Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಉಡುಪಿಯಲ್ಲಿ ಕಾಣಸಿಗುವ ಅಪರೂಪದ ತೋಳ ಹಾವು...

ಉಡುಪಿಯಲ್ಲಿ ಕಾಣಸಿಗುವ ಅಪರೂಪದ ತೋಳ ಹಾವು !

ವರದಿ: ನಝೀರ್ ಪೊಲ್ಯವರದಿ: ನಝೀರ್ ಪೊಲ್ಯ3 Nov 2025 8:11 AM IST
share
ಉಡುಪಿಯಲ್ಲಿ ಕಾಣಸಿಗುವ ಅಪರೂಪದ ತೋಳ ಹಾವು !
ಕಟ್ಟುಗಳಿಲ್ಲದ ವಿಶಿಷ್ಟ ಹಾವು : ಹೆಚ್ಚಿನ ಅಧ್ಯಯನಕ್ಕೆ ಉರಗ ತಜ್ಞರ ಒಲವು

ಉಡುಪಿ: ಉಡುಪಿ ಜಿಲ್ಲಾದ್ಯಂತ ಸಾಮಾನ್ಯವಾಗಿ ಕಂಡು ಬರುವ ತೋಳ ಹಾವು ಇತರ ತೋಳ ಹಾವುಗಳಿಗಿಂತ ಬಹಳಷ್ಟು ವಿಶೇಷವಾಗಿದ್ದು, ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಬೇಕೆಂಬುದು ಉರಗ ತಜ್ಞರ ಅಭಿಪ್ರಾಯವಾಗಿದೆ.

ಪ್ರಕೃತಿಯ ಒಂದು ಪ್ರಮುಖ ಭಾಗವಾಗಿರುವ ಹಾವುಗಳು, ಭೂಮಿಯ ಪರಿಸರದಲ್ಲಿನ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಆಹಾರ ಸರಪಳಿಯಲ್ಲಿ ಒಂದು ಕೊಂಡಿಯಾಗಿ, ಇಲಿ, ಕಪ್ಪೆ, ಕ್ರಿಮಿಕೀಟಗಳನ್ನು ತಿನ್ನುವ ಮೂಲಕ ಕೀಟಗಳ ನಿಯಂತ್ರಣದಲ್ಲೂ ಹಾವುಗಳು ಮುಂಚೂಣಿಯಲ್ಲಿವೆ. ಹಾವುಗಳಿರುವ ಪರಿಸರವು ಆರೋಗ್ಯಕರ ಜೀವ ವೈವಿಧ್ಯದಿಂದ ಕೂಡಿರುತ್ತದೆ. ಈ ಮೂಲಕ ಅವುಗಳು ಉತ್ತಮ ಪರಿಸರದ ಸೂಚಕಗಳು ಕೂಡ ಆಗಿವೆ.

ಉಡುಪಿ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಈವರೆಗೆ 30-32 ಪ್ರಭೇದಗಳ ಹಾವುಗಳು ಕಂಡುಬಂದಿವೆ. ಅವುಗಳಲ್ಲಿ ನಾಗರಹಾವು, ಕಡಂಬಲ, ಕನ್ನಡಿ ಹಾವು, ಗರಗಸ ಹುರುಪಿನ ಮಂಡಲ ಹಾವು, ಕಾಳಿಂಗ ಸರ್ಪ ಸೇರಿದಂತೆ ಏಳೆಂಟು ಪ್ರಭೇದದ ಹಾವುಗಳು ವಿಷಕಾರಿಯಾಗಿವೆ. ಉಳಿದಂತೆ ಬಹುತೇಕ ಹಾವುಗಳು ವಿಷರಹಿತ ಹಾವುಗಳು. ಅದರಲ್ಲಿ ಈ ತೋಳ ಹಾವು ಕೂಡ ಒಂದು. ಇದನ್ನು ಆಂಗ್ಲ ಭಾಷೆಯಲ್ಲಿ ಕಾಮನ್ ವೂಲ್ಫ್ ಸ್ನೇಕ್ ಎಂಬುದಾಗಿ ಕರೆಯಲಾಗುತ್ತದೆ.

ವಿಶೇಷ ತೋಳ ಹಾವು :

ಭಾರತದ ಎಲ್ಲ ಕಡೆಗಳಲ್ಲಿ ಕಂಡುಬರುವ ಸಾಮಾನ್ಯ ತೋಳ ಹಾವು ಬೂದು, ಕಡು ಕಂದು, ಕಪ್ಪು ಬಣ್ಣಗಳಿಂದ ಕೂಡಿದ್ದು, ಅದಕ್ಕೆ ಬಿಳಿ ಅಥವಾ ಹಳದಿ ಬಣ್ಣದ ಕಟ್ಟುಗಳು ಇರುತ್ತವೆ. ಇವು ಉಡುಪಿ ಜಿಲ್ಲೆಯಲ್ಲೂ ಕಾಣಸಿಗುತ್ತವೆ.

ಈ ಹಾವುಗಳಲ್ಲಿ ಸಾಮಾನ್ಯ ತೋಳ ಹಾವು ಹೊರತುಪಡಿಸಿ ಇನ್ನೆರಡು ಪ್ರಭೇದದವುಗಳು ಕೂಡ ಇವೆ. ಅದರಲ್ಲಿ ಒಂದು ಟ್ರಾವೆಂಕೋರ್ ವೂಲ್ಫ್ ಸ್ನೇಕ್, ಇನ್ನೊಂದು ಬ್ಯಾರೆಡ್ ವೂಲ್ಫ್ ಸ್ನೇಕ್. ಈ ಹಾವುಗಳು ಕೂಡ ಉಡುಪಿ ಜಿಲ್ಲೆಯಲ್ಲಿ ಕಂಡುಬರುತ್ತವೆ. ಇದರೊಂದಿಗೆ ಉಡುಪಿ ಜಿಲ್ಲಾದ್ಯಂತ ಹಾಗೂ ದ.ಕ. ಜಿಲ್ಲೆಯ ಕೆಲವು ಭಾಗಗಳಲ್ಲಿ ಯಾವುದೇ ಕಟ್ಟುಗಳು ಇಲ್ಲದ ಕಂದುಬಣ್ಣದ ಸಾಮಾನ್ಯ ತೋಳ ಹಾವು ಕಾಣಸಿಗುತ್ತಿರುವುದು ವಿಶೇಷವೆನಿಸಿದೆ.

ಹೆಚ್ಚಿನ ಅಧ್ಯಯನ ಅಗತ್ಯ :

ಈ ಶರೀರ ಬಣ್ಣದ ತೋಳ ಹಾವುಗಳು ಈವರೆಗೆ ಉಡುಪಿ, ದಕ. ಜಿಲ್ಲೆಯನ್ನು ಹೊರತುಪಡಿಸಿ ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ಅಥವಾ ಬೇರೆ ಯಾವುದೇ ರಾಜ್ಯಗಳಲ್ಲಿ ಕಾಣಸಿಕ್ಕಿರುವ ಮಾಹಿತಿ ಇಲ್ಲ. ಆದರೂ ಇದು ಸಾಮಾನ್ಯ ತೋಳ ಹಾವೇ ಎಂಬುದೂ ದಾಖಲಾಗಿದೆ. ಆದರೆ ಇದರ ಶರೀರ ಬಣ್ಣ ಬೇರೆ ತೋಳ ಹಾವಿನಂತೆ ಇಲ್ಲ ಎಂಬುದೇ ಗಮನಾರ್ಹ.

ಈ ಶರೀರ ಬಣ್ಣದ ನೂರಾರು ಹಾವುಗಳು ಉಡುಪಿ ಜಿಲ್ಲೆಯಲ್ಲಿ ಹಲವು ಕಡೆಗಳಲ್ಲಿ ಕಂಡುಬಂದಿವೆ. ಈ ಹಾವಿನ ಗುಣ ಸ್ವಭಾವ, ಸಂಚಾರದ ಕ್ರಮ, ಶರೀರದ ಮೇಲಿನ ಪೊರೆಯ ಹುರುಪುಗಳು ಇತರ ತೋಳ ಹಾವಿನಂತೆಯೇ ಇದೆ. ಆದರೆ ವಿಶೇಷವೆಂದರೆ ಈ ಹಾವಿನ ಶರೀರ ಬಣ್ಣದಲ್ಲಿ ಯಾವುದೇ ಕಟ್ಟುಗಳು ಇಲ್ಲ. ಆದುದರಿಂದ ಈ ಹಾವಿನ ಬಗ್ಗೆ ಹೆಚ್ಚಿನ ಅಧ್ಯಯನ ಆಗಬೇಕಾಗಿದೆ. ಈ ಹಾವು ತೋಳ ಹಾವಿನ ಪ್ರಭೇದವೇ ಅಥವಾ ಉಪ ಪ್ರಭೇದವೇ ಎಂಬುದರ ಕುರಿತು ಇನ್ನಷ್ಟು ಅಧ್ಯಯನ ಆಗಬೇಕು ಎನ್ನುತ್ತಾರೆ ಉರಗ ತಜ್ಞ ಗುರುರಾಜ್ ಸನಿಲ್.

ತೋಳಹಾವಿನ ಜೀವನಕ್ರಮ:

ಈ ಪ್ರಭೇದದ ಹಾವುಗಳ ಬಾಯಿಯ ಮುಂಭಾಗದಲ್ಲಿ ಉದ್ದನೆ ಹಲ್ಲುಗಳಿದ್ದು, ಅವು ತೋಳದ ಹಲ್ಲುಗಳನ್ನು ಹೋಲುತ್ತವೆ. ಆದ್ದರಿಂದ ಇದಕ್ಕೆ ‘ತೋಳ ಹಾವು’ ಎಂದು ಹೆಸರು ಇಡಲಾಗಿದೆ. ಇದನ್ನು ತುಳುವಿನಲ್ಲಿ ‘ಬುಲಕರಿ’ ಎಂಬುದಾಗಿ ಕರೆಯಲಾಗುತ್ತದೆ.

ತೋಳಹಾವು ಸುಮಾರು 70 ಸೆ.ಮೀ. ಉದ್ದ ಬೆಳೆಯುತ್ತದೆ. ಸಾಮಾನ್ಯವಾಗಿ ಇವು ಸಂಜೆ ಹಾಗೂ ರಾತ್ರಿಯಿಡೀ ಸಂಚಾರ ಮಾಡುತ್ತವೆ. ಮಿಲನ ಕಾಲದಲ್ಲಿ ಇವು ಹಗಲಿನಲ್ಲೂ ಕಾಣಿಸಿಕೊಳ್ಳುತ್ತವೆ.

ಮನೆಯೊಳಗೆ ಒಂದು ಹೆಣ್ಣು ಹಾವು ಇದ್ದರೆ, ಅವು ಹೊರಸೂಸುವ ವಾಸನೆಗೆ ಗಂಡು ಹಾವುಗಳು ಬರುವುದು ಕೂಡ ಉಡುಪಿಯಲ್ಲಿ ಕಂಡುಬಂದಿದೆ. ಇದು ಅಪಾಯಕಾರಿ ಜೀವಿಗಳಲ್ಲ. ವಿಷರಹಿತ ಹಾವು. ಮನೆಯೊಳಗೆ ಕ್ರಿಮಿಕೀಟ, ಹಲ್ಲಿ, ಹಲ್ಲಿಗಳ ಮೊಟ್ಟೆಗಳು, ಇಲಿ ಮರಿ ಜಾಸ್ತಿ ಇದ್ದಾಗ ಅವುಗಳನ್ನು ತಿನ್ನಲು ಬರುತ್ತವೆ. ಹಾಗಾಗಿ ಈ ಬಗ್ಗೆ ಭಯಪಡಬೇಕಾಗಿಲ್ಲ.

ಇದರ ಸಂತಾನ್ಪೋತ್ತತಿ ಕಾಲ ಮಾರ್ಚ್‌ನಿಂದ ಜನವರಿಯವರೆಗೆ. ಕೆಲವೊಮ್ಮೆ ಮಾರ್ಚ್‌ನಲ್ಲೇ ಮೊಟ್ಟೆ ಇಟ್ಟು ಮರಿ ಮಾಡಿದ ಉದಾಹರಣೆಗಳಿವೆ. ಯಾವ ಪ್ರದೇಶದಲ್ಲಿ ಈ ಹಾವುಗಳ ಸಂಖ್ಯೆ ಪ್ರಕೃತಿಯ ಲೆಕ್ಕಾಚಾರಕ್ಕಿಂತ ಕಡಿಮೆ ಇವೆಯೋ ಅಂತಹ ಪ್ರದೇಶಗಳಲ್ಲಿ ಮಾತ್ರ ಈ ಹಾವುಗಳು ಸಂತಾನೋತ್ಪತ್ತಿ ಮಾಡುತ್ತವೆ. ಹಳೆಮನೆ, ದಾರಂದ ಎಡೆಯ ಬಿಲಗಳು, ಬಿರುಕು ಬಿಟ್ಟ ಗೋಡೆ, ಮಾಡಿನ ಎಡೆ, ಪಾಳುಬಿದ್ದ ಮನೆಗಳ ಒಳಗೆ ಇವು ವಾಸ ಮಾಡಿ, ಅಲ್ಲೇ ಸಂತಾನೋತ್ಪತ್ತಿ ಮಾಡಿ ಬದುಕು ನಡೆಸುತ್ತವೆ ಎಂದು ಗುರುರಾಜ್ ಸನಿಲ್ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಮಾತ್ರ ಕಂಡುಬರುವ ಕಟ್ಟುಗಳಿಲ್ಲದ ತೋಳ ಹಾವನ್ನು ಹೆಚ್ಚಿನವರು ನಾಗರಹಾವಿನ ಮರಿ ಎಂಬುದಾಗಿ ತಪ್ಪು ತಿಳಿದು ಕೊಳ್ಳುತ್ತಾರೆ. ಆದುದರಿಂದ ನಮ್ಮ ಮನೆ ಸುತ್ತಮುತ್ತ ಪರಿಸರದಲ್ಲಿ ಕಂಡು ಬರುವ ಈ ಹಾವನ್ನು ಆಳವಾಗಿ ಗಮನಿಸಿ ಗುರುತಿಸಿಕೊಂಡು ಅದರ ಪಾಡಿಗೆ ಬಿಟ್ಟು ಬಿಡಬೇಕು. ಮನೆಯೊಳಗೆ ಬಂದ ಬಕೆಟ್ ಒಳಗೆ ಅಥವಾ ಬೇರೆ ಸಾಧನಗಳ ಮೂಲಕ ಹೊರಗೆ ಹಾಕಿ. ಈ ಹಾವಿನಿಂದ ಯಾವುದೇ ಅಪಾಯ ಇಲ್ಲ.

ಗುರುರಾಜ್ ಸನಿಲ್, ಉರಗ ತಜ್ಞರು, ಉಡುಪಿ


share
ವರದಿ: ನಝೀರ್ ಪೊಲ್ಯ
ವರದಿ: ನಝೀರ್ ಪೊಲ್ಯ
Next Story
X