Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪ್ರಚಾರ ಚಿತ್ರಗಳಿಗೆ ಬಿಜೆಪಿ,ಆರೆಸ್ಸೆಸ್...

ಪ್ರಚಾರ ಚಿತ್ರಗಳಿಗೆ ಬಿಜೆಪಿ,ಆರೆಸ್ಸೆಸ್ ನ ಗುಪ್ತ ನಂಟು?; 10 ರಾಜಕೀಯ ಸಿನೆಮಾಗಳ ಹಿಂದಿನ ಸತ್ಯ ಇಲ್ಲಿದೆ...

ವಾರ್ತಾಭಾರತಿವಾರ್ತಾಭಾರತಿ31 March 2026 5:28 PM IST
share
ಪ್ರಚಾರ ಚಿತ್ರಗಳಿಗೆ ಬಿಜೆಪಿ,ಆರೆಸ್ಸೆಸ್ ನ ಗುಪ್ತ ನಂಟು?; 10 ರಾಜಕೀಯ ಸಿನೆಮಾಗಳ ಹಿಂದಿನ ಸತ್ಯ ಇಲ್ಲಿದೆ...

ಹೊಸದಿಲ್ಲಿ: ‘ನಮಗೆ ಆರೆಸ್ಸೆಸ್ ನಿಂದ ಅತ್ಯುತ್ತಮ ಮಾರ್ಗದರ್ಶನ ಮತ್ತು ಬೆಂಬಲ ಸಿಕ್ಕಿರದಿದ್ದರೆ ನಾವು ಈ ಚಿತ್ರವನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅವರು ನಮ್ಮ ರಕ್ಷಕ ದೇವತೆಗಳು’: 2023ರಲ್ಲಿ ಬ್ಯಾಂಕಾಕ್ ನಲ್ಲಿ ನಡೆದಿದ್ದ ವಿಶ್ವ ಹಿಂದೂ ಕಾಂಗ್ರೆಸ್ನಲ್ಲಿ ‘ದಿ ಕೇರಳ ಸ್ಟೋರಿ’ ಮತ್ತು ‘ದಿ ಕೇರಳ ಸ್ಟೋರಿ 2 ಗೋಸ್ ಬಿಯಾಂಡ್’ನ ನಿರ್ಮಾಪಕ ವಿಫುಲ್ ಅಮೃತಲಾಲ್ ಶಾ ಹೀಗೆ ಹೇಳಿಕೊಂಡಿದ್ದರು. ಇದು ತನ್ನ ಚಿತ್ರಕ್ಕೆ ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಯೊಂದಿಗೆ ಸಂಬಂಧವಿಲ್ಲ ಎಂದು ಶಾ ಸಾರ್ವಜನಿಕವಾಗಿ ನೀಡಿದ್ದ ಹೇಳಿಕೆಗಳಿಗೆ ವಿರುದ್ಧವಾಗಿತ್ತು.

ಇದು ಪ್ರತ್ಯೇಕ ಪ್ರಕರಣವಲ್ಲ. ಈ ಕುರಿತು ವರದಿಯನ್ನು ಪ್ರಕಟಿಸಿರುವ ಸುದ್ದಿ ಜಾಲತಾಣ ‘thequint.com’ ಕನಿಷ್ಠ 10 ಚಲನಚಿತ್ರಗಳ ನಿರ್ಮಾಪಕ ಅಥವಾ ನಿರ್ದೇಶಕರು ಆರೆಸ್ಸೆಸ್ ಅಥವಾ ಹಿಂದುತ್ವ ಸಂಘಟನೆಗಳೊಂದಿಗೆ ನೇರ ಸಂಪರ್ಕ ಹೊಂದಿದ್ದನ್ನು ಬಯಲಿಗೆಳೆದಿದೆ.

► ದಿ ಕೇರಳ ಸ್ಟೋರಿ 1 ಮತ್ತು 2

ದಿ ಕೇರಳ ಸ್ಟೋರಿ 2ರ ನಿರ್ದೇಶಕ ಕಾಮಾಖ್ಯ ನಾರಾಯಣ ಸಿಂಗ್ 2025ರಲ್ಲಿ ‘ಡೆಮಾಗ್ರಫಿ ಈಸ್ ಡೆಸ್ಟಿನಿ’ ಎಂಬ ಸಾಕ್ಷ್ಯಚಿತ್ರವನ್ನು ಮಾಡಿದ್ದು,ಇದು ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಹಿಂದುಗಳನ್ನು ಮೀರಿಸಲಿದೆ ಎಂದು ಬಿಂಬಿಸಿತ್ತು. ಆದರೆ ಈ ಪ್ರತಿಪಾದನೆ ಸುಳ್ಳು ಎನ್ನುವುದು ಈಗ ಸಾಬೀತಾಗಿದೆ. ಇದು ವಿಷಯವಲ್ಲ,ಆರೆಸ್ಸೆಸ್ನ ವಿಭಾಗ ಸಂಘಚಾಲಕ ರವೀಂದ್ರ ಸಾಂಘ್ವಿ ಈ ಸಾಕ್ಷ್ಯಚಿತ್ರದ ನಿರ್ಮಾಪಕರಾಗಿದ್ದರು ಎನ್ನುವುದು ಮುಖ್ಯವಾಗಿದೆ.

►ವಿಫುಲ್ ಶಾ ‘ಬಸ್ತರ್: ದಿ ನಕ್ಸಲ್ ಸ್ಟೋರಿ’ಯ ನಿರ್ಮಾಪಕರು ಸಹ ಆಗಿದ್ದಾರೆ.

ಶಾ 2023ರಲ್ಲಿ ಅರ್ಷ ವಿದ್ಯಾ ಸಮಾಜಂ ಎಂಬ ಕೇರಳದ ಹಿಂದುತ್ವ ಸಂಘಟನೆಗೆ ಎರಡು ಪ್ರತ್ಯೇಕ ದೇಣಿಗೆಗಳಲ್ಲಿ ಒಂದು ಕೋಟಿ ರೂ. ನೀಡಿದ ವರದಿಗಳಿವೆ. ಇಸ್ಲಾಮ್ ಗೆ ಬಲವಂತದಿಂದ ಮತಾಂತರಗೊಂಡ ಹಿಂದು ಮಹಿಳೆಯರನ್ನು ತಾನು ‘ರಕ್ಷಿಸುವುದಾಗಿ’ ಈ ಸಂಘಟನೆ ಹೇಳಿಕೊಂಡಿದೆ. ಆದಾಗ್ಯೂ ಸುದ್ದಿ ಜಾಲತಾಣ ‘ದಿ ನ್ಯೂಸ್ ಮಿನಿಟ್’ನ ವರದಿಯ ಪ್ರಕಾರ ಈ ಸಂಘಟನೆಯೊಂದಿಗೆ ಸಂಯೋಜಿತ ಯೋಗ ಕೇಂದ್ರಗಳು ಈ ಮಹಿಳೆಯರಿಗೆ ಚಿತ್ರಹಿಂಸೆ ನೀಡುತ್ತಿವೆ ಮತ್ತು ನಿರ್ಬಂಧಿಸುತ್ತಿವೆ ಎಂಬ ಆರೋಪವಿದೆ.

►ರಝಾಕಾರ್

ನಿಜಾಮರ ಆಡಳಿತದಲ್ಲಿ ರಝಾಕಾರ ಅರೆಸೇನಾ ಪಡೆಯಿಂದ ನಡೆದಿದ್ದ ದೌರ್ಜನ್ಯಗಳನ್ನು ಬಿಂಬಿಸಿರುವುದಾಗಿ ಹೇಳಿಕೊಂಡಿರುವ ಈ ಚಿತ್ರವು 2024ರಲ್ಲಿ ಬಿಡುಗಡಗೊಂಡಿತ್ತು. ಇದರ ನಿರ್ಮಾಪಕ ಗುಡೂರ್ ನಾರಾಯಣ ರೆಡ್ಡಿ ತೆಲಂಗಾಣ ಬಿಜೆಪಿ ನಾಯಕರಾಗಿದ್ದಾರೆ.

►ಸ್ವಾತಂತ್ರ್ಯವೀರ ಸಾವರ್ಕರ್

ಈ ಚಿತ್ರದ ನಿರ್ಮಾಪಕ ಆನಂದ ಪಂಡಿತ ಮಹಾರಾಷ್ಟ್ರ ಬಿಜೆಪಿಯ ಖಜಾಂಚಿಯಾಗಿದ್ದರು.

►ಪಿಎಂ ನರೇಂದ್ರ ಮೋದಿ

ಈ ಚಿತ್ರದ ನಿರ್ಮಾಪಕರಲ್ಲಿ ಪಂಡಿತ ಅವರ ಆನಂದ ಪಂಡಿತ ಮೋಶನ್ ಪಿಕ್ಚರ್ಸ್ ಸೇರಿದೆ.

►ಆ್ಯಕ್ಸಿಡೆಂಟ್ ಆರ್ ಕಾನ್ಸ್ಪೈರೆಸಿ: ಗೋಧ್ರಾ

ಗುಜರಾತಿನ ಬಿಜೆಪಿ ಶಾಸಕರಾಗಿರುವ ನಟ ಹಿತು ಕನೋಡಿಯಾ ಈ ಚಿತ್ರದ ಭಾಗವಾಗಿದ್ದು, ಅವರ ತಂದೆ ಮತ್ತು ಚಿಕ್ಕಪ್ಪ ಬಿಜೆಪಿ ನಾಯಕರಾಗಿದ್ದಾರೆ. ನಿರ್ಮಾಪಕ ಬಿ.ಜೆ.ಪುರೋಹಿತ ಬಿಜೆಪಿ ಬೆಂಬಲಿಗರಾಗಿದ್ದರೆ ನಿರ್ದೇಶಕ ಎಂ.ಕೆ. ಶಿವ ಆಕಾಶ ಉ.ಪ್ರದೇಶದ ಬಿಜೆಪಿ ಸರಕಾರದ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ.

►ಬೆಂಗಾಲ್ 1947

ಇದರ ನಿರ್ದೇಶಕ ಆಕಾಶಾದಿತ್ಯ ಲಾಮಾ ಆರೆಸ್ಸೆಸ್ ಜೊತೆ ಗುರುತಿಸಿಕೊಂಡಿರುವ ‘ಭಾರತೀಯ ಚಿತ್ರ ಸಾಧನಾ’ದ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಈ ಸಂಘಟನೆಯ ಅಧ್ಯಕ್ಷ ಬಿ.ಕೆ.ಕುಥಿಯಾಲ್ ಪ್ರಮುಖ ಹಿಂದುತ್ವ ಸಿದ್ಧಾಂತಿಯಾಗಿದ್ದಾರೆ.

►ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಅಪಹಾಸ್ಯ ಮಾಡಿದ್ದ ಈ ಚಿತ್ರದ ನಿರ್ದೇಶಕ ವಿಜಯ ರತ್ನಾಕರ ಗುಟ್ಟೆ ಅವರ ತಂದೆ ರತ್ನಾಕರ ಗುಟ್ಟೆ ಮಹಾರಾಷ್ಟ್ರದಲ್ಲಿ ಬಿಜೆಪಿಯ ಮಿತ್ರಪಕ್ಷ ರಾಷ್ಟ್ರೀಯ ಸಮಾಜ ಪಕ್ಷದ ನಾಯಕರಾಗಿದ್ದಾರೆ.

‌►ಉದಯಪುರ ಫೈಲ್ಸ್

ಇದರ ನಿರ್ಮಾಪಕ ಅಮಿತ್ ಜಾನಿ ಹಿಂದು ಆ್ಯಕ್ಷನ್ ಫೋರ್ಸ್ ನ ಸ್ಥಾಪಕ ಹಾಗೂ ಉತ್ತರ ಪ್ರದೇಶ ನವನಿರ್ಮಾಣ ಸೇನಾದ ಅಧ್ಯಕ್ಷರಾಗಿದ್ದಾರೆ.

►ಜಹಾಂಗೀರ್ ನ್ಯಾಷನಲ್ ಯುನಿವರ್ಸಿಟಿ

ಈ ಚಿತ್ರವನ್ನು ಮಹಾಕಾಲ ಮೂವಿಸ್ ಪ್ರೈ.ಲಿ.ನಿರ್ಮಿಸಿದ್ದು, ಅದರ ನಿರ್ದೇಶಕರಲ್ಲೊಬ್ಬರಾಗಿರುವ ವಿಷ್ಣು ತಾನಿಯಾ ಹರ್ಯಾಣದ ರಾಜಕಾರಣಿ ಗೋಪಾಲ ಕಾಂಡಾ ಅವರ ಉದ್ಯಮ ಸಹವರ್ತಿಯಾಗಿದ್ದಾರೆ. ಕಾಂಡಾ ರಾಜ್ಯದಲ್ಲಿ ಬಿಜೆಪಿ ಜೊತೆ ಮೈತ್ರಿ ಹೊಂದಿದ್ದಾರೆ.

ಈ ಹತ್ತು ಚಿತ್ರಗಳು ಸಂಪೂರ್ಣ ಪಟ್ಟಿಯಲ್ಲ. ಬಿಜೆಪಿ ಅಥವಾ ಆರೆಸ್ಸೆಸ್ ನಿಂದ ಪ್ರೇರಿತವಾದ ಅಥವಾ ಅವುಗಳಿಗೆ ಸಂಬಂಧಿಸಿದ ಜನರಿಂದ ಹಣ ಪಡೆದ ಇನ್ನಷ್ಟು ಚಿತ್ರಗಳು ಇರಬಹುದು.

Tags

moviesBJPRSS
share
ವಾರ್ತಾಭಾರತಿ
ವಾರ್ತಾಭಾರತಿ
Next Story
X