ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಡೇವಿಡ್ ಸಿಕ್ವೇರಾ ಅವರ ಆರೋಗ್ಯ ವಿಚಾರಿಸಿದ ಸ್ಪೀಕರ್ ಯುಟಿ ಖಾದರ್

ಉಡುಪಿ: ಹಿರಿಯ ಕಾಂಗ್ರೆಸ್ ಕಾರ್ಯಕರ್ತ, ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ಉದ್ಯೋಗಿ ಖ್ಯಾತ ಸಮಾಜ ಸೇವಕ ಡೇವಿಡ್ ಸಿಕ್ವೇರಾ ಇವರು ತೀವ್ರ ಬೆನ್ನು ನೋವಿನಿಂದ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ವಿಚಾರ ತಿಳಿದ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಕೋಟೇಶ್ವರಕ್ಕೆ ಆಗಮಿಸಿ ಡೇವಿಡ್ರ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ತಮ್ಮ ಹಳೆಯ ರಾಜಕೀಯ ಓಡಾಟದ ದಿನಗಳನ್ನು ನೆನಪಿಸಿಕೊಂಡು ಸಮಾಜಕ್ಕೆ ತಮ್ಮಂತಹ ಸಮಾಜ ಸೇವಕರ ಅಗತ್ಯವಿದ್ದು ಶೀಘ್ರ ಗುಣಮುಖವಾಗಲೆಂದು ಯುಟಿ ಖಾದರ್ ಹಾರೈಸಿದರು.
Next Story




