Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಟೂರ್ ಅರೇಬಿಯಾದ 2027ರ ಹಜ್ ಬ್ರೋಷರ್...

ಟೂರ್ ಅರೇಬಿಯಾದ 2027ರ ಹಜ್ ಬ್ರೋಷರ್ ಬಿಡುಗಡೆ

2026ರ ಹಜ್ ತಂಡದ ಸ್ನೇಹ ಸಮ್ಮಿಲನ

ವಾರ್ತಾಭಾರತಿವಾರ್ತಾಭಾರತಿ4 Sept 2026 5:39 PM IST
share
ಟೂರ್ ಅರೇಬಿಯಾದ 2027ರ ಹಜ್ ಬ್ರೋಷರ್ ಬಿಡುಗಡೆ

ಉಡುಪಿ: ಟೂರ್ ಅರೇಬಿಯಾ ಮೂಲಕ ಕಳೆದ ವರ್ಷ ಇಡೀ ಕುಟುಂಬದ ಸಮೇತ ಹಜ್ ನೆರವೇರಿಸಿರುವುದು ಸ್ಮರಣೀಯ ಅನುಭವ. ಸಂಸ್ಥೆ ಪ್ರತಿಯೊಂದು ವಿಷಯದಲ್ಲೂ ಅತ್ಯುತ್ತಮ ಸೇವೆ ಒದಗಿಸಿ ಇಡೀ ಹಜ್ ಪ್ರಯಾಣವನ್ನು ಬಹಳ ವಿಶೇಷವಾಗಿಸಿತ್ತು. ನನ್ನ ವೃದ್ಧ ತಂದೆ ತಾಯಿಗಳ ಹಜ್ ನಿರ್ವಹಣೆ ಬಗ್ಗೆ ನನಗೆ ತುಂಬಾ ಆತಂಕವಿತ್ತು. ಆದರೆ ಟೂರ್ ಅರೇಬಿಯಾ ಬಳಗದ ಸಹಕಾರ ಮನೋಭಾವ, ಅತ್ಯುತ್ತಮ ಸೌಲಭ್ಯಗಳು, ಉತ್ಕೃಷ್ಟ ಗುಣಮಟ್ಟದ ವಾಸ್ತವ್ಯ ಮತ್ತು ವ್ಯವಸ್ಥಿತ ನಿರ್ವಹಣೆಗಳಿಂದಾಗಿ ಎಲ್ಲವೂ ನಮ್ಮ ನಿರೀಕ್ಷೆಗೂ ಮೀರಿ ಅತ್ಯುತ್ತಮವಾಗಿ ನೆರವೇರಿತು. ಟೂರ್ ಅರೇಬಿಯಾದ ಒಟ್ಟು ತಂಡ ಹಾಜಿಗಳಿಗೆ ಯಾವುದೇ ವಿಷಯದಲ್ಲಿ ಸಮಸ್ಯೆಯಾಗದಂತೆ ಅತ್ಯುತ್ತಮವಾಗಿ ನೋಡಿಕೊಂಡಿತು ಎಂದು ಮುಕ್ಕ ಪ್ರೋಟೀನ್ಸ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಹಾಗು ಸಿಇಒ ಕೆ. ಮೊಹಮ್ಮದ್ ಹಾರಿಸ್ ಅವರು ಅಭಿಪ್ರಾಯಪಟ್ಟರು.

ನಗರದ ಓಶಿಯನ್ ಪರ್ಲ್ ಹೋಟೆಲ್ ನಲ್ಲಿ ಗುರುವಾರ ನಡೆದ ಆಕ್ಟೊಪಸ್ ಹಾಲಿಡೇಸ್ ಗ್ರೂಪ್ ನ ಟೂರ್ ಅರೇಬಿಯಾ ಹಜ್ ಹಾಗೂ ಉಮ್ರಾ ಸಂಸ್ಥೆಯ 2027 ರ ಹಜ್ ಬ್ರೋಷರ್ ಬಿಡುಗಡೆ ಮತ್ತು 2026 ರ ಹಾಜಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.


ಹಿರಿಯ ಉದ್ಯಮಿ, ಮುಕ್ಕ ಪ್ರೋಟೀನ್ಸ್ ಲಿ. ನ ಮುಖ್ಯಸ್ಥರಾದ ಕೆ. ಅಬ್ದುಲ್ ರಝಾಕ್ ಹಾಜಿ ಅವರು 2027ರ ಬ್ರೋಷರ್ ಬಿಡುಗಡೆ ಮಾಡಿದರು.

2026 ರಲ್ಲಿ ಟೂರ್ ಅರೇಬಿಯಾದೊಂದಿಗೆ ಹಜ್ ನಿರ್ವಹಿಸಿದ ಮಂಗಳೂರಿನ ಯುನಿಟಿ ಆಸ್ಪತ್ರೆಯ ನಿರ್ದೇಶಕ ಮೊಯ್ದಿನ್ ಅಶ್ಫಾಕ್, ಗೋವಾದ ಇಂಡೋ ಟೆಕ್ ಮೆರೈನ್ ಫ್ರೋಜನ್ ಸೀಫುಡ್ ಎಕ್ಸ್‌ಪೋರ್ಟ್ಸ್ ನ ವ್ಯವಸ್ಥಾಪಕ ಪಾಲುದಾರ ಮುಷ್ತಾಕ್ ಅಹ್ಮದ್, ಜಾಮಿಯಾ ಝಿಯಾವುಲ್ ಉಲೂಮ್ ಕಂಡ್ಲೂರ್ ನ ಉಪನ್ಯಾಸಕ ಮೌಲಾನ ಝಮೀರ್ ಅಹ್ಮದ್ ರಶಾದಿ ಹಾಗೂ ಅಮೆಲ್ ಅಶ್ಫಾಕ್, ಸಂದರ್ಭೋಚಿತವಾಗಿ ಮಾತನಾಡಿ ಟೂರ್ ಅರೇಬಿಯಾದ ಯಶಸ್ವೀ ನಿರ್ವಹಣೆ, ಸೌಲಭ್ಯಗಳು ಮತ್ತು ಸೇವೆಗಳನ್ನು ಮುಕ್ತವಾಗಿ ಶ್ಲಾಘಿಸಿದರು.

ಉಡುಪಿ ಜಾಮಿಯಾ ಮಸೀದಿಯ ಇಮಾಮ್, ಮೌಲಾನ ರಶೀದ್ ನದ್ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟೂರ್ ಅರೇಬಿಯಾದ ಮುಖ್ಯಸ್ಥ ಯಾಸೀನ್ ಮಲ್ಪೆ, 2026 ರ ಹಾಜಿಗಳಿಗೆ ಅವರು ಪ್ರವಾಸದುದ್ದಕ್ಕೂ ನೀಡಿದ ಸಹಕಾರಕ್ಕಾಗಿ ಕೃತಜ್ಞತೆ ಸಲ್ಲಿಸಿ, 2027 ರ ಹಜ್ ಗೆ ಟೂರ್ ಅರೇಬಿಯಾದ ವಿವಿಧ ಪ್ಯಾಕೇಜ್ ಗಳು, ಅಲ್ಲಿ ಸಿಗುವ ಸೌಲಭ್ಯ ಮತ್ತಿತರ ವಿವರಗಳನ್ನು ನೀಡಿದರು.


2026 ರ ಹಜ್ ತಂಡದಲ್ಲಿದ್ದ ಕೆ. ಮೊಹಮ್ಮದ್ ಆರಿಫ್ , ಬದ್ರುದ್ದೀನ್ ನಾವುಂದ, ನಝೀರ್ ಸಾಹೇಬ್ ಗುಡ್ಮಿ, ಮುನವರ್ ಅಹ್ಮದ್ ಮಂಗಳೂರು, ಇಸ್ಮಾಯಿಲ್ ಮೂಡುಬಿದಿರೆ ಬ್ರೋಷರ್ ಬಿಡುಗಡೆ ವೇಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

2027 ಹಜ್ ಗಾಗಿ ಇಬ್ಬರು ಅತಿಥಿಗಳು ತಮ್ಮ ಕುಟುಂಬದ ಐವರು ಸದಸ್ಯರಿಗೆ ಸೀಟುಗಳನ್ನು ಕಾದಿರಿಸುವ ಮೂಲಕ 2027 ರ ಬುಕಿಂಗನ್ನು ಉದ್ಘಾಟಿಸಲಾಯಿತು. ಪ್ರಥಮವಾಗಿ ಬುಕಿಂಗ್ ಮಾಡಿದವರಿಗೆ ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಲಾಯಿತು. ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮೊಹಮ್ಮದ್ ಮೌಲಾ ಮತ್ತು ಉದ್ಯಮಿ ಅಶ್ರಫ್ ಬೆಂಗ್ರೆ ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದರು.




Tags

Tour ArabialaunchesHajj brochure
share
ವಾರ್ತಾಭಾರತಿ
ವಾರ್ತಾಭಾರತಿ
Next Story
X