ಉಡುಪಿ| ಸಮಾಧಾನ ಮಹೋತ್ಸವದ ವಿರುದ್ಧ ಪ್ರತಿಭಟನೆ: ಹಿಂಜಾವೇ ಮುಖಂಡರು ಸಹಿತ 38 ಮಂದಿಯ ವಿರುದ್ಧ ಎಫ್ಐಆರ್

ಉಡುಪಿ, ಮಾ.21: ಉಡುಪಿ ಕ್ರಿಶ್ಚಿಯನ್ ಪಿಯು ಕಾಲೇಜು ಮೈದಾನದಲ್ಲಿ ಫೇಲೋಶಿಫ್ ಆಫ್ ಉಡುಪಿ ಡಿಸ್ಟ್ರಿಕ್ ಚರ್ಚಸ್ ವತಿಯಿಂದ ಹಮ್ಮಿಕೊಳ್ಳಲಾದ ಸಮಾಧಾನ ಮಹೋತ್ಸವ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ ಮಾ.20ರಂದು ಪ್ರತಿಭಟನೆ ನಡೆಸಿದ ಹಿಂದು ಜಾಗರಣಾ ವೇದಿಕೆಯ ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ಸಮಾಧಾನ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಮೋಹನ್ ಸಿ.ಲಾಜರಸ್ ಅವರನ್ನು ಆಹ್ವಾನಿಸಿರುವುದಕ್ಕೆ ಹಿಂದೂ ಜಾಗರಣಾ ವೇದಿಕೆ ವಿರೋಧ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಆಯೋಜಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದುದರಿಂದ ಕಾರ್ಯಕ್ರಮಕ್ಕೆ ರಕ್ಷಣೆ ನೀಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಅದರಂತೆ ಪೊಲೀಸರು ಸೂಕ್ತ ಬಂದೋಬಸ್ತ್ ನೀಡಿದ್ದರು.
ಹಿಂದೂ ಜಾಗರಣ ವೇದಿಕೆಯ ಮುಖಂಡ ಶ್ರೀಕಾಂತ ಶೆಟ್ಟಿ ಹಾಗೂ 38 ಮಂದಿ ಕಾರ್ಯಕರ್ತರು ಅಕ್ರಮ ಕೂಟ ಸೇರಿಕೊಂಡು ಉಡುಪಿ ಗೋವಿಂದ ಕಲ್ಯಾಣಮಂಟಪದಿಂದ ಸಮಾಧಾನ ಮಹೋತ್ಸವ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಘೋಷಣೆಯನ್ನು ಕೂಗುತ್ತ ಪ್ರತಿಭಟನೆ ಹೊರಟರು. ಈ ಸಂದರ್ಭದಲ್ಲಿ ತಡೆದ ಪೊಲೀಸರು, ಪ್ರತಿಭಟನಕ ರರಾದ ಮಹೇಶ್ ಶೆಣೈ(43), ಶ್ರೀಕಾಂತ್ ಶೆಟ್ಟಿ, ಸಂತೋಷ(27), ಉಮೇಶ್ ನಾಯ್ಕ್(51), ಉಮೇಶ್(35), ರಮೇಶ್ ಶೆಟ್ಟಿ(43), ರಾಜೇಶ್ ಉಚ್ಚಿಲ (41), ದರ್ಶನ್(23), ಉದಯ ಕುಮಾರ್(44), ಪ್ರಶಾಂತ್(40), ಗುರುರಾಜ್(37), ಅಜೀತ್ ಗೋಳಿಕಟ್ಟೆ(39), ರಾಧಕೃಷ್ಣ(55), ರೀತೇಶ್ ಪೂಜಾರಿ(25), ಜಗದೀಶ ಪೂಜಾರಿ (31), ಮಹೇಶ್ ಪೂಜಾರಿ(33), ಸುನೀಲ್ ಪೂಜಾರಿ(26), ಚಿರಾಗ್ ಎಚ್.ಎಸ್.(22), ಸುದೀಪ್ ಕಡಿಯಾಳಿ(23), ನಿಖಿಲ್(28), ಸುಜೀತ್(28), ಸಾಜನ್ ಎಂ.ಶೆಟ್ಟಿ(34), ರಾಜೇಶ್ ಪೈಯಾರ್(43), ಲಕ್ಷ್ಮಣ್ ಕರ್ಕೇರ(49), ಶರತ್ ಕುಮಾರ್ ಬೈಲಕೆರೆ(42), ಶೈಲೇಂದ್ರ ಶೆಟ್ಟಿ(50), ವಿಕೇಶ್ ಎಸ್.(29), ನಿತೇಶ್(32), ಸರೋಜಾ ಶೆಣೈ(52), ತಾರಾ ಎಸ್., ತಾರಾ ಆಚಾರ್ಯ(55), ಸಿಂಚನ್ (21), ಧನುಷ್ ಶೆಟ್ಟಿ(21), ವಿಶೇಕ್ ಶೆಟ್ಟಿ(20), ಸಾತ್ವೀಕ್(20), ಮನೀಷ್ (21), ಅಶ್ವತ್ ಅಚಾರ್ಯ(37), ದಿನೇಶ್ ಸಾವಂತ(47) ಎಂಬವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.







