Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉತ್ತರಕನ್ನಡ
  4. ಪಾರಂಪರಿಕ ನವಾಯತ್ "ನಾಷ್ಟಾ" ಪ್ರದರ್ಶನ;...

ಪಾರಂಪರಿಕ ನವಾಯತ್ "ನಾಷ್ಟಾ" ಪ್ರದರ್ಶನ; ಶಮ್ಸ್ ಪಿಯು ಕಾಲೇಜಿನಲ್ಲಿ ಗಮನ ಸೆಳೆದ "ಎಜ್ಯುಶೇಫ್ ಸ್ಪರ್ಧೆ"

ವಾರ್ತಾಭಾರತಿವಾರ್ತಾಭಾರತಿ17 Aug 2025 10:23 PM IST
share
ಪಾರಂಪರಿಕ ನವಾಯತ್ ನಾಷ್ಟಾ ಪ್ರದರ್ಶನ; ಶಮ್ಸ್ ಪಿಯು ಕಾಲೇಜಿನಲ್ಲಿ ಗಮನ ಸೆಳೆದ ಎಜ್ಯುಶೇಫ್ ಸ್ಪರ್ಧೆ

ಭಟ್ಕಳದ ಕರಾವಳಿ ಪಟ್ಟಣದಲ್ಲಿ ನವಾಯತ್ ಸಮುದಾಯದ ಸಾಂಸ್ಕೃತಿಕ ಪರಂಪರೆಯ ಒಂದು ಅಮೂಲ್ಯ ಆಭರಣವೆಂದರೆ ಅವರ ಆಹಾರ ಪದ್ಧತಿ. ಈ ಸಮುದಾಯದ ನಾಷ್ಟಾ (ಬೆಳಗಿನ ಉಪಾಹಾರ) ಕೇವಲ ಆಹಾರವಲ್ಲ; ಅದು ಶತಮಾನಗಳ ಇತಿಹಾಸ, ಸಂಸ್ಕೃತಿಯ ಸಂಗಮ ಮತ್ತು ಸಮುದಾಯದ ಗುರುತಿನ ಒಂದು ಜೀವಂತ ಚಿತ್ರಣವಾಗಿದೆ.

ಆದರೆ, ಆಧುನಿಕತೆಯ ಜಂಜಾಟದಲ್ಲಿ, ಜಂಕ್ ಫುಡ್ ಮತ್ತು ರೆಡಿ ಫುಡ್‌ನ ಈ ಯುಗದಲ್ಲಿ, ಈ ಪಾರಂಪರಿಕ ಆಹಾರ ಪದ್ಧತಿಗಳು ಮರೆಯಾಗುತ್ತಿರುವ ಆತಂಕವಿದೆ. ಈ ಹಿನ್ನೆಲೆಯಲ್ಲಿ, ಶಮ್ಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಯರು "ಎಡುಶೆಫ್ ಸ್ಪರ್ಧೆ"ಯ ಮೂಲಕ ಭಟ್ಕಳಿ ನವಾಯತ್ ನಾಷ್ಟವನ್ನು ಪ್ರದರ್ಶಿಸಿ, ಈ ಸಂಪ್ರದಾಯವನ್ನು ಮರುಹುಟ್ಟು ನೀಡುವ ಕಾರ್ಯವನ್ನು ಕೈಗೊಂಡಿರುವುದು ಒಂದು ಪ್ರಶಂಸನೀಯ ಕ್ರಮವಾಗಿದೆ.

ನವಾಯತ್ ನಾಷ್ಟದಲ್ಲಿ ವೈವಿಧ್ಯಮಯ ಖಾದ್ಯಗಳಿವೆ. ತಲ್ಲಾ ಶೈಯೋ, ಉರ್ದಾ ಆಪ್ಪೊ, ಗವಾ ಶೈಯೋ, ಮಾಲಪುರ ಆಪ್ಪೊ, ಗೊಡಾನ್, ಗೋಡ್ ಆಪ್ಪೊ, ಪುಟ್ಟು, ತಾರಿ, ಶೀರಾ, ಸಾತ್‌ಪದರ ನವಾರಿಯೊ, ವಾಟ್ವಾ ನವಾರಿಯೊ, ಮುಟ್ಕುಲೆ, ಖುಬುಸಾ ಪೊಲಿ, ತಾರಿ ಪೊಲಿ, ಚಪ್ಪಿ ಪೊಲಿ, ಖೊಟೆ, ಬರ್ಮಾಸಳ್ಳಿ, ಹಲ್ದಿ ಪಾನ ನವಾರಿಯೊ, ಹಲ್ದಾವಿ ಪೊಲಿ, ಮಟ್ಟಾ ಆಪ್ಪೊ, ಫೌ, ಸಂಬಾಟ್ ಪೊಲಿ, ಗವಾ ಪೊಲಿ ಇತ್ಯಾದಿಗಳು ಈ ಸಮುದಾಯದ ಬೆಳಗಿನ ಉಪಾಹಾರದ ಸೊಗಡನ್ನು ತೋರಿಸುತ್ತವೆ.

ಈ ಖಾದ್ಯಗಳಲ್ಲಿ ಕೆಲವು ತೆಂಗಿನ ಹಾಲು, ಗೋಧಿಹಿಟ್ಟು, ಬೆಲ್ಲ, ಮತ್ತು ಕರಾವಳಿಯ ಸಮುದ್ರಾಹಾರದಿಂದ ತಯಾರಾದವು. ಉದಾಹರಣೆಗೆ, ಮುಟ್ಕುಲೆ (ಬಾಷ್ಪದಲ್ಲಿ ಬೇಯಿಸಿದ ಅಕ್ಕಿಯ ಡಂಪ್ಲಿಂಗ್‌ಗಳು, ಕೊಬ್ಬರಿ ರಸದಲ್ಲಿ ಕೋಳಿ ಅಥವಾ ರೊಯ್ಯಲುಗೊಂಗುರಾದವು), ಗುಲಿಯಾನ್ ಗೊಡಾನ್ (ಮೈದಾ ಮತ್ತು ಕೊಬ್ಬರಿ ಹಾಲಿನಿಂದ ತಯಾರಾದ ಸಿಹಿ ಖಾದ್ಯ), ಮತ್ತು ಗಾವಾನ್ (ತೆಂಗಿನ ಹಾಲಿನಿಂದ ತಯಾರಾದ ಸಿಹಿ ಕ್ರೀಪ್‌ಗಳು) ಈ ಸಮುದಾಯದ ಆಹಾರದ ವಿಶಿಷ್ಟತೆಯನ್ನು ಪ್ರತಿಬಿಂಬಿಸುತ್ತವೆ.

“ಆಹಾರ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ನವಾಯತ್ ಪಾಕಶೈಲಿ ನಮ್ಮ ಪೀಳಿಗೆಗೆ ಸೊತ್ತಾದ ಅಮೂಲ್ಯ ಸಂಪತ್ತು. ಯುವಕರು ಇಂತಹ ಸ್ಪರ್ಧೆಗಳ ಮೂಲಕ ಆರೋಗ್ಯಕರ ಆಹಾರ ಸಂಸ್ಕೃತಿಯನ್ನು ಅಳವಡಿಸಿಕೊಂಡು, ಪೋಷಕಾಂಶಯುಕ್ತ ಜೀವನಶೈಲಿಯತ್ತ ಹೆಜ್ಜೆ ಇಡುವುದು ಕಾಲದ ಅವಶ್ಯಕತೆ. ನಮ್ಮ ಪಾರಂಪರ್ಯದ ರುಚಿಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ,” ಎಂದು ಸಂಸ್ಥೆಯ ಪ್ರಾಂಶುಪಾಲ ಲಿಯಾಖತ್ ಅಲಿ ಆಭಿಪ್ರಾಯಪಡುತ್ತಾರೆ.

ಆಧುನಿಕತೆಯ ಜಂಜಾಟದಲ್ಲಿ ಮರೆಯಾಗುತ್ತಿರುವ ಸಂಪ್ರದಾಯಆಧುನಿಕ ಜೀವನ ಶೈಲಿಯ ಒತ್ತಡದಲ್ಲಿ, ಜಂಕ್ ಫುಡ್ ಮತ್ತು ರೆಡಿ ಫುಡ್‌ನ ಆಕರ್ಷಣೆಯಿಂದಾಗಿ ಯುವತಿಯರು ಸಾಂಪ್ರದಾಯಿಕ ಆಹಾರದಿಂದ ದೂರವಾಗುತ್ತಿದ್ದಾರೆ.

ಈ ಬದಲಾವಣೆಗೆ ಬಹುಮುಖ್ಯ ಕಾರಣ, ಜಂಕ್ ಫುಡ್ ಆಕರ್ಷಣೆ, ಸಮಯದ ಕೊರತೆ,ಕೌಟುಂಬಿಕ ರಚನೆಯ ಬದಲಾವಣೆಯಾಗಿದೆ. ಸಾಂಪ್ರದಾಯಿಕ ಆಹಾರ ತಯಾರಿಕೆಯು ಸಮಯ ತೆಗೆದುಕೊಳ್ಳುತ್ತದೆ ಮತ್ತು ಕಷ್ಟಕರ ವಾಗಿದೆ. ಇಂದಿನ ವೇಗದ ಜಗತ್ತಿನಲ್ಲಿ ಯಾರಿಗೂ ಇಂತಹ ಖಾದ್ಯಗಳನ್ನು ದಿನನಿತ್ಯ ತಯಾರಿಸಲು ಸಮಯವಿಲ್ಲ." ಒಂದು ಖಾದ್ಯವನ್ನು ತಯಾರಿಸಲು ಒಂದು ದಿನವೇ ಬೇಕಾಗಬಹುದು. ಜಂಕ್ ಫುಡ್‌ನ ತಕ್ಷಣದ ಲಭ್ಯತೆ ಮತ್ತು ರುಚಿಯ ಆಕರ್ಷಣೆಯಿಂದಾಗಿ ಯುವತಿಯರು ಸಾಂಪ್ರದಾಯಿಕ ಆಹಾರದಿಂದ ದೂರವಾಗುತ್ತಿದ್ದಾರೆ. ಹಿಂದೆ ಜಂಟಿ ಕುಟುಂಬಗಳಲ್ಲಿ ಕೆಲಸವನ್ನು ಹಂಚಿಕೊಂಡು ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸಲಾಗುತ್ತಿತ್ತು. ಆದರೆ ಇಂದು ಏಕ ಕುಟುಂಬಗಳ ಹೆಚ್ಚಳದಿಂದ ಈ ಸಂಪ್ರದಾಯ ಕ್ಷೀಣಿಸುತ್ತಿದೆ.

ಈ ಎಲ್ಲ ಸವಾಲುಗಳ ನಡುವೆಯೂ, ಭಟ್ಕಳದ ಯುವತಿಯರು ತಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಝಹುರಾ ಗೌಹರ್‌ ರಂತಹವರು ತಮ್ಮ ಯೂಟ್ಯೂಬ್ ಚಾನೆಲ್ "ಗೌಹರ್ಸ್ ಕಿಚನ್" ಮೂಲಕ ಸಾಂಪ್ರದಾಯಿಕ ಖಾದ್ಯಗಳನ್ನು ಆಧುನಿಕ ರೀತಿಯಲ್ಲಿ ಪರಿಚಯಿಸುತ್ತಿದ್ದಾರೆ. ಖುಬುಸಾ ಪೊಲಿಗೆ ಆಧುನಿಕ ಟ್ವಿಸ್ಟ್ ನೀಡಿ ಯುವತಿಯರ ಗಮನ ಸೆಳೆಯುತ್ತಿದ್ದಾರೆ.

ಎಡುಶೆಫ್ ಸ್ಪರ್ಧೆ: ಒಂದು ಆಶಾದಾಯಕ ಕ್ರಮ: ಶಮ್ಸ್ ಪದವಿಪೂರ್ವ ಕಾಲೇಜಿನ "ಎಡುಶೆಫ್ ಸ್ಪರ್ಧೆ"ಯು ವಿದ್ಯಾರ್ಥಿನಿಯರಿಗೆ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಮತ್ತು ಸಾಂಪ್ರದಾಯಿಕ ಆಹಾರವನ್ನು ಜನಪ್ರಿಯ ಗೊಳಿಸಲು ಒಂದು ಅವಕಾಶವಾಗಿದೆ. ಈ ಸ್ಪರ್ಧೆಯು ನೈರ್ಮಲ್ಯ ಮತ್ತು ಕಲಾತ್ಮಕ ಪ್ರದರ್ಶನ, ರುಚಿ ಮತ್ತು ಸ್ವಾದ, ಸಾಂಪ್ರದಾಯಿಕತೆಯನ್ನು ಎತ್ತಿಹಿಡಿಯುವಿಕೆಯಂತಹ ಮಾನದಂಡಗಳ ಮೂಲಕ ಆಹಾರದ ಮೌಲ್ಯವನ್ನು ತಿಳಿಸುತ್ತದೆ.

ಇಂದಿನ ಆಧುನಿಕ ಯುವತಿಯರು ಸಂಸ್ಕೃತಿಯ ಈ ಅಮೂಲ್ಯ ಆಹಾರ ಪರಂಪರೆಯನ್ನು ಉಳಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಕು. ಗುಲಿಯಾನ್ ಗೊಡಾನ್, ಗಾವಾನ್, ಚೊಂಗೆ ಇತ್ಯಾದಿಗಳಂತಹ ಖಾದ್ಯಗಳು ಕೇವಲ ಆಹಾರವಲ್ಲ, ಇದು ನಮ್ಮ ಹಿರಿಯರ ಶ್ರಮ, ಸಂಸ್ಕೃತಿಯ ಗುರುತು ಮತ್ತು ಆರೋಗ್ಯಕರ ಜೀವನದ ಸಂಕೇತ ವಾಗಿವೆ. ಇವುಗಳನ್ನು ಕಲಿಯುವುದು, ತಯಾರಿಸುವುದು ಮತ್ತು ಇತರರಿಗೆ ಪರಿಚಯಿಸುವುದು ನವಾಯತ್ ಸಮುದಾಯದ ಗುರುತನ್ನು ಉಳಿಸುವ ಕಾರ್ಯವಾಗಿದೆ.

ಭಟ್ಕಳಿ ನವಾಯತ್ ಸಮುದಾಯದ ನಾಷ್ಟವು ಕೇವಲ ಆಹಾರವಲ್ಲ; ಇದು ಒಂದು ಸಾಂಸ್ಕೃತಿಕ ಗುರುತು, ಆರೋಗ್ಯಕರ ಜೀವನದ ಸಂಕೇತ ಮತ್ತು ಶತಮಾನಗಳ ಇತಿಹಾಸವನ್ನು ಒಳಗೊಂಡಿದೆ. ಆಧುನಿಕತೆಯ ಒತ್ತಡದ ನಡುವೆಯೂ, ಯುವತಿಯರು ಈ ಸಂಪ್ರದಾಯವನ್ನು ಜೀವಂತವಾಗಿಡಲು ಕೊಡುಗೆ ನೀಡುತ್ತಿರುವುದು ಆಶಾದಾಯ ಕವಾಗಿದೆ. ಎಡುಶೆಫ್ ಸ್ಪರ್ಧೆಯಂತಹ ಕಾರ್ಯಕ್ರಮಗಳು ಈ ಆಹಾರ ಪರಂಪರೆಯನ್ನು ಮುಂದಿನ ತಲೆಮಾರಿಗೆ ಒಯ್ಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

-ಎಂ.ಆರ್. ಮಾನ್ವಿ



























share
ವಾರ್ತಾಭಾರತಿ
ವಾರ್ತಾಭಾರತಿ
Next Story
X