Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸಾವಯವ ಕೃಷಿ ಪದ್ಧತಿಯಿಂದ ಬರಡು...

ಸಾವಯವ ಕೃಷಿ ಪದ್ಧತಿಯಿಂದ ಬರಡು ಭೂಮಿಯಲ್ಲಿ ನಿಂಬೆ ಬೆಳೆದು ಯಶಸ್ಸು ಕಂಡ ರೈತ

ಚಿತ್ರಶೇನ ಫುಲೆಚಿತ್ರಶೇನ ಫುಲೆ3 Nov 2025 8:32 AM IST
share
ಸಾವಯವ ಕೃಷಿ ಪದ್ಧತಿಯಿಂದ ಬರಡು ಭೂಮಿಯಲ್ಲಿ ನಿಂಬೆ ಬೆಳೆದು ಯಶಸ್ಸು ಕಂಡ ರೈತ
ಬೇಸಿಗೆಯ ಎರಡು ತಿಂಗಳಲ್ಲಿ 2 ಲಕ್ಷ ರೂ. ಆದಾಯ: ದಿನನಿತ್ಯ 10-15 ಕೆಜಿ ಇಳುವರಿ

ಬೀದರ್ : ತಾಲೂಕಿನ ಚೌಳಿ ಗ್ರಾಮದ ರೈತ ಶಿವಶರಣಪ್ಪ ಬೋರಾಂಚೆ ಅವರು, ಬರೀ ಸಣ್ಣ ಸಣ್ಣ ಕಲ್ಲುಗಳಿಂದ ಕೂಡಿದ ಭೂಮಿಯಲ್ಲಿ ಯಾವ ಬೆಳೆಯೂ ಬಾರದೆ ಬರಡು ಭೂಮಿಯಾಗಿದ್ದ ತಮ್ಮ ಎರಡು ಎಕರೆ ಭೂಮಿಯಲ್ಲಿ, ನಿಂಬೆ ಹಣ್ಣಿನ ಗಿಡಗಳು ನೆಟ್ಟು ಯಶಸ್ಸು ಕಂಡಿದ್ದಾರೆ.

ಶಿವಶರಣಪ್ಪ ಬೋರಾಂಚೆ ಅವರು ವೃತ್ತಿಯಲ್ಲಿ ವಕೀಲರಾದರು ಕೂಡ, ಈ ನಿಂಬೆ ಹಣ್ಣಿನ ಫಸಲು ತಂದುಕೊಟ್ಟ ಆದಾಯ ನೋಡಿ ಕೃಷಿಯನ್ನೇ ತಮ್ಮ ಆದಾಯವಾಗಿ ಮಾಡಿಕೊಂಡಿದ್ದಾರೆ. ಇವರಿಗೆ ಸುಮಾರು 8 ಎಕರೆ ಕೃಷಿ ಜಮೀನಿದೆ. ಇವರ ಎರಡು ಎಕರೆ ಜಮೀನು ಸಂಪೂರ್ಣವಾಗಿ ಕಲ್ಲುಗಳಿಂದ ತುಂಬಿತ್ತು. ಆ ಭೂಮಿಯಲ್ಲಿನ ಮಣ್ಣು ಫಲವತ್ತತೆಯನ್ನು ಕಳೆದುಕೊಂಡು ಯಾವುದೇ ರೀತಿಯ ಬೆಳೆಗಳು ಬೇಳೆಯುತ್ತಿರಲಿಲ್ಲ. ಇದರಿಂದಾಗಿ ಆ ಭೂಮಿಯೂ ಬರಡಾಗಿ ಬಿದ್ದಿತ್ತು. ಹೀಗಾಗಿ ಶಿವಶರಣಪ್ಪ ಅವರಿಗೆ ದಿಕ್ಕು ತೋಚದೆ ಹೊಲದಲ್ಲಿನ ಕಲ್ಲುಗಳನ್ನು ಆಯ್ದು 2019ರಲ್ಲಿ ನಿಂಬೆ ಗಿಡಗಳು ನೆಟ್ಟಿದ್ದರು.

ಶಿವಶರಣಪ್ಪ ಅವರೇ ಹೇಳುವ ಪ್ರಕಾರ, ಮಣ್ಣಿನ ಫಲವತ್ತತೆ ಇಲ್ಲದೆ ನಾನು ಎರಡು ಎಕರೆಯಲ್ಲಿ ನೆಟ್ಟಿದ ನಿಂಬೆ ಗಿಡಗಳು ಒಣಗಲಾರಂಭಿಸಿದವು. ಎಲೆಗಳು ಉದುರತೊಡಗಿದವು. ಈ ನಿಂಬೆ ಗಿಡಗಳು ಫಸಲು ನೀಡದೆ ನಷ್ಟ ಉಂಟು ಮಾಡಿದವು ಎಂದು ಯೋಚನೆ ಮಾಡಿ ಆ ಗಿಡಗಳನ್ನೆಲ್ಲ ಕಿತ್ತು ಹಾಕಬೇಕು ಎಂದುಕೊಂಡಿದ್ದೆ. ಅಷ್ಟರಲ್ಲಿ ತೋಟಗಾರಿಕೆ ಜೈವಿಕ ಕೇಂದ್ರದ ಸಹಾಯಕ ನಿರ್ದೇಶಕ ನಿಲಂಜನ್ ಅವರು ನನ್ನನ್ನು ತಡೆದು, ಜೈವಿಕ ಕೃಷಿ ಬಗ್ಗೆ ಸಲಹೆ ನೀಡಿದರು. ಆವಾಗಿನಿಂದ ಮಣ್ಣಿನ ಫಲವತ್ತತೆ ಹೆಚ್ಚಾಗಿ, ನಿಂಬೆ ಗಿಡಗಳು ಚಿಗುರುಲಾರಾಂಭಿಸಿದವು.

ನಿಲಂಜನ ಅವರು ನಮ್ಮ ಹೊಲದಲ್ಲಿನ ಮಣ್ಣು ಪರೀಕ್ಷೆ ಮಾಡಿದಾಗ ಮಣ್ಣಿನಲ್ಲಿ ಫಲವತ್ತತೆ ಕಡಿಮೆ ಇರುವುದು ಕಂಡು ಬಂತು. ನಂತರ ಅವರು ಸಾವಯವ ಪದ್ಧತಿಯಾದ ಜಿಪ್ಸಂ, ಟ್ರೈಕೊಡರ್ಮಾ, ಸೋಡೊನೊಮೋಸ್ ಜೊತೆಗೆ ಬೆಲ್ಲ, ಕೋಳಿ ಮೊಟ್ಟೆ, ಸಿಹಿ ಎಣ್ಣೆ ಹಾಗೂ ಗೋವಿನ ಮೂತ್ರವನ್ನು ಹಾಕಲು ಸಲಹೆ ನೀಡಿದರು. ಅವರ ಸಲಹೆಯಂತೆ ನಾನು ಕೆಲಸ ಮಾಡಿದಾಗ ನಿಂಬೆ ಗಿಡಗಳಲ್ಲಿ ಚಿಗುರು ಕಂಡು, ಹೂವಾಗಿ ನಿಂಬೆಹಣ್ಣು ಬಿಟ್ಟಿದ್ದವು. ಈ ಕೃಷಿಯಲ್ಲಿ ನಾನು ಯಶಸ್ಸು ಕಂಡಿದ್ದೇನೆ ಎಂದು ಅವರು ಹೇಳುತ್ತಾರೆ.

ನನಗೆ ಮೊಟ್ಟ ಮೊದಲ ಇಳುವರಿ 2024ರಲ್ಲಿ ಬಂದಿತ್ತು. ಆ ವರ್ಷದ ಎಪ್ರಿಲ್ ಮತ್ತು ಮೇ ಎರಡು ತಿಂಗಳಲ್ಲಿಯೇ ಸುಮಾರು 2 ಲಕ್ಷ ರೂ. ಆದಾಯ ಬಂದಿದೆ. ಇವಾಗ ದಿನಾಲೂ 10 ರಿಂದ 15 ಕೆ.ಜಿ ನಿಂಬೆಹಣ್ಣಿನ ಇಳುವರಿ ಬರುತ್ತದೆ. ಇದರಿಂದಾಗಿ ನಾನು ವಕೀಲ ವೃತ್ತಿ ಬಿಟ್ಟು ಕೃಷಿಯಲ್ಲಿಯೇ ಖುಷಿಯಾಗಿದ್ದೇನೆ ಎಂದು ಅವರು ಹರ್ಷ ವ್ಯಕ್ತಪಡಿಸುತ್ತಾರೆ.

ಇನ್ನುಳಿದ ಜಮೀನಿನಲ್ಲೂ ನಿಂಬೆಹಣ್ಣು, ಇನ್ನಿತರ ಬೆಳೆ ಬೆಳೆಯಲು ಯೋಚನೆ: ಶಿವಶರಣಪ್ಪ ಬೋರಾಂಚೆ ಅವರು ಈ ಸಾವಯವ ಕೃಷಿ ಪದ್ಧತಿಯಿಂದ ನಿಂಬೆಹಣ್ಣು ಬೆಳೆದು ಆದಾಯ ಗಳಿಸಲು ಸಫಲರಾಗಿದ್ದರಿಂದ, ಇನ್ನುಳಿದ ಜಮೀನಿನಲ್ಲೂ ಕೂಡ ಇದೇ ರೀತಿಯ ಜೈವಿಕ ಕೃಷಿಯಿಂದ ನಿಂಬೆಹಣ್ಣು ಹಾಗೂ ಇನ್ನಿತರ ಹಣ್ಣುಗಳ ಗಿಡಗಳು ನೆಡಲು ಅವರು ಮುಂದಾಗಿದ್ದಾರೆ.

ನಿಂಬೆಹಣ್ಣಿನ ಗಿಡಗಳು ಕೂಡ ಫಸಲು ನೀಡುವುದಿಲ್ಲ ಎಂದು ನಿರಾಸೆಯಾಗಿತ್ತು. ಅಷ್ಟರಲ್ಲಿ ನಿಲಂಜನ್ ಅವರಿಂದ ಜೈವಿಕ ಕೃಷಿ ಪದ್ಧತಿಯ ಸಲಹೆ ಪಡೆದು, ನಿಂಬೆಹಣ್ಣಿನ ಕೃಷಿಯಲ್ಲಿ ಯಶಸ್ಸು ಕಂಡಿದ್ದೇನೆ. ಈ ವರ್ಷದಿಂದ ನನ್ನ ಬಹುತೇಕ ಎಲ್ಲ ಜಮೀನಿನಲ್ಲಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುತ್ತೇನೆ.

- ಶಿವಶರಣಪ್ಪ ಬೋರಾಂಚೆ, ನಿಂಬೆ ಬೆಳೆದ ರೈತ

ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣಿನಲ್ಲಿರುವ ಜೀವಸತ್ವಗಳು ನಾಶವಾಗುತ್ತಿವೆ. ಇದರಿಂದಾಗಿ ಮಣ್ಣಿನಲ್ಲಿರುವ ಫಲವತ್ತತೆ ಕಡಿಮೆಯಾಗಿ, ಇಳುವರಿ ಕಡಿಮೆಯಾಗುತ್ತಿದೆ. ಜೈವಿಕ ಪದ್ಧತಿ ಅಳವಡಿಕೆಯಿಂದಾಗಿ ಮಣ್ಣಿನ ಫಲವತ್ತತೆ ಹೆಚ್ಚಾಗಿ ಇಳುವರಿ ಕೂಡ ಹೆಚ್ಚಾಗುತ್ತದೆ. ಇದರಿಂದಾಗಿ ಮನುಷ್ಯನಿಗೆ ಒಳ್ಳೆ ಆಹಾರ ಸಿಗುತ್ತದೆ. ಹಾಗಾಗಿ ರೈತರು ಸಾವಯವ ಕೃಷಿ ಪದ್ದ ತಿ ಅಳವಡಿಸಿಕೊಳ್ಳಬೇಕು.

- ನಿಲಂಜನ್, ಸಹಾಯಕ ನಿರ್ದೇಶಕ, ತೋಟಗಾರಿಕೆಯ ಜೈವಿಕ ಕೇಂದ್ರ

share
ಚಿತ್ರಶೇನ ಫುಲೆ
ಚಿತ್ರಶೇನ ಫುಲೆ
Next Story
X