Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಹಡಿಲು ಭೂಮಿಯಲ್ಲಿ ಭತ್ತ ಕೃಷಿ ಮಾಡಿದ...

ಹಡಿಲು ಭೂಮಿಯಲ್ಲಿ ಭತ್ತ ಕೃಷಿ ಮಾಡಿದ ಉದ್ಯಮಿ

ಉದ್ಯಮದ ಜೊತೆಗೆ ಕೃಷಿ-ತೋಟಗಾರಿಕೆಯಲ್ಲಿ ಆಸಕ್ತಿ

ಯೋಗೀಶ್ ಕುಂಭಾಸಿಯೋಗೀಶ್ ಕುಂಭಾಸಿ13 Nov 2023 1:31 PM IST
share
ಹಡಿಲು ಭೂಮಿಯಲ್ಲಿ ಭತ್ತ ಕೃಷಿ ಮಾಡಿದ ಉದ್ಯಮಿ

ಕುಂದಾಪುರ, ನ.12: ಕುಂದಾಪುರ ಭಾಗದಲ್ಲಿ ಆಚರಿಸುವ ಹೊಸ್ತು ಹಬ್ಬದ ಸಂದರ್ಭ ಭತ್ತದ ಕದಿರು ಸಿಗದ ಕಾರಣಕ್ಕಾಗಿ ಉದ್ಯಮಿಯೊಬ್ಬರು, ಅದರಿಂದ ಪ್ರೇರಣೆಯಾಗಿ ಸುಮನಾರು ಎಂಟು ಎಕರೆ ಹಡಿಲು ಭೂಮಿಯನ್ನು ಗೇಣಿ ಪಡೆದು ಯಶಸ್ವಿಯಾಗಿ ಭತ್ತ ಕೃಷಿ ಮಾಡಿದ್ದಾರೆ.

ಕುಂದಾಪುರ ತಾಲೂಕಿನ ಸಿದ್ದಾಪುರ ಬಾಳೆಬೇರು ನಿವಾಸಿ ದೇವಿಪ್ರಸಾದ್ ಶೆಟ್ಟಿ ಉದ್ಯಮಿಯಾಗಿ ಕೃಷಿ ಕಾಯಕ ಹಾಗೂ ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ತಾಯಿ ಮನೆ ಜಾಗ ಸಹಿತ, ಸ್ವತಃ ಖರೀದಿಸಿದ ಏಳೆಂಟು ಎಕ್ರೆ ಭೂಮಿಯಲ್ಲಿ ತೋಟ ನಿರ್ಮಿಸಿ ಯುವಕರಿಗೆ ಮಾದರಿಯಾಗಿದ್ದಾರೆ.

ಪೋಷಕರ ಕಾಲದಿಂದ ನಡೆದು ಬಂದ ಕೃಷಿ ಬಗ್ಗೆ ನೆಚ್ಚಿ ತಾನು ಸಾಗುವಳಿ ದಾರನಾಗಿ ಮುಂದುವರಿಯಬೇಕು ಎಂಬ ನಿಟ್ಟಿನಲ್ಲಿ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾದ ಯಡಮೊಗೆಯ ವಡ್ನಾಳಿ ಎಂಬಲ್ಲಿ 8 ಎಕರೆ ಕೃಷಿಭೂಮಿ ಪಡೆದು ಭತ್ತ ಕೃಷಿ ಮಾಡಿದ್ದಾರೆ.

ಬಾಳೆಬೇರು ಎಂಬಲ್ಲಿನ ತಮ್ಮ ತಾಯಿ ಮನೆ ಜಾಗದಲ್ಲಿ 1,700 ಅಡಿಕೆ, ತೆಂಗು, ಶುಂಠಿ, ಬಾಳೆ, ಫೈನಾಪಲ್, ಲಿಂಬು, ಕಬ್ಬು, ತರಕಾರಿ ಬೆಳೆದಿದ್ದು ಹೈನುಗಾರಿಕೆ ಜೊತೆಗೆ ಕೋಳಿ ಸಾಕಣೆ ಕೂಡ ಮಾಡುತ್ತಿದ್ದಾರೆ. ಹೊಸಬಾಳು ಎಂಬಲ್ಲಿ 4 ಎಕರೆ ಜಾಗ ಖರೀದಿಸಿ 300 ತೆಂಗು, ಅಡಿಕೆ, ಫೈನಾಪಲ್, ಮಾವು ಮೊದಲಾದ ತೋಟ ನಿರ್ಮಿಸಿದ್ದಾರೆ. ರಾಂಪೈಜೆಡ್ಡು ಎಂಬಲ್ಲಿ 3 ಎಕರೆ ಪ್ರದೇಶಲ್ಲಿ 1,800 ಅಡಿಕೆ ತೋಟ ಮಾಡಿದ್ದಾರೆ.

ಇವರ ತೋಟವಿರುವುದು ಮಲೆನಾಡು ತಪ್ಪಲು ಪ್ರದೇಶವಾದರೂ ನೀರಿಗೆ ತಾತ್ವಾರ ಬರಬಾರದು ಎಂಬ ಕಾರಣಕ್ಕೆ ಬೋರ್‌ವೆಲ್ ತೋಡಿಸಲಾಗಿದೆ. ಮೊಲ, ಕಡವೆ, ಜಿಂಕೆ, ನವಿಲು, ಇಲಿ, ಹಂದಿ ಕಾಟದ ನಡುವೆ ಸಾಗುವಳಿಯಲ್ಲಿ ಖುಷಿಯಿದೆ. ಪ್ರಾಣಿ ಪಕ್ಷಿ ತಿಂದುಳಿದ್ದದ್ದು ರೈತನಿಗೆ ಸಿಗುವುದು ಎಂದು ನಂಬಿಕೊಂಡು ಕೃಷಿ, ತೋಟಗಾರಿಕೆ ನಡೆಸುತ್ತಿದ್ದು ತೃಪ್ತಿ ಇದೆ ಎನ್ನುತ್ತಾರೆ ದೇವಿಪ್ರಸಾದ್ ಶೆಟ್ಟಿ.

ತಂದೆ-ತಾಯಿಯವರದ್ದು ಕೃಷಿಕ ಕುಟುಂಬ. ಕದಿರು (ಹೊಸ್ತು) ಹಬ್ಬಕ್ಕೆ ಭತ್ತದ ಕದಿರು ಸಿಗದಿದ್ದು ದೂರದೂರದಿಂದ ಕದಿರು ತರಬೇಕಾ ಯಿತು. ಇದರಿಂದ ಹಡಿಲು ಭೂಮಿ ಪಡೆದು 8 ಎಕರೆಯಲ್ಲಿ ಯಾಂತ್ರೀಕೃತವಾಗಿ ಹಾಗೂ ಜನರನ್ನು ಬಳಸಿಕೊಂಡು 1.80 ಲಕ್ಷ ಖರ್ಚಿನಲ್ಲಿ ಭತ್ತ ಬೆಳೆಸಿದೆ. ಮಳೆ ಸಮಸ್ಯೆ ಎದುರಾದರೂ 70 ಕ್ವಿಂಟಾಲ್ ಭತ್ತ ಸಿಕ್ಕಿದೆ. ಪ್ರಾಣಿ, ಪಕ್ಷಿಗಳ ಸಮಸ್ಯೆ ಹೆಚ್ಚಿದ್ದರಿಂದ ಸಾಗುವಳಿ ಮಾಡುವುದು ಬಿಡಲಾಗುತ್ತಿದೆ. ಹಕ್ಕುಪತ್ರ ಸಮಸ್ಯೆ ಇದ್ದ ಕಾರಣ ತೋಟಗಾರಿಕೆ, ಕೃಷಿ ಮಾಡಲು ಜನರಿಗೆ ಪೂರಕ ವಾತಾವರಣವಿಲ್ಲ. ಯುವ ಜನಾಂಗ ಕೃಷಿಯತ್ತ ಒಲವು ತೋರಿಸಲು ಸರಕಾರ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.

| ದೇವಿಪ್ರಸಾದ್ ಶೆಟ್ಟಿ, ಕೃಷಿ ಉತ್ಸಾಹಿ

ಜನರು ಕೃಷಿಯಿಂದ ವಿಮುಖರಾಗು ತ್ತಿರುವ ವೇಳೆ ಕೃಷಿ ಬಗ್ಗೆ ಜ್ಞಾನ, ಉತ್ಸಾಹದಿಂದ ಭತ್ತ ಕೃಷಿ, ತೋಟಗಾರಿಕೆ, ಹೈನುಗಾರಿಕೆ ನಡೆಸುತ್ತಿರುವ ದೇವಿ ಪ್ರಸಾದ್ ಶೆಟ್ಟಿಯವರ ಕಾರ್ಯ ಯುವಪೀಳಿಗೆಗೆ ಮಾದರಿ. ತಮ್ಮ ಉದ್ಯಮಗಳ ಒತ್ತಡದ ನಡುವೆಯೂ ಕೃಷಿ ಕೆಲಸಕ್ಕೆ ಸಮಯ ನಿಗದಿ ಮಾಡುತ್ತಾರೆ. ತೋಟಗಾರಿಕೆಯಲ್ಲಿಯೂ ಇವರ ವೈಜ್ಞಾನಿಕ ನಡೆ ಎಲ್ಲರಿಗೂ ಮಾದರಿ.

| ಆನಂದ ಕಾರೂರು, ದಸಂಸ ಮುಖಂಡರು

share
ಯೋಗೀಶ್ ಕುಂಭಾಸಿ
ಯೋಗೀಶ್ ಕುಂಭಾಸಿ
Next Story
X