Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪೂರ್ಣ ಪ್ರಮಾಣದಲ್ಲಿ ಪಾವತಿಯಾಗದ ಬರ...

ಪೂರ್ಣ ಪ್ರಮಾಣದಲ್ಲಿ ಪಾವತಿಯಾಗದ ಬರ ಪರಿಹಾರದ ಮೊತ್ತ: ಆರೋಪ

-ಜಿ.ಮಹಾಂತೇಶ್-ಜಿ.ಮಹಾಂತೇಶ್13 Jun 2024 10:28 AM IST
share
ಪೂರ್ಣ ಪ್ರಮಾಣದಲ್ಲಿ ಪಾವತಿಯಾಗದ ಬರ ಪರಿಹಾರದ ಮೊತ್ತ: ಆರೋಪ

ಬೆಂಗಳೂರು: ಆಡಳಿತ ಪಕ್ಷದ ಶಾಸಕರು ಪ್ರತಿನಿಧಿಸುವ ವಿಧಾನಸಭೆ ಕ್ಷೇತ್ರಗಳಿಗೂ 2023ನೇ ಸಾಲಿನ ಪೂರ್ಣ ಪ್ರಮಾಣದಲ್ಲಿ ಬರ ಪರಿಹಾರವು ದೊರೆತಿಲ್ಲ. ಹೀಗಾಗಿ ಹಲವು ಶಾಸಕರು ಬಹುಮಹಡಿ ಕಟ್ಟಡದಲ್ಲಿರುವ ಕಂದಾಯ ಇಲಾಖೆಗೆ ದಾಂಗುಡಿಯಿಡುತ್ತಿದ್ದಾರೆ.

ಬರ ಪೀಡಿತ ಪ್ರದೇಶಗಳ ರೈತರಿಗೆ ಮೊದಲ ಮತ್ತು ಎರಡನೇ ಕಂತಿನ ಪರಿಹಾರದ ಮೊತ್ತವನ್ನು ವಿತರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಭರ್ಜರಿ ಪ್ರಚಾರ ತೆಗೆದುಕೊಂಡಿದ್ದರು. ಅಲ್ಲದೆ 16 ಲಕ್ಷ ಸಣ್ಣ, ಅತೀ ಸಣ್ಣ ರೈತರಿಗೆ ತಲಾ 3,000 ರೂ.ನಂತೆ ಪರಿಹಾರ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದರು. ಆದರೆ ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೂ ಪೂರ್ಣ ಪ್ರಮಾಣದಲ್ಲಿ ಬರ ಪರಿಹಾರದ ಮೊತ್ತವನ್ನು ಪಾವತಿಸಿಲ್ಲ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.

2023ರ ಬರ ಪರಿಹಾರವನ್ನು ರೈತರಿಗೆ ವಿತರಣೆ ಮಾಡುವ ಸಂಬಂಧ ನವಲಗುಂದ ವಿಧಾನಸಭೆ ಕ್ಷೇತ್ರದ ಶಾಸಕ ಎನ್.ಎಚ್.ಕೋನರೆಡ್ಡಿ ಅವರು ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರವನ್ನು ಬರೆದಿದ್ದರು. ಈ ಪತ್ರವನ್ನಾಧರಿಸಿ ವಿಪತ್ತು ನಿರ್ವಹಣೆ ವಿಭಾಗದ ಸರಕಾರದ ಪ್ರಧಾನ ಕಾರ್ಯದರ್ಶಿಯು ಧಾರವಾಡ ಜಿಲ್ಲಾಧಿಕಾರಿಗೆ 2024ರ ಜನವರಿ 11ರಂದು ಪತ್ರ (ಸಂಖ್ಯೆ; ಕಂಇ 166 ಟಿಎನ್ಆರ್ಎಫ್ಎಫ್ 2024) ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ಣhe-ಜಿiಟe.iಟಿ’ಗೆ ಲಭ್ಯವಾಗಿದೆ.

ಪತ್ರದಲ್ಲೇನಿದೆ?: ನವಲಗುಂದ ವಿಧಾನಸಭೆ ಕ್ಷೇತ್ರದ ಶಾಸಕ ಎನ್.ಎಚ್.ಕೋನರೆಡ್ಡಿ ಅವರು ತಮ್ಮ ಕ್ಷೇತ್ರದ ಕೆಲವು ರೈತರಿಗೆ ಬರ ಪರಿಹಾರ ವಿತರಣೆಯಾಗಿಲ್ಲ ಎಂದು ತಿಳಿಸಿದ್ದು, ಶಾಸಕರ ಕೋರಿಕೆ ಮೇರೆಗೆ ಕೇಂದ್ರ ಸರಕಾರದ ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ಮಾರ್ಗಸೂಚಿಗಳನ್ವಯ ಹಾಗೂ ಕಾಲಕಾಲಕ್ಕೆ ಸರಕಾರದಿಂದ ಹೊರಡಿಸಲಾಗಿರುವ ಅಧಿಸೂಚನೆ, ಆದೇಶ, ಸುತ್ತೋಲೆಗಳ ಅನ್ವಯ ಸಂಬಂಧಿಸಿದವರಿಗೆ ಹಿಂಬರಹ ನೀಡಬೇಕು ಎಂದು ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಯು ಧಾರವಾಡ ಜಿಲ್ಲಾಧಿಕಾರಿಗೆ ನಿರ್ದೇಶಿಸಿದ್ದಾರೆ.

ಮೊದಲ ಹಂತದ ಇನ್ಪುಟ್ ಸಬ್ಸಿಡಿ ಪೈಕಿ 33.58 ಲಕ್ಷ ರೈತರಿಗೆ 636.45 ಕೋಟಿ ರೂ. ಪರಿಹಾರ ಮೊತ್ತ ಪಾವತಿಸಿದೆ. ಆದರೆ ಇದೇ ಮೊದಲ ಹಂತದಲ್ಲಿ ಪೂರ್ಣ ಮೊತ್ತವನ್ನು ಪಡೆದ ರೈತರ ಸಂಖ್ಯೆ ಕೇವಲ 4.36 ಲಕ್ಷ ಮಾತ್ರ. ಪೂರ್ಣ ಮೊತ್ತದ ಪರಿಹಾರ 29.22 ಲಕ್ಷ ರೈತರಿಗೆ ದೊರೆಯಬೇಕಿತ್ತು.

ದತ್ತಾಂಶಗಳ ಪಟ್ಟಿ

ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ಸಚಿವಾಲಯವು 2024ರ ಮೇ 9ರಂದು ಆಯೋಜಿಸಿದ್ದ ಅಧಿಕಾರಿಗಳೊಂದಿಗಿನ ವೀಡಿಯೊ ಸಂವಾದ ಕಾರ್ಯಕ್ರಮದಲ್ಲಿ ಈ ದತ್ತಾಂಶಗಳನ್ನು ಮಂಡಿಸಲಾಗಿತ್ತು. ಈ ದತ್ತಾಂಶಗಳ ಪ್ರಕಾರ ಬೆಳಗಾವಿಯಲ್ಲಿ ಮೊದಲ ಹಂತದಲ್ಲಿ 3,52,205 ರೈತರಿಗೆ 65.47 ಕೋಟಿ ರೂ.ಪಾವತಿಯಾಗಿದೆ. ಆದರೆ ಇದೇ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 70,587 ರೈತರಿಗೆ ಮಾತ್ರ 12.01 ಕೋಟಿ ರೂ.ನ ಪೂರ್ಣ ಮೊತ್ತ ಪಾವತಿಸಿದೆ. ಇನ್ನೂ 2.81 ಲಕ್ಷ ರೈತರಿಗೆ ಪೂರ್ಣ ಮೊತ್ತ ಪಾವತಿಸಲು ಬಾಕಿ ಉಳಿಸಿಕೊಂಡಿರುವುದು ದತ್ತಾಂಶಗಳಿಂದ ಕಂಡುಬಂದಿದೆ.

ಕಲಬುರಗಿಯಲ್ಲಿ ಮೊದಲ ಹಂತದಲ್ಲಿ 2,68,722 ರೈತರಿಗೆ 53.33 ಕೋಟಿ ರೂ. ಪಾವತಿಯಾಗಿದೆ. ಈ ಪೈಕಿ 4,561 ರೈತರಿಗಷ್ಟೇ 0.88 ಕೋಟಿ ಪೂರ್ಣ ಮೊತ್ತ ಪಾವತಿಯಾಗಿದೆ. ಇನ್ನೂ 2,64,161 ರೈತರಿಗೆ ಮೊದಲ ಹಂತದ ಪೂರ್ಣ ಮೊತ್ತ ಪಾವತಿಯಾಗಬೇಕಿದೆ. ವಿಜಯಪುರ ಜಿಲ್ಲೆಯ 2,52,901 ರೈತರಿಗೆ 50.39 ಕೋಟಿ ರೂ. ಪಾವತಿಯಾಗಿದೆ. ಈ ಪೈಕಿ ಕೇವಲ 2,805 ರೈತರಿಗೆ 0.47 ಕೋಟಿ ರೂ. ಮಾತ್ರ ಪೂರ್ಣ ಮೊತ್ತ ಪಾವತಿಯಾಗಿದೆ. ಇನ್ನೂ 2,50,096 ರೈತರಿಗೆ ಪೂರ್ಣ ಮೊತ್ತ ಪಾವತಿಸಲು ಬಾಕಿ ಇರುವುದು ಗೊತ್ತಾಗಿದೆ.

ಹಾಸನ ಜಿಲ್ಲೆಯಲ್ಲಿ 2,03,963 ರೈತರಿಗೆ 37.31 ಕೋಟಿ ರೂ. ಪಾವತಿಸಲಾಗಿದೆ. ಈ ಪೈಕಿ 41,737 ರೈತರಿಗಷ್ಟೇ 6.46 ಕೋಟಿ ರೂ. ಪೂರ್ಣ ಮೊತ್ತ ದೊರೆತಿದೆ. ಇನ್ನೂ 1,62,226 ರೈತರಿಗೆ ಪೂರ್ಣ ಮೊತ್ತ ಪಾವತಿಯಾಗಬೇಕಿದೆ. ಹಾವೇರಿಯಲ್ಲಿ 1,87,092 ರೈತರಿಗೆ 35.59 ಕೋಟಿ ರೂ. ಪಾವತಿಸಲಾಗಿದೆ. ಈ ಪೈಕಿ 24,172 ರೈತರಿಗಷ್ಟೇ ಪೂರ್ಣ ಮೊತ್ತ 4.02 ಕೋಟಿ ರೂ. ಪಾವತಿಯಾಗಿದೆ. ಇನ್ನೂ 1,62,920 ರೈತರಿಗೆ ಪೂರ್ಣ ಮೊತ್ತ ಸಿಗಬೇಕಿದೆ.

ತುಮಕೂರು ಜಿಲ್ಲೆಯಲ್ಲಿ 1,86,193 ರೈತರಿಗೆ 33.53 ಕೋಟಿ ರೂ. ಪಾವತಿಯಾಗಿದೆ. ಈ ಪೈಕಿ 41,890 ರೈತರಿಗಷ್ಟೇ ಪೂರ್ಣ ಮೊತ್ತದ ರೂಪದಲ್ಲಿ 6.46 ಕೋಟಿ ರೂ. ಪಾವತಿಯಾಗಿದೆ. 1,44,303 ರೈತರಿಗೆ ಪೂರ್ಣ ಮೊತ್ತ ಇನ್ನೂ ಪಾವತಿಯಾಗಬೇಕಿರುವುದು ದತ್ತಾಂಶಗಳಿಂದ ತಿಳಿದು ಬಂದಿದೆ. ಬೀದರ್ನಲ್ಲಿ 1,47,085 ರೈತರಿಗೆ 28.31 ಕೋಟಿ ರೂ. ಪರಿಹಾರ ಮೊತ್ತ ದೊರೆತಿದೆ. ಈ ಪೈಕಿ 14,220 ರೈತರಿಗೆ 2.79 ರೂ. ಕೋಟಿಯಷ್ಟೇ ಪೂರ್ಣ ಮೊತ್ತ ಪಾವತಿಯಾಗಿದೆ. ಇನ್ನೂ 1,32,865 ರೈತರಿಗೆ ಪೂರ್ಣ ಮೊತ್ತ ಪಾವತಿಸಬೇಕಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ 1,31,776 ರೈತರಿಗೆ 25.62 ಕೋಟಿ ರೂ. ಪಾವತಿಯಾಗಿದೆ. ಇದೇ ಮೊದಲ ಹಂತದಲ್ಲಿ 9,585 ರೈತರಿಗೆ ರೂ.1.58 ಕೋಟಿಯಷ್ಟೇ ಮೊದಲ ಹಂತ ಪಾವತಿಯಾಗಿದೆ. ಇನ್ನೂ 1,22,191 ರೈತರಿಗೆ ಪೂರ್ಣ ಪರಿಹಾರ ದೊರೆಯಬೇಕಿರುವುದು ದತ್ತಾಂಶದಿಂದ ಗೊತ್ತಾಗಿದೆ. ರಾಯಚೂರಿನಲ್ಲಿ 1,21,928 ರೈತರಿಗೆ 24.19 ಕೋಟಿ ರೂ.ಪಾವತಿಯಾಗಿದೆ. ಇದರಲ್ಲಿ 2,549 ರೈತರಿಗಷ್ಟೇ 0.45 ಕೋಟಿ ರೂ.ಲೆಕ್ಕದಲ್ಲಿ ಪೂರ್ಣ ಮೊತ್ತ ಪಾವತಿಯಾಗಿದೆ. 1,19,379 ರೈತರಿಗೆ ಪೂರ್ಣ ಮೊತ್ತ ಇನ್ನಷ್ಟೇ ಪಾವತಿಯಾಗಬೇಕಿದೆ.

ವಿಜಯನಗರ ಜಿಲ್ಲೆಯಲ್ಲಿ 1,17,676 ರೈತರಿಗೆ 23.18 ಕೋಟಿ ರೂ. ಮೊದಲ ಹಂತದ ಇನ್ಪುಟ್ ಸಬ್ಸಿಡಿ ನೀಡಲಾಗಿದೆ. ಈ ಪೈಕಿ 4,024 ರೈತರಷ್ಟೇ 0.74 ಕೋಟಿ ರೂ. ಪೂರ್ಣ ಮೊತ್ತ ಪಡೆದಿದ್ದಾರೆ. ಗದಗ್ನಲ್ಲಿ 1,09,540 ರೈತರಿಗೆ 21.57 ಕೋಟಿ ರೂ. ನೀಡಲಾಗಿದ್ದರೆ ಈ ಪೈಕಿ 4,480 ರೈತರಷ್ಟೇ 0.75 ಕೋಟಿ ಪೂರ್ಣ ಮೊತ್ತ ಪಡೆದಿದ್ದಾರೆ. ಇನ್ನೂ 1,05,060 ರೈತರು ಹಣ ಪಾವತಿಯ ನಿರೀಕ್ಷೆಯಲ್ಲಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ 1,02,325 ರೈತರಿಗೆ 19.24 ಕೋಟಿ ರೂ.ಪರಿಹಾರ ವಿತರಣೆಯಾಗಿದ್ದರೆ ಈ ಪೈಕಿ 6,481 ರೈತರಿಗಷ್ಟೇ ರೂ. 1.04 ಕೋಟಿ ಪೂರ್ಣ ಮೊತ್ತ ಪಾವತಿಯಾಗಿದೆ. 95,844 ರೈತರಿಗೆ ಪೂರ್ಣ ಮೊತ್ತ ಪಾವತಿಯಾಗಿಲ್ಲ.

ಮೈಸೂರು ಜಿಲ್ಲೆಯಲ್ಲಿ 89,602 ರೈತರಿಗೆ 15.99 ಕೋಟಿ ರೂ. ಪರಿಹಾರ ಪಾವತಿಯಾಗಿದೆ. ಇದರಲ್ಲಿ 21,602 ರೈತರಿಗೆ ರೂ.3.24 ಕೋಟಿಯಷ್ಟೇ ಪೂರ್ಣ ಮೊತ್ತ ಪಾವತಿಯಾಗಿದೆ. ಇನ್ನೂ 68,000 ರೈತರಿಗೆ ಪರಿಹಾರದ ಪೂರ್ಣ ಮೊತ್ತ ಪಾವತಿಯಾಗಬೇಕಿದೆ. ದಾವಣಗೆರೆ ಜಿಲ್ಲೆಯಲ್ಲಿ 77,468 ರೈತರಿಗೆ 14.84 ಕೋಟಿ ರೂ. ಪಾವತಿಯಾಗಿದೆ. ಈ ಪೈಕಿ 8,332 ರೈತರಿಗೆ ರೂ.1.30 ಕೋಟಿಯಷ್ಟೇ ಪಾವತಿಯಾಗಿದೆ. ಇನ್ನೂ 69,136 ರೈತರಿಗೆ ಪರಿಹಾರದ ಪೂರ್ಣ ಮೊತ್ತ ಪಾವತಿಯಾಗಿಲ್ಲ.

ಶಿವಮೊಗ್ಗ ಜಿಲ್ಲೆಯಲ್ಲಿ 76,531 ರೈತರಿಗೆ 14.46 ಕೋಟಿ ರೂ. ಪಾವತಿಯಾಗಿದ್ದರೆ 13,103 ರೈತರಿಗಷ್ಟೇ 2.12 ಕೋಟಿ ರೂ.ಮಾತ್ರ ಪೂರ್ಣ ಮೊತ್ತ ಪಾವತಿಯಾಗಿದೆ. 63,428 ರೈತರಿಗೆ ಪರಿಹಾರದ ಪೂರ್ಣ ಮೊತ್ತ ಪಾವತಿಯಾಗಬೇಕಿದೆ. ಮಂಡ್ಯ ಜಿಲ್ಲೆಯಲ್ಲಿ 75,306 ರೈತರಿಗೆ 13.27 ಕೋಟಿ ರೂ. ಪಾವತಿಯಾಗಿದ್ದರೇ ಈ ಪೈಕಿ 23,917 ರೈತರಿಗೆ ರೂ.3.55 ಕೋಟಿಯಷ್ಟೇ ದೊರೆತಿದೆ. 51,389 ರೈತರಿಗೆ ಇನ್ನೂ ಪರಿಹಾರದ ಪೂರ್ಣ ಮೊತ್ತ ಇನ್ನಷ್ಟೇ ದೊರೆಯಬೇಕಿದೆ ಎಂಬುದು ದತ್ತಾಂಶಗಳಿಂದ ತಿಳಿದು ಬಂದಿದೆ.

ಉತ್ತರ ಕನ್ನಡದಲ್ಲಿ 72,700 ರೈತರಿಗೆ 11.55 ಕೋಟಿ ರೂ. ಪರಿಹಾರ ನೀಡಲಾಗಿದ್ದರೆ ಈ ಪೈಕಿ 32,824 ರೈತರಿಗೆ ರೂ.4.13 ಕೋಟಿಯಷ್ಟೇ ಪರಿಹಾರದ ಪೂರ್ಣ ಮೊತ್ತ ಪಾವತಿಯಾಗಿದೆ. ಇನ್ನೂ 39,876 ರೈತರಿಗೆ ಪರಿಹಾರದ ಪೂರ್ಣ ಮೊತ್ತ ಪಾವತಿಯಾಗಬೇಕಿದೆ. ರಾಮನಗರದಲ್ಲಿ 60,616 ರೈತರಿಗೆ ಈಗಾಗಲೇ 10.81 ಕೋಟಿ ರೂ. ಪರಿಹಾರದ ಮೊತ್ತ ದೊರೆತಿದೆ. 16,124 ರೈತರಿಗೆ ರೂ.2.33 ಕೋಟಿ ಮಾತ್ರ ಪೂರ್ಣ ಮೊತ್ತ ದೊರೆತಿದೆ. ಇನ್ನೂ 44,492 ರೈತರಿಗೆ ಪೂರ್ಣ ಮೊತ್ತ ಪಾವತಿಸಬೇಕಿದೆ ಎಂದು ಗೊತ್ತಾಗಿದೆ.

ಬೆಂಗಳೂರು ಗ್ರಾಮಾಂತರದಲ್ಲಿ 59,729 ರೈತರಿಗೆ 10.72 ಕೋಟಿ ರೂ. ಪರಿಹಾರ ಪಾವತಿಸಲಾಗಿದೆ. ಈ ಪೈಕಿ 15,691 ರೈತರಿಗೆ ಪಾವತಿಯಾಗಿದ್ದರೆ 44,038 ರೈತರಿಗೆ ಪೂರ್ಣ ಪರಿಹಾರದ ಮೊತ್ತ ಪಾವತಿ ಮಾಡಲು ಬಾಕಿ ಇದೆ. ಕೋಲಾರ ಜಿಲ್ಲೆಯಲ್ಲಿ 50,577 ರೈತರಿಗೆ 8.98 ಕೋಟಿ ರೂ.ಈಗಾಗಲೇ ಪಾವತಿಯಾಗಿದ್ದರೆ ಈ ಪೈಕಿ 14,329 ರೈತರಿಗೆ 2.05 ಕೋಟಿ ರೂ. ಪೂರ್ಣ ಮೊತ್ತ ದೊರೆತಿದೆ. ಇನ್ನೂ 36,228 ರೈತರಿಗೆ ಪೂರ್ಣ ಮೊತ್ತ ಪಾವತಿಸಲು ಬಾಕಿ ಇರುವುದು ಗೊತ್ತಾಗಿದೆ.

ಚಿಕ್ಕಮಗಳೂರಿನಲ್ಲಿ 48,607 ರೈತರಿಗೆ 9.10 ಕೋಟಿ ರೂ. ಪಾವತಿಯಾಗಿದೆ. ಈ ಪೈಕಿ 7,943 ರೈತರಿಗೆ ರೂ.1.20 ಕೋಟಿಯಷ್ಟು ಪೂರ್ಣ ಮೊತ್ತ ಪಾವತಿಯಾಗಿದೆ. ಇನ್ನೂ 40,664 ರೈತರಿಗೆ ಪರಿಹಾರದ ಪೂರ್ಣ ಮೊತ್ತ ಪಾವತಿಯಾಗಬೇಕಿರುವುದು ತಿಳಿದು ಬಂದಿದೆ.

ಚಾಮರಾಜನಗರ 45,159 ರೈತರಿಗೆ 8.45 ಕೋಟಿ ರೂ. ಪಾವತಿಯಾಗಿದ್ದರೆ ಈ ಪೈಕಿ 7,133 ರೈತರಿಗೆ 1.20 ಕೋಟಿ ರೂ.ಪೂರ್ಣ ಮೊತ್ತ ಪಾವತಿಯಾಗಿದೆ. 38,026 ರೈತರಿಗೆ ಪರಿಹಾರದ ಪೂರ್ಣ ಮೊತ್ತ ಪಾವತಿಯಾಗಬೇಕಿದೆ. ಉಡುಪಿ ಜಿಲ್ಲೆಯಲ್ಲಿ 18,613 ರೈತರಿಗೆ 2.61 ಕೋಟಿ ರೂ. ಪರಿಹಾರ ಪಾವತಿಯಾಗಿದೆ. ಈ ಪೈಕಿ 12,170 ರೈತರಿಗೆ 1.45 ಕೋಟಿ ರೂ. ಪೂರ್ಣ ಮೊತ್ತ ಪಾವತಿಯಾಗಿದೆ. ಇನ್ನೂ 6,443 ರೈತರಿಗೆ ಪರಿಹಾರದ ಪೂರ್ಣ ಮೊತ್ತ ಪಾವತಿಸಲು ಬಾಕಿ ಇರಿಸಿಕೊಂಡಿದೆ ಎಂದು ಗೊತ್ತಾಗಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 12,320 ರೈತರಿಗೆ 2.15 ಕೋಟಿ ರೂ. ಪರಿಹಾರ ನೀಡಲಾಗಿದ್ದರೆ ಈ ಪೈಕಿ 3,965 ರೈತರಿಗಷ್ಟೇ 0.56 ಕೋಟಿ ರೂ. ಪೂರ್ಣ ಪರಿಹಾರದ ಮೊತ್ತ ಪಾವತಿಸಲಾಗಿದೆ. ಇನ್ನೂ 8,355 ರೈತರಿಗೆ ಪರಿಹಾರದ ಪೂರ್ಣ ಮೊತ್ತ ದೊರೆಯಬೇಕಿದೆ. ಕೊಡಗು ಜಿಲ್ಲೆಯಲ್ಲಿ 10,982 ರೈತರಿಗೆ 1.77 ಕೋಟಿ ರೂ. ಪರಿಹಾರ ನೀಡಲಾಗಿದ್ದರೆ 5,010 ರೈತರಿಗೆ 0.62 ಕೋಟಿ ಪೂರ್ಣ ಮೊತ್ತ ಲಭಿಸಿದೆ. ಇನ್ನೂ 5,972 ರೈತರಿಗೆ ಪರಿಹಾರದ ಪೂರ್ಣ ಮೊತ್ತ ಪಾವತಿಸಬೇಕಿದೆ ಎಂದು ತಿಳಿದು ಬಂದಿದೆ.

ದಕ್ಷಿಣ ಕನ್ನಡದಲ್ಲಿ 1,349 ರೈತರಿಗೆ ಈಗಾಗಲೇ 0.23 ಕೋಟಿ ರೂ. ಪರಿಹಾರ ನೀಡಲಾಗಿದೆ. 727 ರೈತರಿಗೆ 0.12 ಕೋಟಿ ರೂ.ಗಳಷ್ಟು ಪೂರ್ಣ ಮೊತ್ತ ಪಾವತಿಸಲಾಗಿದೆ. ಇನ್ನೂ 622 ರೈತರಿಗೆ ಪರಿಹಾರದ ಪೂರ್ಣ ಮೊತ್ತ ನೀಡಲು ಬಾಕಿ ಇರಿಸಿಕೊಂಡಿರುವುದು ಗೊತ್ತಾಗಿದೆ.

share
-ಜಿ.ಮಹಾಂತೇಶ್
-ಜಿ.ಮಹಾಂತೇಶ್
Next Story
X