Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸ್ಟಾರ್ ಗಳು ಕಾನೂನಿಗೆ ಅತೀತರೆ?

ಸ್ಟಾರ್ ಗಳು ಕಾನೂನಿಗೆ ಅತೀತರೆ?

ಪೂರ್ವಿಪೂರ್ವಿ23 Nov 2023 11:38 AM IST
share
ಸ್ಟಾರ್ ಗಳು ಕಾನೂನಿಗೆ ಅತೀತರೆ?
ಇವತ್ತು ನಮ್ಮ ಸುತ್ತಮುತ್ತ ನಾವು ಊಹಿಸಲೂ ಭಯಪಡುವಂತಹ ಹಿಂಸೆ ನಡೆಯುತ್ತಿದೆ. ಕಗ್ಗೊಲೆಗಳಾಗುತ್ತಿವೆ. ತೀರಾ ಸಭ್ಯರಂತೆ ಕಾಣುವ, ಗೃಹಸ್ಥರೇ ಎಂತೆಂತಹ ಹತ್ಯಾಕಾಂಡವನ್ನೇ ಮಾಡಿ ಇಡೀ ನಾಡನ್ನು ಬೆಚ್ಚಿ ಬೀಳಿಸುತ್ತಿದ್ದಾರೆ. ಹೀಗಿರುವಾಗ ಸೆಲೆಬ್ರಿಟಿಯೊಬ್ಬರು ತಾನು ಸಮಾಜಕ್ಕೆ ಏನು ಸಂದೇಶ ರವಾನಿಸುತ್ತಿದ್ದೇನೆ ಎಂಬುದರ ಬಗ್ಗೆ ಬಹಳ ಎಚ್ಚರದಿಂದಿರಬೇಕಾಗಿದೆ.

ಉಡುಗೊರೆಗಳು ಕೂಡ ಕತ್ತಿ, ಮಚ್ಚು, ಲಾಂಗ್ ರೂಪದಲ್ಲಿರುವುದು ಇವತ್ತಿನ ವಿಪರ್ಯಾಸವೂ ಹೌದು, ಅಭಿಮಾನದ ಅತಿರೇಕವೂ ಹೌದು. ಇಂಥ ಅತಿರೇಕಗಳನ್ನು ಸ್ಟಾರ್‌ಗಳು ಸಂಭ್ರಮಿಸುವುದು ಕೂಡ ಮತ್ತೊಂದು ಬಗೆಯ ಯಡವಟ್ಟುಗಳಿಗೆ ಕಾರಣವಾಗುತ್ತದೆ.

ಈಗ ನಟ ದರ್ಶನ್ ವಿಚಾರದಲ್ಲಿಯೂ ಹಾಗೆಯೇ ಆಗಿದೆ. ಕನ್ನಡದ ದೊಡ್ಡ ಸ್ಟಾರ್ ದರ್ಶನ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಲಾಂಗ್ ಪ್ರದರ್ಶಿಸಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಅಭಿಮಾನಿಗಳು ಉಡುಗೊರೆಯಾಗಿ ಕೊಟ್ಟ ಬೆಳ್ಳಿಯ ಲಾಂಗ್ ಅನ್ನು ದರ್ಶನ್ ಹಾಗೂ ಅಭಿಷೇಕ್ ಕೈಯಲ್ಲಿ ಹಿಡಿದು ಪ್ರದರ್ಶಿಸಿದ್ದಾರೆ. ಅದೀಗ ವಿವಾದಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ರೌಡಿಶೀಟರ್‌ಗಳು ತಮ್ಮ ಬರ್ತ್‌ಡೇ ಸಂದರ್ಭದಲ್ಲಿ ಲಾಂಗ್ ಹಿಡಿದು ಕೇಕ್ ಕತ್ತರಿಸಿ ಪೋಸ್ ಕೊಡುವುದು ಆಗಾಗ ಸುದ್ದಿಯಾಗುತ್ತಿರುತ್ತದೆ. ಇದು ಕಾನೂನಿನ ದೃಷ್ಟಿಯಲ್ಲಿ ಅಪರಾಧವಲ್ಲವೇ? ಸಾರ್ವಜನಿಕವಾಗಿ ಬೆದರಿಸುವ ದೃಷ್ಟಿಯಿಂದ ಕತ್ತಿ, ಮಚ್ಚು, ಲಾಂಗ್‌ನಂಥ ಆಯುಧ ಹಿಡಿಯುವುದಕ್ಕೂ ಉಡುಗೊರೆಯಾಗಿ ಅಭಿಮಾನಿಗಳು ಕೊಟ್ಟದ್ದನ್ನು ಪ್ರದರ್ಶಿಸುವುದಕ್ಕೂ ವ್ಯತ್ಯಾಸ ಇದೆಯಲ್ಲವೇ ಎಂದೆಲ್ಲ ವಾದಿಸಲಾಗುತ್ತದೆ. ಆದರೆ ಒಬ್ಬ ಸೆಲೆಬ್ರಿಟಿಗೆ, ತಾನು ಏನೇ ಮಾಡಿದರೂ ತನ್ನನ್ನು ನೋಡಿ ಅನುಸರಿಸುವ ಸಾವಿರಾರು ಜನ ಇದ್ದಾರೆ ಎಂಬ ಎಚ್ಚರ ಇರಲೇಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಖ್ಯಾತ ಸ್ಟಾರ್ ಒಬ್ಬರು ಹೀಗೆ ಸಾರ್ವಜನಿಕವಾಗಿ ಲಾಂಗ್ ಪ್ರದರ್ಶಿಸುವಾಗ ಏಳುವ ಕಾನೂನಿನ, ಸಾಮಾಜಿಕ ಜವಾಬ್ದಾರಿಯ ಪ್ರಶ್ನೆಗಳ ದೃಷ್ಟಿಯಿಂದ ಇದನ್ನು ನೋಡಬೇಕು.

ಭಾರತೀಯ ಕಾನೂನಿನಡಿಯಲ್ಲಿ ಬಂದೂಕುಗಳಂಥ ಅಸ್ತ್ರಗಳನ್ನು ಪರವಾನಿಗೆಯಿದ್ದಲ್ಲಿ ಮಾತ್ರ ಇಟ್ಟುಕೊಳ್ಳಬಹುದು ಮತ್ತು ಸಾಗಿಸಬಹುದು. ಒಂಭತ್ತು ಇಂಚಿಗಿಂತಲೂ ಉದ್ದದ ಕತ್ತಿಗಳು ಮತ್ತು ಬ್ಲೇಡ್‌ಗಳಿಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪರವಾನಿಗೆ ಅಗತ್ಯವಿರುತ್ತದೆ. ಪರವಾನಿಗೆ ಇಲ್ಲದೆ ಶಸ್ತ್ರಾಸ್ತ್ರಗಳನ್ನು ಸಾಗಿಸಿದರೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.

ಶಸ್ತ್ರಾಸ್ತ್ರ ಕಾಯ್ದೆ ನಿಯಮಗಳು 2016ರ ನಿಯಮ 8ರ ಅಡಿಯಲ್ಲಿ ಪರವಾನಿಗೆ ಹೊಂದಿರುವ ವ್ಯಕ್ತಿ ಕೂಡ ಆಯುಧಗಳನ್ನು ಸಾರ್ವಜನಿಕ ಸ್ಥಳದಲ್ಲಿ ಝಳಪಿಸುವಂತಿಲ್ಲ ಮತ್ತು ಮದುವೆ, ಸಾರ್ವಜನಿಕ ಸಭೆ, ಜಾತ್ರೆ, ಮೊವಣಿಗೆ ಅಥವಾ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಒಯ್ಯುವಂತಿಲ್ಲ.

ಈ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಶಸ್ತ್ರಾಸ್ತ್ರ ಕಾಯ್ದೆಯ ನಿಯಮ 32ರ ಅಡಿಯಲ್ಲಿ ನೀಡಲಾದ ಪರವಾನಿಗೆಯನ್ನು ರದ್ದುಗೊಳಿಸಬಹುದು.

ಷರತ್ತುಗಳನ್ನು ಉಲ್ಲಂಘಿಸುವವರು ಅಥವಾ ಪರವಾನಿಗೆಯಿಲ್ಲದ ಶಸ್ತ್ರಾಸ್ತ್ರಗಳನ್ನು ಹೊಂದಿರುವವರು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25ರ ಅಡಿಯಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯೂ ಆಗಬಹುದು.

ಕೆಲವು ಷರತ್ತುಗಳಿಗೆ ಒಳಪಟ್ಟು ಕೆಲವು ಸಮುದಾಯಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ ಮತ್ತು ಈ ವಿನಾಯಿತಿಗಳು ಬಹಳ ಸೀಮಿತವಾಗಿವೆ. ಕರ್ನಾಟಕದಲ್ಲಿ ಕೊಡವ ಸಮುದಾಯ ಮತ್ತು ಜುಮ್ಮಾ ಹಿಡುವಳಿದಾರರು ಸಹ ಕತ್ತಿ, ಕಠಾರಿ ಮತ್ತು ಬಂದೂಕುಗಳನ್ನು ಒಯ್ಯಲು ನಿರ್ದಿಷ್ಟ ವಿನಾಯಿತಿಯನ್ನು ನೀಡಲಾಗಿದೆ. ಆದರೆ ಇದು ಕೊಡಗು ಜಿಲ್ಲೆಯಲ್ಲಿ ಮಾತ್ರ ಅನ್ವಯಿಸುತ್ತದೆ ಮತ್ತು ಶಸ್ತ್ರಾಸ್ತ್ರಗಳನ್ನು ನೋಂದಾಯಿಸಿರಬೇಕಾಗುತ್ತದೆ.

ಇಂಥ ನಡವಳಿಕೆಗಳ ಬಗ್ಗೆ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುವುದಕ್ಕೆ ಅವಕಾಶವಿದೆ, ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಮಾರಕಾಸ್ತ್ರ ಪ್ರದರ್ಶನ ಕಾನೂನು ಬಾಹಿರವಾಗಿರುವುದರಿಂದ ಪೊಲೀಸರು ಸ್ವಯಂಪ್ರೇರಿತವಾಗಿ ಕೇಸ್ ದಾಖಲು ಮಾಡಲೂ ಬಹುದು ಎಂದು ನಿವೃತ್ತ ಎಸಿಪಿ ಬಿ.ಕೆ. ಶಿವರಾಂ ಹೇಳುತ್ತಾರೆ.

ಸ್ಥಾಪಿತ ಕಾನೂನುಗಳ ವಿಚಾರದಲ್ಲಿ ತನಗೆ ಗೊತ್ತಿರಲಿಲ್ಲ, ಮಾಹಿತಿ ಇರಲಿಲ್ಲ ಎಂದು ಯಾರೇ ಹೇಳಿದರೆ, ಕಾನೂನಿನ ಬಗೆಗಿನ ಅಂಥ ನಿರ್ಲಕ್ಷ್ಯಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಕೂಡ ಮಾನ್ಯತೆ ಇಲ್ಲ ಎಂದು ಅವರು ಹೇಳುತ್ತಾರೆ.

ಇವೆಲ್ಲದರ ಜೊತೆಗೇ, ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಸೆಲೆಬ್ರಿಟಿಗಳು ಹೀಗೆ ಮಾಡುವುದರಿಂದ ತಪ್ಪು ಸಂದೇಶ ಕೊಟ್ಟಂತಾಗುತ್ತದೆ ಎಂಬುದೂ ಗಮನಿಸಬೇಕಾದ ವಿಚಾರ.

ದರ್ಶನ್ ಅವರನ್ನು ಸಮರ್ಥಿಸಿಕೊಳ್ಳುವವರೆಲ್ಲ, ಅವರು ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲ ಎಂಬ ಮಾತುಗಳನ್ನು ಹೇಳುತ್ತಿರುವುದನ್ನು ಗಮನಿಸಬಹುದು. ಅದರರ್ಥ, ಅವರು ಅಭಿಮಾನಿಗಳು ತಂದ ಬೆಳ್ಳಿ ಲಾಂಗ್ ಅನ್ನು ಅವರಿಗೆ ನಿರಾಸೆ ಮಾಡಬಾರದು ಎಂಬ ಕಾರಣಕ್ಕಾಗಿ ಕೈಯಲ್ಲಿ ಹಿಡಿದು ಪೋಸ್ ಕೊಟ್ಟಿದ್ದಾರೆ. ಆದರೆ, ಅಭಿಮಾನಿಗಳಿಗೆ ನಿರಾಸೆ ಮಾಡಬಾರದು ಎಂಬುದಕ್ಕಿಂತ ಮುಖ್ಯವಾಗಿ ತಾನು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವಾಗ ಸಾರ್ವಜನಿಕವಾಗಿ ಏನು ಮಾಡಬಾರದು, ಏನು ಮಾಡಬಹುದು ಎಂಬ ಎಚ್ಚರವನ್ನು ಒಬ್ಬ ಜನಪ್ರಿಯ ಸ್ಟಾರ್ ಹೊಂದಿರುವುದು ಬಹಳ ಅಗತ್ಯ.

ಇವತ್ತಿನ ಸಮಾಜದಲ್ಲಿ ಒಂದು ಸಣ್ಣ ನೆಪವೂ ಎಂಥೆಂಥ ಕ್ರೌರ್ಯಕ್ಕೆ ಕಾರಣವಾಗಿಬಿಡಬಲ್ಲುದು, ಒಂದು ಸಣ್ಣ ಮಾತು ಕೂಡ ಏನೆಲ್ಲ ಅನಾಹುತಗಳನ್ನು ತಂದಿಡಬಲ್ಲುದು ಎಂಬುದು ದರ್ಶನ್ ಅಂಥ ಸ್ಟಾರ್ ನಟರಿಗೆ ಗೊತ್ತಿರದೇ ಇರುವ ವಿಚಾರವಲ್ಲ.

ಹೀಗಿರುವಾಗ, ಲಕ್ಷಾಂತರ ಜನ ಫಾಲೋವರ್ಸ್ ಇರುವ ಅಂಥವರ ಸಾಮಾಜಿಕ ಹೊಣೆಗಾರಿಕೆ ದೊಡ್ಡದಿರುತ್ತದೆ. ಅಂಥ ಸ್ಟಾರ್ ಒಬ್ಬರು ಹೀಗೆ ವರ್ತಿಸೋದು ಖಂಡಿತ ಸರಿಯೆನ್ನಿಸುವುದಿಲ್ಲ.

ಹಿಂಸೆಯ ಸ್ವರೂಪವಾಗಿರುವ ಲಾಂಗ್ ಖಂಡಿತವಾಗಿಯೂ ಸ್ಟಾರ್ ಗಿರಿಯ, ಹೀರೋ ಗಿರಿಯ ಸಂಕೇತವಾಗುವುದಿಲ್ಲ. ತಾನು ಹೀರೋ ಎಂದು ತೋರಿಸಿಕೊಳ್ಳಲು ಅದರ ಪ್ರದರ್ಶನ ಮಾಡಬೇಕಿಲ್ಲ ಎಂಬುದು ಸ್ಟಾರ್‌ಗಳಿಗೆ, ಸೆಲೆಬ್ರಿಟಿಗಳಿಗೆ ಮೊದಲು ಅರಿವಾಗಬೇಕು. ಅದು ಪಾತಕದ, ಕೊಲೆಗಡುಕತನದ ಸಂಕೇತವಾಗಿರುವಾಗ, ಅದನ್ನು ದೂರವಿಡುವುದು, ಅದನ್ನು ಉಡುಗೊರೆಯಾಗಿ ತಂದವರನ್ನೂ ನಯವಾಗಿಯೇ ತಿರಸ್ಕರಿಸುವ ಮೂಲಕ ತಿದ್ದುವುದು ದರ್ಶನ್ ಅಂಥವರಿಗೆ ಖಂಡಿತ ಸಾಧ್ಯವಿದೆ. ಅದನ್ನು ಮೊದಲು ಮಾಡಬೇಕಾಗಿರುವುದು ಅವರ ಹೀರೋ ಗಿರಿಯ, ಸ್ಟಾರ್ ಗಿರಿಯ ಜವಾಬ್ದಾರಿಯೂ ಹೌದು.

ಇವತ್ತು ನಮ್ಮ ಸುತ್ತಮುತ್ತ ನಾವು ಊಹಿಸಲೂ ಭಯಪಡುವಂತಹ ಹಿಂಸೆ ನಡೆಯುತ್ತಿದೆ. ಕಗ್ಗೊಲೆಗಳಾಗುತ್ತಿವೆ. ತೀರಾ ಸಭ್ಯರಂತೆ ಕಾಣುವ, ಗೃಹಸ್ಥರೇ ಎಂತೆಂತಹ ಹತ್ಯಾಕಾಂಡವನ್ನೇ ಮಾಡಿ ಇಡೀ ನಾಡನ್ನು ಬೆಚ್ಚಿ ಬೀಳಿಸುತ್ತಿದ್ದಾರೆ. ಹೀಗಿರುವಾಗ ಸೆಲೆಬ್ರಿಟಿಯೊಬ್ಬರು ತಾನು ಸಮಾಜಕ್ಕೆ ಏನು ಸಂದೇಶ ರವಾನಿಸುತ್ತಿದ್ದೇನೆ ಎಂಬುದರ ಬಗ್ಗೆ ಬಹಳ ಎಚ್ಚರದಿಂದಿರಬೇಕಾಗಿದೆ.

share
ಪೂರ್ವಿ
ಪೂರ್ವಿ
Next Story
X