ಉಡುಪಿ ರಂಗಭೂಮಿ ಅಧ್ಯಕ್ಷರಾಗಿ ತಲ್ಲೂರು ಶಿವರಾಮ ಶೆಟ್ಟಿ ಪುನರಾಯ್ಕೆ

ಉಡುಪಿ, ಸೆ.11: ಉಡುಪಿ ‘ರಂಗಭೂಮಿ’ ಅಧ್ಯಕ್ಷರಾಗಿ ತಲ್ಲೂರು ಶಿವರಾಮ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ.
ಉಡುಪಿಯ ಡಯನ ಹೋಟೆಲ್ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ಸಂಸ್ಥೆಯ 59ನೇ ವಾರ್ಷಿಕ ಮಹಾಸಭೆಯಲ್ಲಿ 2024-25ನೇ ಸಾಲಿನ ಪದಾಧಿಕಾರಿಗಳು ಆಯ್ಕೆ ನಡೆಯಿತು.
ಮಾರ್ಗದರ್ಶಕರಾಗಿ ಡಾ.ಎಚ್.ಶಾಂತಾರಾಮ್, ಗೌರವಾಧ್ಯಕ್ಷರಾಗಿ ಡಾ. ಎಚ್.ಎಸ್.ಬಲ್ಲಾಳ್, ಉಪಾಧ್ಯಕ್ಷರಾಗಿ ಭಾಸ್ಕರ ರಾವ್ ಕಿದಿಯೂರು, ಹಾಗೂ ಎನ್.ರಾಜಗೋಪಾಲ ಬಲ್ಲಾಳ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ಚಂದ್ರ ಕುತ್ಪಾಡಿ ಆಯ್ಕೆಯಾದರು.
ಜತೆ ಕಾರ್ಯದರ್ಶಿಗಳಾಗಿ ಶ್ರೀಪಾದ ಹೆಗಡೆ ಹಾಗೂ ವಿವೇಕಾನಂದ ಎನ್., ಕೋಶಾಧಿಕಾರಿಯಾಗಿ ಭೋಜ ಯು., ಕಾರ್ಯ ಕಾರಿ ಮಂಡಳಿಯ ಸದಸ್ಯರಾಗಿ ಪೂರ್ಣಿಮಾ ಸುರೇಶ್, ವಿದ್ಯಾವಂತ ಆಚಾರ್ಯ, ಎಚ್. ಜಯಪ್ರಕಾಶ್ ಕೆದ್ಲಾಯ, ಆನಂದ ಮೇಲಂಟ, ಡಾ.ವಿಷ್ಣುಮೂರ್ತಿ ಪ್ರಭು, ಅಮಿತಾಂಜಲಿ ಕಿರಣ್, ರವೀಂದ್ರ ಶೆಟ್ಟಿ ಕಡೆಕಾರು, ತಲ್ಲೂರು ಶಿವಪ್ರಸಾದ್ ಶೆಟ್ಟಿ, ಹರೀಶ್ ಜಿ.ಕಲ್ಯಾಡಿ, ಕೆ. ರವೀಂದ್ರ ಆಚಾರ್ಯ, ಕಾರ್ತಿಕ್ ಪ್ರಭು ಆಯ್ಕೆಯಾದರು.
ಗೌರವ ಸಲಹಾ ಸಮಿತಿಯ ಸದಸ್ಯರಾಗಿ ಯು.ದಾಮೋದರ್, ಕೆ. ಗೋಪಾಲ್, ಕೆ.ಲಕ್ಷ್ಮೀನಾರಾಯಣ ಭಟ್, ಯು.ವಿಶ್ವ ನಾಥ ಶೆಣೈ, ಭುವನ ಪ್ರಸಾದ್ ಹೆಗ್ಡೆ, ಕುತ್ಪಾಡಿ ವಿಠಲ ಗಾಣಿಗ ಆಯ್ಕೆಯಾದರು. ಆಡಳಿತ ಮಂಡಳಿಯ ವಿಶೇಷ ಆಹ್ವಾನಿತ ಸದಸ್ಯರಾಗಿ ಡಾ.ಮಾಧವಿ ಭಂಡಾರಿ, ಬೆಳಗೋಡು ರಮೇಶ್ ಭಟ್, ತೆಳ್ಳಾರು ರವೀಂದ್ರ ಪೂಜಾರಿ, ರಂಜನ್ ಕಲ್ಕೂರ, ಜಯಕರ್ ಮಣಿಪಾಲ, ಪಿ.ಆರ್ಮುಗಂ, ಸಂದೀಪ್ ಕುಮಾರ್ ಎಂ.ವಿಜಯ್ ಪ್ರಭಾಕರ್, ಎಚ್. ನರಸಿಂಹ ಮೂರ್ತಿ ರಾವ್, ಸೂರ್ಯಪ್ರಕಾಶ್, ಸುಬ್ರಹ್ಮಣ್ಯ ಸೇರಿಗಾರ್, ಸುಭಾಶ್ ಕೊರಂಗ್ರಪಾಡಿ, ರಾಘವ ಬಿ., ಅಕ್ಷಯ್ ಭಟ್, ಆದ್ಯತಾ ಭಟ್, ಪ್ರೀತಮ್ ನಾಯಕ್, ರೇವತಿ ನಾಡಿಗೇರ್, ರವಿರಾಜ್ ನಾಯಕ್, ಕಲ್ಯಾಣಿ ಪೂಜಾರಿ, ವಿಶ್ವನಾಥ್ ಕಟ್ಟೆಗುಡ್ಡೆ ಆಯ್ಕೆಯಾದರು ಎಂದು ಪ್ರಕಟಣೆ ತಿಳಿಸಿದೆ.







