ವಿಜಯನಗರ |ಜುಲೈ 4 ರಂದು ಮದ್ಯ ಮಾರಾಟ ನಿಷೇಧ: ಡಿಸಿ ಕವಿತಾ ಎಸ್ ಮನ್ನಿಕೇರಿ

ಹೊಸಪೇಟೆ: ಹೊಸಪೇಟೆ ನಗರದಲ್ಲಿ ಜುಲೈ 4 ರಿಂದ 5ರವರೆಗೆ ಮದ್ಯ ಮಾರಾಟ ನಿಷೇಧಿಸಿ ಡಿಸಿ ಕವಿತಾ ಎಸ್ ಮನ್ನಿಕೇರಿ ಆದೇಶ ನೀಡಿದ್ದಾರೆ.
ಹೊಸಪೇಟೆ ಉಪವಿಭಾಗದ ಒಟ್ಟು 75 ಸ್ಥಳಗಳಲ್ಲಿ ಇದೇ ಜುಲೈ 5ರವರಿಗೆ ಛೋಟಾ ಮೊಹರಂ ಪಂಜಾಗಳನ್ನು ಕೂಡಿಸಲಾಗುತ್ತಿದ್ದು, ಛೋಟಾ ಮೊಹರಂ ಹಬ್ಬವು ಶಾಂತಿಯುತವಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಜುಲೈ 4 ರಂದು ಬೆಳಗ್ಗೆ 6 ರಿಂದ ಜುಲೈ 5ರ ಬೆಳಗ್ಗೆ 6ಗಂಟೆಯವರೆಗೆ ಮದ್ಯ ಮಾರಾಟ ಮತ್ತು ಸಾಗಣೆ ಮಾಡದಂತೆ ಹಾಗೂ ಮದ್ಯದಂಗಡಿ, ಬಾರ್ ಅಂಡ್ ರೆಸ್ಟೋರೆಂಟ್ ಮುಚ್ಚುವಂತೆ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಅವರು ಆದೇಶಿಸಿದ್ದಾರೆ.
Next Story




