Vijayanagara | ಅರಣ್ಯ ಇಲಾಖೆಯ ದಿನಗೂಲಿ ನೌಕರರಿಂದ ಕನಿಷ್ಠ ವೇತನಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ

ಹೊಸಪೇಟೆ: ವಿಜಯನಗರ ಜಿಲ್ಲಾ ಅರಣ್ಯ ಇಲಾಖೆ ದಿನಗೂಲಿ ನೌಕರ ಸಂಘದಿಂದ ದಿನಗೂಲಿ ಹಾಗೂ ಹೊರಗುತ್ತಿಗೆಯಲ್ಲಿನ ಸಿಬ್ಬಂದಿಗಳಿಗೆ ಕನಿಷ್ಠ ವೇತನ ಪರಿಷ್ಕೃತ ದರಗಳಂತೆ ವೇತನ ಪಾವತಿ ಮಾಡುವ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ವಿಜಯನಗರ ಜಿಲ್ಲಾ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ಚಂದ್ರಪ್ಪ, "ಸರ್ಕಾರ ಕಾರ್ಮಿಕ ಇಲಾಖೆ ಪತ್ರದಲ್ಲಿನ ವಿವಿಧ ಅನುಸೂಚಿತ ಏಕರೂಪದ ಕರಡು ಅಧಿಸೂಚನೆಯಲ್ಲಿ ಕನಿಷ್ಠ ವೇತನ ದರಗಳನ್ನು ದರಗಳ ಕಾರ್ಮಿಕರಾಗಿ ಸಮಾನವಾದ ಕನಿಷ್ಠ ವೇತನ ದೊರೆಯಬೇಕೆಂಬುದು ಮಾನ್ಯ ಉಚ್ಚ ನ್ಯಾಯಾಲಯದ ತೀರ್ಪಿನ ನಿರ್ದೇಶನ ಅನ್ವಯ ಮಾ/ ರೆಫರೆನ್ಸ್ ಬಿಟ್ ಅಂಡ್ ಕಂಪನಿ ಪಕ್ಕದಲ್ಲಿರುವ ಮಾನವ ಬಲಗಳ ಅನ್ವಯ ಕಾರ್ಮಿಕರ ಕನಿಷ್ಠ ವೇತನ ದರಗಳನ್ನು ಪರಿಷ್ಕರಿಸಲು ಯಾವುದೇ ರೀತಿಯ ಅಡೆತಡೆಗಳು ಹಂತದಲ್ಲಿ ಇಲ್ಲದೇ ಇರುವುದರಿಂದ ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನ್ವಯ ಕನಿಷ್ಠ ವೇತನವನ್ನು ಪರಿಷ್ಕರಿಸಲು 11/ 04 /2025 ರಂದು ಹೊರಡಿಸಲಾದ ಏಕರೂಪದ ಕರಡು ಅಧಿಸೂಚನೆಗೆ ರಾಜ್ಯ ಸರ್ಕಾರದ ಉದ್ಯೋಗದಾರರಿಗೆ ಕನಿಷ್ಠ ವೇತನ ಕಾಯ್ದೆ 1948ರ ಕಲಂ 3(1)(ಬ ) ಮತ್ತು5(1)(ಅ ) ಅಡಿಯಲ್ಲಿನ ರಾಜ್ಯ ಸರ್ಕಾರಕ್ಕೆ ಪ್ರಸ್ತುತ ಅಧಿಕಾರವನ್ನು ಚಲಾಯಿಸಿ ಕನಿಷ್ಠ ವೇತನ ದರಗಳನ್ನು ತಿದ್ದುಪಡೆ ಅನುಮೋದನೆ ಮಾಡಿ ಪರಿಷ್ಕೃತ ಅಧಿಸೂಚನೆಯನ್ನು ಹೊರಡಿಸಬೇಕು" ಎಂದು ಹೇಳಿದರು.
ನಂತರ ವಿಜಯನಗರ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಎಸ್ ಶಿವಣ್ಣ ಮಾತನಾಡಿ ವಿಜಯನಗರ ಪ್ರಾದೇಶಿಕ ವಿಭಾಗ ವ್ಯಾಪ್ತಿಯಲ್ಲಿರುವ ಸಾಮಾಜಿಕ ವನ್ಯಜೀವ ವಲಯಗಳಲ್ಲಿ 290 ದಿನಗೂಲಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಈ ಮೇಲಿನ ಅಧಿಸೂಚನೆಯಂತೆ ಮತ್ತು ಮೇಲಿನ ದಿನಾಂಕದಿಂದ ಅನ್ವಯವಾಗುವಂತೆ ಕನಿಷ್ಠ ವೇತನ ನೀಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಇ ಬಾಲಕೃಷ್ಣಪ್ಪ ಈ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿ ತಮ್ಮ ಬೇಡಿಕೆಗಳನ್ನು ನಿಯಮಾನುಸಾರ ಆದಷ್ಟು ಬೇಗ ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.






