Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬೆಂಗಳೂರಿನಿಂದ ವಿಯೆಟ್ನಾಂಗೆ ನೇರ ವಿಮಾನ...

ಬೆಂಗಳೂರಿನಿಂದ ವಿಯೆಟ್ನಾಂಗೆ ನೇರ ವಿಮಾನ ಸಂಪರ್ಕ

ವಿಯೆಟ್‌ಜೆಟ್ ಏರ್‌ನಿಂದ ಅತ್ಯಂತ ಕಡಿಮೆ ದರದಲ್ಲಿ ವಿಮಾನಯಾನ ಸೌಲಭ್ಯ

ವಿ. ರಾಜೇಶ್ ನಾಯ್ಕ್ವಿ. ರಾಜೇಶ್ ನಾಯ್ಕ್29 July 2025 5:21 PM IST
share
ಬೆಂಗಳೂರಿನಿಂದ ವಿಯೆಟ್ನಾಂಗೆ ನೇರ ವಿಮಾನ ಸಂಪರ್ಕ

ಅತ್ಯಂತ ಮನೋಹರವಾದ ಪ್ರಕೃತಿ ಸೌಂದರ್ಯ, ಅತ್ಯಾಧುನಿಕ ನಗರಗಳು, ಸ್ವಾದಿಷ್ಟ ಖಾದ್ಯಗಳು, ರೋಚಕ ಚಾರಣಗಳ ರಾಷ್ಟ್ರವಾದ ವಿಯೆಟ್ನಾಂ ಈಗ ಕರ್ನಾಟಕದ ಜನತೆಗೆ ಇನ್ನಷ್ಟು ಹತ್ತಿರವಾಗಿದೆ. ಹೌದು. ವಿಯೆಟ್‌ಜೆಟ್‌ಏರ್ ಬೆಂಗಳೂರಿನಿಂದ ವಿಯೆಟ್ನಾಂನ ವಾಣಿಜ್ಯ ನಗರಿ ಹೊಚಿ ಮಿನ್ ಸಿಟಿಗೆ ವಾರದಲ್ಲಿ ಮೂರು ಬಾರಿ ನೇರ ವಿಮಾನಸಂಚಾರವನ್ನು ನಡೆಸುತ್ತಿದೆ. ಬೆಂಗಳೂರಿನ ಅಂತರ್‌ರಾಷ್ಟ್ರೀಯ ಕೆಂಪೇಗೌಡ ವಿಮಾನನಿಲ್ದಾಣದಿಂದ ಪ್ರತೀ ಸೋಮವಾರ, ಬುಧವಾರ ಹಾಗೂ ಶುಕ್ರವಾರದಂದು ವಿಯೆಟ್‌ಜೆಟ್ ಏರ್‌ನ ವಿಮಾನ ವಿಯೆಟ್ನಾಂಗೆ ಪ್ರಯಾಣಿಸುತ್ತಿದೆ. ಅತ್ಯಂತ ಕಡಿಮೆ ದರದಲ್ಲಿ ವಿಯೆಟ್ನಾಂ ಪ್ರವಾಸವನ್ನು ಕೈಗೊಳ್ಳುವ ಸದವಕಾಶವನ್ನು ರಾಜ್ಯದ ಜನತೆಗೆ ಒದಗಿಸಿದೆ.

ಜಗತ್ತಿನಲ್ಲೇ ಅಗ್ಗದ ದರದಲ್ಲಿ ಉತ್ಕೃಷ್ಟ ಮಟ್ಟದ ವಿಮಾನಯಾನ ಸೇವೆ ನೀಡುವ ಸಂಸ್ಥೆಯೆಂದು ವಿಯೆಟ್‌ಜೆಟ್ ಏರ್, ಜಾಗತಿಕ ಮಾನ್ಯತೆ ಪಡೆದಿರುವ https://www.airlineratings.com ಜಾಲತಾಣದ ಪುರಸ್ಕಾರಕ್ಕೆ ಪಾತ್ರವಾಗಿದೆ.

ಸುರಕ್ಷಿತ ವಿಮಾನಯಾನ ಸೇವೆಯಲ್ಲೂ ಅದು ಉನ್ನತ ಸ್ಥಾನವನ್ನು ಪಡೆದುಕೊಂಡಿದೆ. ವಿಯೆಟ್‌ಜೆಟ್‌ಏರ್‌ನಲ್ಲಿ ಪ್ರಯಾಣಿಕರು ಭಾರತೀಯ ಖಾದ್ಯಗಳ ಜೊತೆಗೆ ವಿಯೆಟ್ನಾಂನ ಪಾರಂಪರಿಕ ಖಾದ್ಯಗಳನ್ನು ಕೂಡಾ ಸವಿಯಬಹುದಾಗಿದೆ.

ಹಚ್ಚ ಹಸಿರಿನಿಂದ ಕಂಗೊಳಿಸುವ ವಿಯೆಟ್ನಾಂ ಅಕ್ಷರಶಃ ಪ್ರವಾಸಿಗರ ಸ್ವರ್ಗವಾಗಿದೆ. ಆಧುನಿಕತೆ ಹಾಗೂ ಸಂಸ್ಕೃತಿಯ ಭವ್ಯಸಂಗಮ ಸ್ಥಳವಿದು. ಹೊಚಿಮಿನ್ ಸಿಟಿ ಮತ್ತಿತರ ನಗರಗಳ ಅತ್ಯಾಧುನಿಕ ಗಗನಚುಂಬಿ ಕಟ್ಟಡಗಳಿಂದ ವಿಜೃಂಭಿಸಿದರೆ , ಗ್ರಾಮೀಣ ಪ್ರದೇಶಗಳಲ್ಲಿ ಅಪ್ಪಟ ವಿಯೆಟ್ನಾಂ ಸಂಸ್ಕೃತಿಯ ಸೊಗಡನ್ನು ಆಸ್ವಾದಿಸಬಹುದಾಗಿದೆ. ಸ್ವಚ್ಛ, ಸುಂದರ ಮತ್ತು ವಿಶಾಲವಾದ ರಸ್ತೆಗಳ ಆಹ್ಲಾದಕರ ನೋಟವು ಎಲ್ಲೆಲ್ಲೂ ಕಾಣಿಸುತ್ತಿದೆ. ವಿಯೆಟ್ನಾಂ ಯುದ್ಧದ ಇತಿಹಾಸವನ್ನು ಸಾರುವ ತಾಣಗಳನ್ನು ವಿಯೆಟ್ನಾಂ ಜತನದಿಂದ ಸಂರಕ್ಷಿಸಿಟ್ಟಿದ್ದು,ಅವು ಸ್ವಾತಂತ್ರ್ಯಪ್ರೇಮಿ ವಿಯೆಟ್ನಾಮಿಗರ ವೀರಗಾಥೆಯನ್ನು ಪ್ರವಾಸಿಗರಿಗೆ ಪರಿಚಯಿಸುತ್ತವೆ.

ಸರಿಸುಮಾರು ಐವತ್ತು ವರ್ಷಗಳ ಹಿಂದೆ ಸಂಘರ್ಷದಿಂದ ಜರ್ಜರಿತವಾಗಿದ್ದ ಈ ರಾಷ್ಟ್ರ ಇಂದು ಆಧುನಿಕತೆ ಹಾಗೂ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿರುವ ರೀತಿಯಂತೂ ಅದ್ಭುತವಾಗಿದೆ. ಸುಂದರವಾದ ಕಡಲಕಿನಾರೆಗಳು, ಬಯಲು, ಪರ್ವತಗಳಿಂದ ಆವೃತವಾಗಿರುವ ವಿಯೆಟ್ನಾಂನ ಹವಾಮಾನ ಹೆಚ್ಚು ಕಡಿಮೆ ಕರ್ನಾಟಕದ ಕರಾವಳಿಯನ್ನೇ ಹೋಲುತ್ತದೆ. ಮೆಕಾಂಗ್‌ನದಿ ಮುಖಜ ಭೂಮಿಯಲ್ಲಿ ಕಣ್ಣಿಗೆ ಕಾಣಿಸುವಷ್ಟು ದೂರದಾಚೆಗೂ ಹರಡಿರುವ ವಿಶಾಲವಾದ ಭತ್ತದ ಗದ್ದೆಗಳು ನೋಡುಗರ ಕಣ್ಣಿಗೆ ಮುದನೀಡುತ್ತವೆ. ಅಲ್ಲಿನ ನದಿತಟದ ಗ್ರಾಮ ಜೀವನದ ಸೊಗಡನ್ನು ಕೂಡಾ ಪ್ರವಾಸಿಗರು ಸಂಭ್ರಮಿಸಬಹುದಾಗಿದೆ.

ಹೊಚಿ ಮಿನ್ ಸಿಟಿಯಲ್ಲಿರುವ ಫ್ರೆಂಚ್ ಶೈಲಿಯ ರಾಜಗಾಂಭೀರ್ಯದ ಭವ್ಯ ಕಟ್ಟಡಗಳು ಈ ದೇಶದ ವೈವಿಧ್ಯಮಯ ಇತಿಹಾಸಕ್ಕೆ ದೃಕ್‌ಸಾಕ್ಷಿಗಳಾಗಿವೆ. ವಿಯೆಟ್ನಾಂನ ಸ್ವಾದಿಷ್ಟಕರ ಹಾಗೂ ವೈವಿಧ್ಯಮಯ ಖಾದ್ಯ ವೈವಿಧ್ಯಗಳನ್ನು ಅಚ್ಚುಕಟ್ಟಾಗಿ ಉಣಬಡಿಸುವ ಅಸಂಖ್ಯ ರೆಸ್ಟೋರೆಂಟ್‌ಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ರುಚಿಕರವಾದ ಮತ್ಸ್ಯಾಹಾರ ಭಕ್ಷ್ಯಗಳೂ ವಿಯೆಟ್ನಾಂನ ಖಾದ್ಯಪರಂಪರೆಯ ಉಜ್ವಲ ನಿದರ್ಶನ

ವಾಗಿವೆ. ಸಸ್ಯಾಹಾರ ಹಾಗೂ ಮಾಂಸಾಹಾರ ಪ್ರಿಯರಿಬ್ಬರೂ ಇಷ್ಟಪಡುವಂತಹ ವೈವಿಧ್ಯಮಯ ಆಹಾರಗಳ ಲೋಕವೇ ಪ್ರವಾಸಿಗರಿಗೆ ಇಲ್ಲಿ ತೆರೆದುಕೊಳ್ಳುತ್ತದೆ. ಸ್ನೇಹಮಯಿ ವಿಯೆಟ್ನಾಂ ಪ್ರಜೆಗಳ ಶಿಸ್ತು, ಪ್ರಾಮಾಣಿಕತೆ, ಆತಿಥ್ಯಗಳು ಗಮನಸೆಳೆಯುತ್ತವೆ. ವಿಯೆಟ್ನಾಂನ ಶಾಂತಿಯುತ ಹಾಗೂ ಸುರಕ್ಷಿತವಾದ ವಾತಾವರಣವು ಆ ದೇಶದೆಡೆಗೆ ಪ್ರವಾಸಿಗರನ್ನು ಸೆಳೆಯಲು ಇನ್ನೊಂದು ಪ್ರಮುಖ ಕಾರಣವಾಗಿದೆ.

ಬೆಂಗಳೂರಿನಿಂದ ಕೇವಲ 5 ತಾಸುಗಳ ವಿಮಾನ ಪ್ರಯಾಣದಲ್ಲಿ ವಿಯೆಟ್ನಾಂಗೆ ತಲುಪಬಹುದಾಗಿದೆ. ಭಾರತದ ಕಾಲಮಾನಕ್ಕಿಂತ ಸುಮಾರು ಒಂದೂವರೆ ತಾಸು ಮುಂಚಿತವಾಗಿ ಇಲ್ಲಿ ದಿನದ ಆರಂಭವಾಗುತ್ತದೆ.

ಮಧ್ಯಪ್ರಾಚ್ಯ ಹಾಗೂ ಉಕ್ರೇನ್-ರಶ್ಯ ಸಂಘರ್ಷದ ಬಳಿಕ ಪ್ರವಾಸಿಗರು ಅತ್ಯಧಿಕ ಸಂಖ್ಯೆಯಲ್ಲಿ ವಿಯೆಟ್ನಾಂನತ್ತ ಮುಖ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿಯೆಟ್‌ಜೆಟ್ ಏರ್ ಅಗ್ಗದ ದರದಲ್ಲಿ ವಿಮಾನ ಸಂಚಾರವನ್ನು ಒದಗಿಸಿರುವುದು ಆಕಾಂಕ್ಷಿ ಪ್ರವಾಸಿಗರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಬೆಂಗಳೂರಿನಿಂದ 20 ಸಾವಿರ ರೂ.ಗಿಂತಲೂ ಕಡಿಮೆ ವೆಚ್ಚದಲ್ಲಿ ವಿಯೆಟ್ನಾಂ ರೌಂಡ್ ಟ್ರಿಪ್ ಕೈಗೊಳ್ಳಬಹುದಾಗಿದೆ. ಇದಲ್ಲದೆ ಕೆಲವು ವಾರಗಳಷ್ಟು ಮುಂಗಡವಾಗಿ ಟಿಕೆಟ್ ಕಾದಿರಿಸಿದಲ್ಲಿ ಇನ್ನಷ್ಟು ರಿಯಾಯಿತಿ ದೊರೆಯಲು ಅವಕಾಶವಿದೆ. ಭಾರತದ ರೂಪಾಯಿ ಮೌಲ್ಯದ ಎದುರು ವಿಯೆಟ್ನಾಂ ಕರೆನ್ಸಿ ಡಾಂಗ್‌ನ ಮೌಲ್ಯ ತೀರಾ ಕಡಿಮೆಯಿರುವುದು ಭಾರತೀಯ ಪ್ರವಾಸಿಗರಿಗೆ ಇನ್ನೊಂದು ಪ್ಲಸ್‌ಪಾಯಿಂಟ್. ಆ ದೇಶದ 10 ಸಾವಿರ ಡೊಂಗ್ ಎದುರು ಭಾರತದ ರೂಪಾಯಿ ಮೌಲ್ಯ 33 ರೂ. ಆಗಿದೆ.

ಬೆಂಗಳೂರು ಅಲ್ಲದೆ ಹೈದರಾಬಾದ್, ಕೊಚ್ಚಿ, ಮುಂಬೈ, ದಿಲ್ಲಿ, ಅಹ್ಮ ದಾಬಾದ್ ನಗರಗಳಿಂದಲೂ ವಿಯೆಟ್ನಾಂಗೆ ವಿಯೆಟ್‌ಜೆಟ್‌ನಿಂದ ವಿಮಾನಯಾನ ಸೌಲಭ್ಯವಿದೆ. ಭಾರತಾದ್ಯಂತ ಸುಮಾರು 78 ವಿಮಾನಯಾನಗಳನ್ನು ನಡೆಸುವ ವಿಯೆಟ್‌ಜೆಟ್, ಉಭಯದೇಶಗಳ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ.

ವಿಯೆಟ್ನಾಂ ಸಂದರ್ಶಿಸುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚಳಗೊಂಡಿರುವುದಕ್ಕೆ ಪೂರಕವಾಗಿ ವಿಯೆಟ್‌ಜೆಟ್ ಏರ್ ದೇಶದಲ್ಲಿ ತನ್ನ ವಿಮಾನಯಾನಗಳನ್ನು ವಿಸ್ತರಿಸಿದೆ. ಕಳೆದ ವರ್ಷವೊಂದರಲ್ಲೇ 5 ಲಕ್ಷಕ್ಕೂ ಅಧಿಕ ಮಂದಿ ಭಾರತೀಯರು ವಿಯೆಟ್ನಾಂ ಸಂದರ್ಶಿಸಿದ್ದಾರೆ. ವಿಯೆಟ್‌ಜೆಟ್ ಏರ್, ಇಂಡೋನೇಶ್ಯದ ಬಾಲಿ,ಮಲೇಶ್ಯದ ಕೌಲಾಲಂಪುರ ಹಾಗೂ ಆಸ್ಟ್ರೇಲಿಯದ ಪ್ರಮುಖ ನಗರಗಳಿಗೂ ವಿಮಾನಯಾನ ಸಂಪರ್ಕವನ್ನು ಕಲ್ಪಿಸಿದೆ. ತನ್ನ ವಿಮಾನಯಾನ ಸಂಪರ್ಕಗಳನ್ನು ವಿಸ್ತರಿಸುತ್ತಾ ಬರುತ್ತಿರುವ ವಿಯೆಟ್‌ಜೆಟ್ ಏರ್ ಜಾಗತಿಕ ವಾಯುಯಾನ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.

share
ವಿ. ರಾಜೇಶ್ ನಾಯ್ಕ್
ವಿ. ರಾಜೇಶ್ ನಾಯ್ಕ್
Next Story
X