ಪತ್ರಕರ್ತರ ಕ್ರಿಕೆಟ್ ಪಂದ್ಯಾಟ: ಭಟ್ಕಳ ಪತ್ರಕರ್ತರ ತಂಡ ಚಾಂಪಿಯನ್

ಭಟ್ಕಳ: ಭಟ್ಕಳ ತಾಲೂಕು ಪತ್ರಕರ್ತರ ಕ್ಷೇಮಾಬಿವೃದ್ಧಿ ಸಂಘ ಇದರ ಆಶ್ರಯದಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಟ್ಕಳ ಪತ್ರಕರ್ತರ ತಂಡವು ಅಂಕೋಲ ಪತ್ರಕರ್ತರ ತಂಡವನ್ನು 28 ರನ್ ಗಳಿಂದ ಸೋಲಿಸಿ ಮೀಡಿಯಾ ಕಪ್ 2025 ಯನ್ನು ತನ್ನದಾಗಿಸಿಕೊಂಡಿತು.
ಪಂದ್ಯಾವಳಿಯಲ್ಲಿ ಭಟ್ಕಳ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ನ್ನು ಆಯ್ದುಕೊಂಡು 6 ಓವರುಗಳಿಗೆ 80 ರನ್ನ ಗಳಿಸಿತು. ಇದಕ್ಕೆ ಉತ್ತರಿಸಿ ಅಂಕೋಲಾ ತಂಡವು 6 ಓವರುಗಳಲ್ಲಿ ಕೇವಲ 52 ರನ್ನು ಗಳಿಸಿ ಸೋಲನ್ನು ಒಪ್ಪಿಕೊಂಡಿತ್ತು. ಭಟ್ಕಳ ತಂಡದಲ್ಲಿ ರಾಘು ನಾಯ್ಕ 37 ರನ್ ಹಾಗೂ ಇಲಿಯಾಸ ಮೊಟಿಯಾ 18 ರನ್ನು ಗಳಿಸಿದರು. ಅಂಕೋಲಾ ತಂಡದಲ್ಲಿದ್ದ ರಾಜು ಗೌಡ 13 ರನ್ನು ಗಳಿಸಿದರು. ಪ್ರಥಮ ಬಹುಮಾನದ ಮೊತ್ತ 33,333 ರೂ ನಗದು ಬಹುಮಾನ ಮತ್ತುಟ್ರೋಪಿ ಭಟ್ಕಳ ತಂಡ ಪಡೆದುಕೊಂಡಿತು. ಅಂಕೋಲಾ ತಂಡ 22,222/- ರೂ ನಗದು ಬಹುಮಾನ ಮತ್ತುಟ್ರೋಪಿ ಪಡೆಯಿತು. ಸೆಮಿಪೈನಲ್ ಪಂದ್ಯದಲ್ಲಿ ಭಟ್ಕಳ ತಂಡ ಸಿರಸಿ ತಂಡವನ್ನು, ಅಂಕೋಲಾ ತಂಡ ಕಾರವಾರ ತಂಡವನ್ನು ಸೋಲಿಸಿ ಪೈನಲ್ ಗೆ ಪ್ರವೇಶಿಸಿದ್ದವು.
ಪೈನಲ್ ಪಂದ್ಯದಲ್ಲಿ ಮ್ಯಾನ್ ಅಪ್ ದಿ ಮ್ಯಾಚ್ ಪ್ರಶಸ್ತಿಯನ್ನು ಭಟ್ಕಳದ ರಾಘು ನಾಯ್ಕ ಪಡೆದರು. ಪಂದ್ಯಾವಳಿಯಲ್ಲಿ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಯನ್ನು ಅಂಕೋಲಾದ ಕಾರ್ತಿಕ ಗೌಡ ಪಡೆದರು. ಬೆಸ್ಟ ಬ್ಯಾಟ್ಸಮನ್ ಪ್ರಶಸ್ತಿಯನ್ನು ಕಾರವಾರ ತಂಡದ ಸಂಕೇತ ಪಡೆದರು. ಪಂದ್ಯಾವಳಿಯ ಬೆಸ್ಟ ಬೌಲರ್ ಪ್ರಶಸ್ತಿಯನ್ನು ಭಟ್ಕಳದ ಸುಹೇಲ್ ಇಸ್ಬು ,. ಬೆಸ್ಟ ಫೀಲ್ಡರ್ ಪ್ರಶಸ್ತಿಯನ್ನು ಅಂಕೋಲಾದ ರಾಜು ಗೌಡ, ಪಡೆದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಟ್ಕಳ ನಗರ ಠಾಣೆಯ ಪಿ.ಎಸ್.ಐ. ನವೀನ್ ನಾಯ್ಕ ಬಹುಮಾನ ವಿತರಿಸಿ ಮಾತನಾಡಿ ಸದಾ ಒತ್ತಡದ ಬದುಕಿನಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರು ಭಟ್ಕಳದಲ್ಲಿ ಅಂತರ ಜಿಲ್ಲಾ ಮಟ್ಟದ ಕ್ರಿಕೇಟ್ ಪಂದ್ಯಾವಳಿಯನ್ನು ಅಚು ಕಟ್ಟಾಗಿ ಆಯೋಜಿಸಿ ಎಲ್ಲರ ಮನ ಗೆದ್ದು ಭಟ್ಕಳದಲ್ಲಿ ಕ್ರಿಕೇಟ್ ಕ್ರೀಡೆಗೆ ವಿಶೇಷ ಮಹತ್ವ ನೀಡಿದೆ. ಈ ಪ್ರೋತ್ಸಾಹ ಸದಾ ಮುಂದುವರೆಯಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷ ಅಲ್ತಾಫ್ ಖರೂರಿ, ಜಾಲಿ ಪಟ್ಟಣ ಪಂಚಾಯತ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ಮೊಗೇರ,ಭಟ್ಕಳ ಪತ್ರಕರ್ತ ಕ್ಷೇಮಾಬಿವೃದ್ದಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ, ಉಪಾಧ್ಯಕ್ಷ ವಿಷ್ಣು ದೇವಾಡಿಗ, ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್, ಪತ್ರಕರ್ತರಾದ ಸತೀಶ ನಾಯ್ಕ, ಮನಮೋಹನ್ ನಾಯ್ಕ, ಮೋಹನ್ ನಾಯ್ಕ,ಭಾಸ್ಕರ ನಾಯ್ಕ, ನಸೀಮುಲ್ಲಾ ಘನಿ, ಫಯಾಜ್ ಮುಲ್ಲಾ, ರಿಝ್ವಾನ್ ಗಂಗಾವಳಿ, ಶೈಲೇಶ ವೈದ್ಯ, ಉದಯ್ ನಾಯ್ಕ, ಪ್ರಸನ್ನ ಭಟ್, ಮಂಜು ನಾಯ್ಕ, ರಾಘವೇಂದ್ರ ಮಲ್ಯ, ಈಶ್ವರ ನಾಯ್ಕ, ಮಾರುತಿ ನಾಯ್ಕ,ಮುಬಾಷಿರ್ ಹಲ್ಲಾರೆ, ದತ್ತ ಮೊಗೇರ, ಮತ್ತಿತರರು ಇದ್ದರು.