Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅನುದಾನದ ಕೊರತೆ: ಇಲಾಖೆ, ನಿಗಮಗಳ...

ಅನುದಾನದ ಕೊರತೆ: ಇಲಾಖೆ, ನಿಗಮಗಳ ವಾಟ್ಸ್‌ಆ್ಯಪ್, ಎಸ್‌ಎಂಎಸ್ ಸೇವೆ ಸ್ಥಗಿತದ ಭೀತಿ

ಜಿ.ಮಹಾಂತೇಶ್ಜಿ.ಮಹಾಂತೇಶ್21 Oct 2025 9:00 AM IST
share
ಅನುದಾನದ ಕೊರತೆ: ಇಲಾಖೆ, ನಿಗಮಗಳ ವಾಟ್ಸ್‌ಆ್ಯಪ್, ಎಸ್‌ಎಂಎಸ್ ಸೇವೆ ಸ್ಥಗಿತದ ಭೀತಿ

ಬೆಂಗಳೂರು, ಅ.20: ಮೊಬೈಲ್ ಒನ್ ಯೋಜನೆಯಡಿ ವಾಟ್ಸ್‌ಆ್ಯಪ್, ಎಸ್‌ಎಂಎಸ್, ಐವಿಆರ್‌ಎಸ್ ಸೇವೆಗಳ ಬಳಕೆ ಮಾಡುತ್ತಿರುವ ಸರಕಾರದ ಇಲಾಖೆಗಳು, ನಿಗಮ, ಮಂಡಳಿಗಳಿಗೀಗ ಅನುದಾನದ ಕೊರತೆ ಉಂಟಾಗಿದೆ. ನಿಗದಿತ ಅವಧಿಯೊಳಗೆ ಅನುದಾನ ಒದಗಿಸದೇ ಇದ್ದಲ್ಲಿ ಸೇವಾದಾತ ಕಂಪೆನಿಯು ಒದಗಿಸುತ್ತಿರುವ ಈ ಎಲ್ಲ ಸೇವೆಗಳು ಸ್ಥಗಿತಗೊಳ್ಳಲಿದೆ. ಅಲ್ಲದೇ ಸರಕಾರಿ ಇಲಾಖೆಗಳ ತಂತ್ರಾಂಶಗಳು ಕಾರ್ಯನಿರ್ವಹಿಸುವುದಿಲ್ಲ.

ಅಲ್ಲದೇ ಈ ಸೇವೆಗಳನ್ನು ಪೂರೈಸುತ್ತಿರುವ ಸೇವಾದಾತ ಕಂಪೆನಿಗಳಿಗೆ ವೆಚ್ಚ ಭರಿಸಲು ಹಣಕಾಸಿನ ಲಭ್ಯತೆಯಿಲ್ಲವಾಗಿದೆ. ಏಕೆಂದರೇ ಈ ಸೇವೆಗಳ ಬಳಕೆ ಮಾಡುತ್ತಿರುವ ಇಲಾಖೆಗಳ ವೆಚ್ಚವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಅಲ್ಲದೆ ಈ ಸೇವೆಗಳಿಗೆ ಒದಗಿಸಿರುವ ಅನುದಾನ ಲಭ್ಯತೆ ಮತ್ತು ವೆಚ್ಚದ ಅನುಪಾತವೂ ಹೆಚ್ಚುತ್ತಿದೆ.

ಹೀಗಾಗಿ ವಿದ್ಯುನ್ಮಾನ ಸೇವಾ ವಿತರಣಾ ನಿರ್ದೇಶನಾಲಯದಿಂದ ಎಸ್‌ಎಂಎಸ್, ಐವಿಆರ್‌ಎಸ್, ವಾಟ್ಸ್‌ಆ್ಯಪ್ ಸೇವೆಗಳಿಗೆ ಸಂಬಂಧಿಸಿ ರಾಜ್ಯ ಸರಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ. 2025ರ ಅಕ್ಟೋಬರ್ 6ರಂದು ಆದೇಶ ಹೊರಡಿಸಿದೆ. ಇದರ ಪ್ರತಿಯು "the-file.in"ಗೆ ಲಭ್ಯವಾಗಿದೆ.

ಮೊಬೈಲ್ ಒನ್ ಯೋಜನೆಯಡಿ ಈ ಸೌಲಭ್ಯ ಮತ್ತು ಸೇವೆಗಳನ್ನು ಅರ್ಹ ಸೇವಾದಾತ ಬಿಎಸ್ಸೆನ್ನೆಲ್ ಸಂಸ್ಥೆಯಿಂದ ಕೇಂದ್ರೀಕೃತವಾಗಿ ಖರೀದಿಸಿರುವ ವಿದ್ಯುನ್ಮಾನ ನಾಗರಿಕ ಸೇವಾ ವಿತರಣೆ ನಿರ್ದೇಶನಾಲಯವು, ಸರಕಾರದ ಎಲ್ಲ ಇಲಾಖೆಗಳು ಮತ್ತು ಇಲಾಖೆಗಳ ಅಧೀನದಲ್ಲಿರುವ ನಿಗಮ ಮತ್ತು ಮಂಡಳಿಗಳ ಅಧಿಕಾರಿ, ನೌಕರರಿಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ.

2023ರ ಡಿಸೆಂಬರ್ 15ರಿಂದ 2026ರ ಡಿಸೆಂಬರ್ 14ರವರೆಗೆ ಈ ಸೇವೆ ಒದಗಿಸಲು ವಿದ್ಯುನ್ಮಾನ ನಾಗರಿಕ ಸೇವಾ ವಿತರಣೆ ನಿರ್ದೇಶನಾಲಯವು 4(ಜಿ) ವಿನಾಯಿತಿ ಪಡೆದಿದೆ. ಇದರ ಪ್ರಕಾರ ಪ್ರತೀ ಎಸ್‌ಎಂಎಸ್‌ಗೆ 0.1, 0.075 ಪೈಸೆ, ವಾಟ್ಸ್‌ಆ್ಯಪ್ (ಸರ್ವಿಸ್ ಮೆಸೆಂಜರ್) 0.632 ಪೈಸೆ, ಟ್ರೂಲ್ ಕಾಲರ್‌ಗೆ 0.06 ಪೈಸೆ, ವಾಯ್ಸ್ ಮೆಸೇಜ್‌ಗೆ 30 ಸೆಕೆಂಡ್‌ಗಳಿಗೆ 0.29 ಪೈಸೆ ದರ ನಿಗದಿಪಡಿಸಿತ್ತು.

ಈ ಸಂಬಂಧ ಬಿಎಸ್ಸೆನ್ನೆಲ್ ಸಂಸ್ಥೆಯು ಪ್ರತೀ ತಿಂಗಳು ಸೇವೆಯ ಸಂಖ್ಯೆಗೆ ಅನುಗುಣವಾಗಿ ಬಿಲ್ ನೀಡುತ್ತಿದೆ. ಈ ವೆಚ್ಚವನ್ನು ವಿದ್ಯುನ್ಮಾನ ನಾಗರಿಕ ಸೇವಾ ವಿತರಣೆ ನಿರ್ದೇಶನಾಲಯವು ಭರಿಸುತ್ತಿದೆ. ಈ ವೆಚ್ಚವನ್ನು ಇಲಾಖೆಗಳಿಂದ ಮರು ಭರಿಸಿಕೊಳ್ಳುತ್ತಿಲ್ಲ. ಈ ವೆಚ್ಚವನ್ನು ಸರಕಾರವು ನೀಡುವ ವಾರ್ಷಿಕ ಅನುದಾನ ಮತ್ತು ನಿಗಮ, ಮಂಡಳಿಗಳು ಈ ಸೇವೆಗಳನ್ನು ಬಳಸುವ ಸಂಖ್ಯೆಗೆ ಅನುಗುಣವಾಗಿ ಅದಕ್ಕೆ ತಗುಲುವ ವೆಚ್ಚವನ್ನು ಈ ಸಂಸ್ಥೆಗಳಿಂದ ಮರು ಭರಿಸಿಕೊಳ್ಳುತ್ತಿದೆ.

ಶೇ.70ಕ್ಕೆ ಏರಿಕೆಯಾದ ವೆಚ್ಚ: ಬಿಎಸ್ಸೆನ್ನೆಲ್‌ಸಂಸ್ಥೆಯಿಂದ ಈ ಎಲ್ಲಾ ಸೇವೆಗಳನ್ನು ಪಡೆಯುತ್ತಿರುವ ಇಲಾಖೆಗೀಗ ಅನುದಾನದ ಕೊರತೆ ಎದುರಾಗಿದೆ. ಹೀಗಾಗಿ ನಿಗದಿತ ಅವಧಿಯಲ್ಲಿ ಈ ವೆಚ್ಚವನ್ನು ಬಿಎಸ್ಸೆನ್ನೆಲ್‌ಗೆ ಭರಿಸುತ್ತಿಲ್ಲ. 2023-24, 2024-25ನೇ ಸಾಲಿನಲ್ಲಿ

ವಾಟ್ಸ್‌ಆ್ಯಪ್, ಎಸ್‌ಎಂಎಸ್, ಐವಿಆರ್‌ಎಸ್ ಸೇವೆಗಳ ಬಳಕೆಗೂ ಪ್ರಸಕ್ತ ಸಾಲಿನ ಬಳಕೆಗೆ ತಾಳೆ ಮಾಡಿದಲ್ಲಿ ಈ ಸೇವೆಯ ಬಳಕೆಯು ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಈ ಸೇವೆಗಳ ಬಳಕೆಯು ಶೇ.70ಕ್ಕೇರಿದೆ. ಅಲ್ಲದೇ ಅನುದಾನದ ಲಭ್ಯತೆ ಮತ್ತು ಈ ಸೇವೆಗಳ ವೆಚ್ಚದ ಅನುಪಾತವೂ ಸಹ ಹೆಚ್ಚಿದೆ ಎಂದು ಆದೇಶದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಸ್ಥಗಿತಗೊಳ್ಳಲಿದೆಯೇ ಸೇವೆಗಳು?: ವಾಟ್ಸ್

ಆ್ಯಪ್, ಎಸ್‌ಎಂಎಸ್, ವಾಯ್ಸ್ ಎಸ್‌ಎಂಎಸ್, ಐವಿಆರ್‌ಎಸ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆ ಮಾಡುತ್ತಿವೆಯಾದರೂ ಸೇವಾದಾತ ಕಂಪೆನಿಗೆ ನಿಗದಿತ ಅವಧಿಯೊಳಗೆ ವೆಚ್ಚವನ್ನು ಭರಿಸುತ್ತಿಲ್ಲ. ಸೂಕ್ತ ಅವಧಿಯೊಳಗೆ ವೆಚ್ಚ ಭರಿಸದಿದ್ದಲ್ಲಿ ಈ ಎಲ್ಲಾ ಸೇವೆಗಳೂ ಸ್ಥಗಿತಗೊಳಿಸಲಿದೆ ಎಂಬ ಸಂದೇಶವನ್ನೂ ಸಹ ವಿದ್ಯುನ್ಮಾನ ನಾಗರಿಕ ಸೇವೆಗಳ ವಿತರಣೆ ನಿರ್ದೇಶನಾಲಯವು ಸರಕಾರಕ್ಕೆ ರವಾನಿಸಿರುವುದು ಆದೇಶದಿಂದ ತಿಳಿದು ಬಂದಿದೆ.

ಪೂರ್ವಪಾವತಿ ಮಾದರಿಗೆ ಮೊರೆ:ಬಿಎಸ್‌ಎನ್‌ಎಲ್‌ಗೆ ನಿಗದಿತ ಅವಧಿಯೊಳಗೆ ವೆಚ್ಚವನ್ನು ಭರಿಸದಿದ್ದಲ್ಲಿ ಸೇವೆಗಳು ಸ್ಥಗಿತಗೊಳ್ಳುವ ಆತಂಕದಿಂದ ಸರಕಾರವೀಗ ಪೂರ್ವ ಪಾವತಿ (ಪ್ರೀಪೇಯ್ಡ್) ಮಾದರಿಗೆ ಮೊರೆ ಹೋಗಲು ನಿರ್ಧರಿಸಿದೆ. ಈ ಎಲ್ಲ ಸೇವೆಗಳಿಗೆ ತಗಲುವ ವೆಚ್ಚವನ್ನು ಪೂರ್ವ ಪಾವತಿ ಮಾದರಿಯಲ್ಲಿ ಮುಂಗಡವಾಗಿ ಜಮಾ ಮಾಡಲು ಮಾರ್ಗಸೂಚಿಗಳನ್ನು ಹೊರಡಿಸಲು ಆದೇಶದಲ್ಲಿ ಸೂಚಿಸಿರುವುದು ಗೊತ್ತಾಗಿದೆ.

ಕೇಂದ್ರೀತವಾಗಿ ಒದಗಿಸುತ್ತಿರುವ ಎಸ್‌ಎಂಎಸ್, ಐವಿಆರ್‌ಎಸ್ ವಾಟ್ಸ್ಆ್ಯಪ್ ಸೇವೆಗಳನ್ನು ಬಳಸುತ್ತಿರುವ ಇಲಾಖೆಗಳು, ಮಂಡಳಿಗಳು, ನಿಗಮಗಳು ಆಯಾ ಸಾಲಿನ ವರ್ಷದ ಅರಂಭಕ್ಕೂ ಮೊದಲೇ ಪ್ರಸಕ್ತ ಸಾಲಿನಲ್ಲಿ ಬಳಸಬಹುದಾದ ಎಸ್‌ಎಂಎಸ್, ಐವಿಆರ್‌ಎಸ್, ವಾಟ್ಸ್‌ಆ್ಯಪ್‌ಸಂಖ್ಯೆಗಳನ್ನು ನಿರ್ಧರಿಸಬೇಕು ಎಂದು ಸೂಚಿಸಿದೆ.

ಹಿಂದಿನ ಸಾಲಿನಲ್ಲಿ ಪಡೆದಿರುವ ಈ ಎಲ್ಲ ಸೇವೆಗಳ ಸಂಖ್ಯಾಧಾರಿತ ಬಳಕೆ ಮಾಹಿತಿ ನೀಡಬೇಕು. ವಿದ್ಯುನ್ಮಾನ ನಾಗರಿಕ ಸೇವಾ ವಿತರಣೆ ನಿರ್ದೇಶನಾಲಯವು ಅಂದಾಜು ವೆಚ್ಚ ಮಾಡಬೇಕು. ಈ ವೆಚ್ಚದ ಮೊತ್ತವನ್ನು ಈ ನಿರ್ದೇಶನಾಲಯಕ್ಕೆ ಮುಂಗಡವಾಗಿ ಜಮೆ ಮಾಡಬೇಕು. ಸೆಂಡರ್ ಐಡಿ ಖಾತೆಗಳನ್ನು ಜಮಾಗೊಳಿಸಿದ ಮೊತ್ತಕ್ಕೆ ಸಮನಾಗಿ ಎಸ್‌ಎಂಎಸ್ , ಐವಿಆರ್‌ಎಸ್, ವಾಟ್ಸ್‌ಆ್ಯಪ್‌ಸಂಖ್ಯೆಗಳನ್ನು ರಿ ಚಾರ್ಜ್ ಮಾಡಿಸಿಕೊಳ್ಳಬೇಕು.

ರಿ ಚಾರ್ಜ್‌ಗೊಳಿಸಿಲ್ಲದ ಯಾವುದೇ ಸೆಂಡರ್ ಐಡಿಗಳಿಗೆ ಎಸ್‌ಎಂಎಸ್, ವಾಟ್ಸ್‌ಆ್ಯಪ್, ಐವಿಆರ್‌ಎಸ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಈ ಸೇವೆಗಳ ಸಂಖ್ಯೆಗಿಂತ ಬಳಕೆ ಮೀರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಒಂದು ವೇಳೆ ರೀಚಾರ್ಜ್ ಪಡೆದಿರುವ ಎಸ್‌ಎಂಎಸ್, ವಾಟ್ಸ್‌ಆ್ಯಪ್, ಐವಿಆರ್‌ಎಸ್‌ಗಳಿಗಿಂತ ಹೆಚ್ಚಿನ ಸಂಖ್ಯೆ ಅಗತ್ಯ ಬಿದ್ದಲ್ಲಿ

ಹೆಚ್ಚಿನ ಮೊತ್ತವನ್ನು ಇ ಆಡಳಿತಕ್ಕೆ ಮುಂಗಡವಾಗಿ ಪಾವತಿಸಬೇಕು ಎಂದು ಸೂಚಿಸಿದೆ.

2024ರಲ್ಲೂ 36.29 ಕೋಟಿ ರೂ. ಮೊತ್ತದ ಬಿಲ್‌ಗಳನ್ನು ಬಾಕಿ ಉಳಿಸಿಕೊಂಡಿತ್ತು. ಇದರಲ್ಲಿ 2023ರ ಮಾರ್ಚ್ ಅಂತ್ಯಕ್ಕೆ 21.74 ಕೋಟಿ ರೂ.ಹಾಗೂ 2024ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 14.55 ಕೋಟಿ ರೂ. ಬಾಕಿ ಇತ್ತು.

ಲಾಕ್‌ಡೌನ್ ಅವಧಿಯಲ್ಲಿಯೂ ಸರಕಾರದ ಎಲ್ಲ ಇಲಾಖೆಗಳು ದೂರವಾಣಿ ಬಿಲ್‌ನ ಒಟ್ಟು 38.54 ಕೋಟಿ ರೂ. ಬಾಕಿ ಇರಿಸಿಕೊಂಡಿದ್ದವು. ಇಲಾಖೆಗಳ ಕಚೇರಿಗಳಲ್ಲಿರುವ ಸ್ಥಿರ ದೂರವಾಣಿ ಬಳಕೆಗೆ ಸಂಬಂಧಿಸಿದಂತೆ 34.59 ಕೋಟಿ ರೂ., ಅಧಿಕಾರಿ, ನೌಕರರು ಬಳಸಿಕೊಂಡಿರುವ ಮೊಬೈಲ್ ಸೇವೆಗಳಿಗೆ ಸಂಬಂಧಿಸಿದಂತೆ 3.95 ಕೋಟಿ ರೂ. ಬಾಕಿ ಉಳಿದಿತ್ತು.

ದೂರವಾಣಿ ಮೊತ್ತವನ್ನು 2019ರ ಡಿಸೆಂಬರ್ 31 ಅಂತ್ಯಕ್ಕೆ ಬಾಕಿ ಉಳಿಸಿಕೊಂಡಿರುವ ಇಲಾಖೆಗಳಲ್ಲಿ ಇ-ಆಡಳಿತ ಇಲಾಖೆ ಅಗ್ರ ಸ್ಥಾನದಲ್ಲಿದ್ದವು. ಈ ಇಲಾಖೆ 11,77,59,953 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದರೆ ಪೊಲೀಸ್ ಇಲಾಖೆ 9,53,23,581 ಕೋಟಿ ರೂ., ಪಿಡಿಒಗಳಿಂದ 5,47,60,039 ಕೋಟಿ ರೂ., ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ನಾಡ ಕಚೇರಿಗಳು 2,81,06,219 ಕೋಟಿ ರೂ. ಬಾಕಿ ಉಳಿಸಿಕೊಳ್ಳುವ ಮೂಲಕ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದವು.

ಕಿಯೋನಿಕ್ಸ್ 82,96,553 ರೂ., ಕೃಷಿ ಇಲಾಖೆ 37,21,543ರೂ., ಬಿಬಿಎಂಪಿ 38,29,622 ರೂ., ಶಿಕ್ಷಣ ಇಲಾಖೆ 34,92,708 ರೂ., ಆರೋಗ್ಯ ಇಲಾಖೆ 35,01,241 ರೂ., ಅರಣ್ಯ ಇಲಾಖೆ 19,51,259 ರೂ., ಕಾರ್ಮಿಕ ಇಲಾಖೆ 3,11,780ರೂ., ಎಂ-ಗೌರ್ನೆನ್ಸ್ 9,06,066 ರೂ., ತಾಲೂಕು ಪಂಚಾಯತ್‌ಗಳಿಂದ 11,12,518 ರೂ., ಸಾರಿಗೆ ಇಲಾಖೆ 13,02,495 ರೂ., ನಗರಾಭಿವೃದ್ಧಿ ಇಲಾಖೆ 11,64,577 ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 4,72,900 ರೂ., ಸೇರಿದಂತೆ ಇನ್ನಿತರ ಇಲಾಖೆಗಳು ಲಕ್ಷಾಂತರ ರೂ.ಮೊತ್ತವನ್ನು ಬಾಕಿ ಉಳಿಸಿಕೊಂಡಿದ್ದವು.

share
ಜಿ.ಮಹಾಂತೇಶ್
ಜಿ.ಮಹಾಂತೇಶ್
Next Story
X