ಅರಣ್ಯವಾಸಿಗಳ ಮಹಾಸಂಗ್ರಾಮ ಮೇಲ್ಮನವಿ ಅಭಿಯಾನ| 20 ಸಾವಿರಕ್ಕೂ ಹೆಚ್ಚು ಆಕ್ಷೇಪಣಾ ಮೇಲ್ಮನವಿ: ರವೀಂದ್ರ ನಾಯ್ಕ

ಶಿರಸಿ: ಜಿಲ್ಲಾದ್ಯಂತ ಆಗಮಿಸಿದ ಅರಣ್ಯವಾಸಿಗಳಿಂದ ಬೃಹತ್ ಅರಣ್ಯವಾಸಿಗಳ ಐತಿಹಾಸಿಕ ಮಹಾಸಂಗ್ರಾಮ ಮೇಲ್ಮನವಿ ಅಭಿಯಾನ ಶಿರಸಿ ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಇಪ್ಪತ್ತು ಸಾವಿರಕ್ಕೂ ಮಿಕ್ಕಿ ಆಕ್ಷೇಪಣಾ ಮೇಲ್ಮನವಿ ಸಲ್ಲಿಸುವ ಅಭೂತ ಪೂರ್ವ ಕಾರ್ಯಕ್ರಮ ಜರುಗಿದವು.
ರಾಜ್ಯ ಅರಣ್ಯ ಭೂಮಿ ಹಕ್ಕು ಹೊರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಇಂದು ಜರುಗಿದವು.
ಸರಕಾರ ಪುನರ್ ಪರಿಶೀಲಿಸದೇ, ಅರ್ಜಿ ಕೇಂದ್ರಕ್ಕೆ ಸಲ್ಲಿಸಿದ ಹಿನ್ನಲೆಯಲ್ಲಿ ಅರಣ್ಯವಾಸಿಗಳು ತೀವ್ರ ಆಕ್ರೋಶ ಅಭಿಯಾನದಲ್ಲಿ ವ್ಯಕ್ತವಾದವು. ತಿರಸ್ಕರಿಸಿದ ಆದೇಶವನ್ನು ಪ್ರದರ್ಶಿಸುತ್ತಾ, ತಿರಸ್ಕರಿಸಿದ ಆದೇಶದ ಮೇಲ್ಮನವಿ ಯನ್ನು ಎತ್ತಿ ಹಿಡಿದು, ಗಟ್ಟಿ ಹೋರಾಟದ ಧ್ವನಿ ಅರಣ್ಯವಾಸಿಗಳಿಂದ ಅಭಿಯಾನದಲ್ಲಿ ಕೇಳಿಬಂದವು.
ಕಾನೂನು ಬಾಹಿರವಾಗಿ ಸುಪ್ರಿಂ ಕೊರ್ಟ ಮತ್ತು ಕೇಂದ್ರ ಸರ್ಕಾರದ ನಿಯಮ ಉಲ್ಲಂಘಿಸಿರುವುದು ಪ್ರಸಕ್ತ ವರ್ಷದ ಫೇಭ್ರವರಿ 28 ರಂದು ಕೇಂದ್ರ ಸರ್ಕಾರದ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರಿಗೆ ಲೋಕಸಭೆ ಯಲ್ಲಿ ಕೇಂದ್ರ ಸಚಿವರು ಉತ್ತರ ನೀಡಿದ್ದು ಇರುತ್ತದೆ. ಲೋಕಸಭೆಯಲ್ಲಿ ನೀಡಿದ ಉತ್ತರದಲ್ಲಿ ಕರ್ನಾಟಕದಲ್ಲಿ 2,94,489 ಒಟ್ಟು ಅರ್ಜಿಗಳು ದಾಖಲಾಗಿದ್ದು, ಅವುಗಳಲ್ಲಿ 16,326 ಸಾಗುವಳಿ ಹಕ್ಕು ನೀಡಲಾಗಿದೆ. ಬಂದಿರು ವಂತ ಅರ್ಜಿಗಳಲ್ಲಿ 2,53,269 (ಶೆ.87.77)ಅರಣ್ಯವಾಸಿಗಳ ಅರ್ಜಿಗಳು ತಿರಸ್ಕರಿಸಲ್ಪಟ್ಟಿದೆ ಎಂಬ ಅಂಶ ಮೇಲ್ಮನವಿಯಲ್ಲಿ ಉಲ್ಲೇಖಿಸಲ್ಪಟ್ಟಿದೆ.
ಅದರಂತೆ ರಾಜ್ಯ ಬುಡಕಟ್ಟು ಇಲಾಖೆಯ ವರದಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಅರಣ್ಯಹಕ್ಕು ಕಾಯಿದೆ ಮಂಜೂರಿಗೆ ಸಂಭಂದಪಟ್ಟಂತೆ 88,453 ಅರ್ಜಿ ಸ್ವೀಕರಿಸಲ್ಪಟ್ಟಿದ್ದು, ಅವುಗಳಲ್ಲಿ 2,867 (ಶೇ. 3.2) ಅರ್ಜಿ ಸಾಗುವಳಿ ಹಕ್ಕು ದೊರಕಿದ್ದು ಇರುತ್ತದೆ. ಬಂದಿರುವಂತಹ ಒಟ್ಟು ಅರ್ಜಿಗಳಲ್ಲಿ 73,859 (ಶೆ.82.76) ಅರ್ಜಿ ತಿರಸ್ಕರಿಸಿರುವ ಹಿನ್ನಲೆ ಯಲ್ಲಿ ಪುನರ್ ಪರಿಶೀಲಿಸದೇ ಅರ್ಜಿ ತಿರಸ್ಕರಿಸದ ವರದಿಗೆ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಆಕ್ಷೇಪಣಾ ಪತ್ರದ ಮೇಲ್ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಹರಿದು ಬಂದ ಜನಸಾಗರ:
ಜಿಲ್ಲಾದ್ಯಂತ ಅರಣ್ಯವಾಸಿಗಳು ಅರಣ್ಯ ಭೂಮಿ ಹಕ್ಕಿನ ವಂಚಿತವಾಗುವ ಭೀತಿಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿ ನಿಂದಲೂ, ಅರಣ್ಯವಾಸಿಗಳು ಮಹಾಸಂಗ್ರಾಮಕ್ಕೆ ಜನಸಾಗರದಂತೆ ಹರಿದು ಬಂದಿರುವುದು ವಿಶೇಷವಾಗಿತ್ತು. ಬುಡಕಟ್ಟು ಜನಾಂಗ, ಆದಿವಾಸಿಗಳು, ಕರಾವಳಿಯ ಭಾಗದ ತಗ್ಗು ಗುಡ್ಡಗಳಿಂದ, ಮಹಿಳೆಯರು, ವೃದ್ದರೂ, ಹೆಜ್ಜೆಯ ಮೇಲೆ ಹೆಜ್ಜೆ ಹಾಕಿ ಅಭಿಯಾನದಲ್ಲಿ ಭಾಗವಿಹಿಸಿರುವುದು ಐತಿಹಾಸಿಕ ಕಾರ್ಯಕ್ರಮವಾದವು.







