಮ ಹೆಸರನ್ನು ಮತದಾರರ ಪಟ್ಟಿಯಲಿ ದಾಖಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 18,03,766 ಒಟ್ಟು ಮತದಾರರಿದ್ದು ಇವರಲ್ಲಿ 16,46,386 ಮಂದಿಯ ಹೆಸರು ಡಿಜಟಲೈಸ್ (ಶೇ.91.27) ಆಗಿದ್ದರೆ, 1,57,380 ಮಂದಿ (ಶೇ.8.73) ಮಂದಿಯ ಹೆಸರನ್ನು ಕೈಬಿಡಲಾಗಿದೆ. ಈ ಮೂಲಕ ಹಾವೇರಿ ಹಾಗೂ ಉತ್ತರ ಕನ್ನಡದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಎಎಸ್‌ಡಿಡಿಒದಲ್ಲಿ ಸದ್ಯ ಜಿಲ್ಲೆಯಲ್ಲಿ 21,262 ಮಂದಿ ಮೃತಪಟ್ಟಿದ್ದರೆ, 29,361 ಮಂದಿ ಶಾಶ್ವತವಾಗಿ ಬೇರೆ ಕಡೆಗೆ ವರ್ಗಾವಣೆಗೊಂಡಿದ್ದಾರೆ. 4145 ಮಂದಿ ಗೈರಾಗಿದ್ದರೆ, 8,374 ಮಂದಿ ದ್ವಿಪ್ರತಿಯಲ್ಲಿ ಕಾರ್ಡ್ ಪಡೆದಿದ್ದರು. 189 ಮಂದಿ ಇತರರೂ ಈ ಅನರ್ಹಗೊಂಡ 63,331ರಲ್ಲಿ ಸೇರಿದ್ದಾರೆ ಎಂದು ರಾಜ್ಯ ಆಯೋಗ ಪ್ರಕಟಿಸಿದ ಮಾಹಿತಿ ಯಲ್ಲಿ ತಿಳಿಸಲಾಗಿದೆ.

ಕಾರ್ಕಳ ರಾಜ್ಯದಲ್ಲೇ ನಂ.1: ವಿಧಾನಸಭಾ ಕ್ಷೇತ್ರವಾರು ಸಾಧನೆಯನ್ನು ನೋಡುವಾಗ ಉಡುಪಿ ಜಿಲ್ಲೆಯ ಕಾರ್ಕಳ ಹಾಗೂ ಕಾಪು ವಿಧಾನಸಭಾ ಕ್ಷೇತ್ರಗಳು ರಾಜ್ಯದಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದಿವೆ. ಉಳಿದಂತೆ ಕುಂದಾಪುರ 5ನೇ, ಬೈಂದೂರು 7ನೇ ಹಾಗೂ ಉಡುಪಿ ಕ್ಷೇತ್ರ 29ನೇ ಸ್ಥಾನದಲ್ಲಿವೆ.

ಕಾರ್ಕಳದಲ್ಲಿ ಅತೀ ಹೆಚ್ಚು ಮಂದಿ ಮತದಾರರು - ಒಟ್ಟು 1,93,142 ಮತದಾರರ ಪೈಕಿ 1,83,485 (ಶೇ.95) ಡಿಜಿಟಲೈಸ್ ಆದರೆ, ಕೇವಲ 9,657 ಮಂದಿಯ (ಶೇ.5) ಹೆಸರು ಮಾತ್ರ ಮತದಾರರ ಪಟ್ಟಿಯಿಂದ ತೆಗೆಯಲ್ಪ ಟ್ಟಿದೆ. ಕಾಪು ಕ್ಷೇತ್ರದಲ್ಲಿ 1, 94,718 ಮತದಾರರ ಪೈಕಿ 1,84,684 (ಶೇ.94.85) ಮಂದಿ ಹೆಸರು ಡಿಜಿಟಲೈಸ್ ಆಗಿದ್ದರೆ, 10,034 (ಶೇ.5.15) ಮಾತ್ರ ಪಟ್ಟಿಯಿಂದ ನಾಪತ್ತೆಯಾಗಿದ್ದಾರೆ.

ಕುಂದಾಪುರ ಕ್ಷೇತ್ರದಲ್ಲಿ ಒಟ್ಟು 2,12,473 ಮತದಾರರ ಪೈಕಿ 2,00,839 (ಶೇ.94.52) ಮಂದಿ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ, 11,634 (ಶೇ.5.48) ಮಂದಿಯ ಹೆಸರು ಕೈಬಿಡಲಾಗಿದೆ. ಬೈಂದೂರಿನಲ್ಲಿ ಕ್ಷೇತ್ರದಲ್ಲಿ 2,41,863 ಮತದಾರರ ಪೈಕಿ 2,27,583 (94.10) ಮಂದಿ ಪಟ್ಟಿಯಲ್ಲಿ ಉಳಿದುಕೊಂಡಿದ್ದರೆ, 14,280 (ಶೇ.5.90) ಹೆಸರನ್ನು ಕೈಬಿಡಲಾಗಿದೆ.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,21,680 ಮತದಾರರ ಪೈಕಿ 2,03,954 (ಶೇ.92) ಮಂದಿ ಹೆಸರು ಪಟ್ಟಿಯಲ್ಲಿದ್ದರೆ, 17,726 (ಶೇ.8) ಮಂದಿ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ರಾಜ್ಯ ಚುನಾವಣಾ ಆಯೋಗ ಕರಡು ಮತದಾರರ ಪಟ್ಟಿಯನ್ನು ಆ.24ರಂದು ಪ್ರಕಟಿಸಲಿದೆ.

Tags

SIRcompletevotersdigitizeUdupi district
share
ವಾರ್ತಾಭಾರತಿ
ವಾರ್ತಾಭಾರತಿ
Next Story
X