Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕಂದಾಯಗಳ ವಸೂಲಿ ಗುರಿ ಮುಟ್ಟುವಲ್ಲಿ...

ಕಂದಾಯಗಳ ವಸೂಲಿ ಗುರಿ ಮುಟ್ಟುವಲ್ಲಿ ಇಲಾಖೆ ವಿಫಲ; ವಸೂಲಾತಿಗೆ ಇನ್ನೂ 1,484.29 ಕೋಟಿ ರೂ. ಬಾಕಿ

ಜಿ.ಮಹಾಂತೇಶ್ಜಿ.ಮಹಾಂತೇಶ್15 May 2024 8:40 AM IST
share
ಕಂದಾಯಗಳ ವಸೂಲಿ ಗುರಿ ಮುಟ್ಟುವಲ್ಲಿ ಇಲಾಖೆ ವಿಫಲ; ವಸೂಲಾತಿಗೆ ಇನ್ನೂ 1,484.29 ಕೋಟಿ ರೂ. ಬಾಕಿ

ಬೆಂಗಳೂರು: ರಾಜ್ಯದಲ್ಲಿ 2023-24ನೇ ಸಾಲಿಗೆ ಭೂ ಕಂದಾಯ, ನೀರಿನ ಕರ, ದಂಡ ಮತ್ತು ಇತರ ಕಂದಾಯಗಳ ರೂಪದಲ್ಲಿ ಬೇಡಿಕೆ ಪ್ರಕಾರ 1,514.05 ಕೋಟಿ ರೂ. ವಸೂಲು ಮಾಡಬೇಕಿದ್ದ ಕಂದಾಯ ಇಲಾಖೆಯು ತನ್ನ ಗುರಿಯನ್ನು ಮುಟ್ಟುವಲ್ಲಿ ವಿಫಲವಾಗಿದೆ. ಒಟ್ಟು ಬೇಡಿಕೆ ಪೈಕಿ ಕೇವಲ 29.76 ಕೋಟಿ ರೂ. ಮಾತ್ರ ವಸೂಲು ಮಾಡಿದೆ. ವಸೂಲಾತಿಗೆ ಇನ್ನೂ 1,484.29 ಕೋಟಿ ರೂ. ಬಾಕಿ ಇರಿಸಿಕೊಂಡಿದೆ.

ಭೂ ಕಂದಾಯ ಹಾಗೂ ಇತರ ಕರ, ದಂಡಗಳ ವಸೂಲಾತಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಸಿದ್ಧಪಡಿಸಿರುವ ವಾರ್ಷಿಕ ವರದಿಯಲ್ಲಿ ಈ ವಿವರಗಳಿವೆ. ಇದರ ಪ್ರತಿಯು ‘The-file.in’ಗೆ ಲಭ್ಯವಾಗಿದೆ.

ರೇರಾ ಕಾಯ್ದೆ ಮತ್ತು ನಿಯಮಗಳಡಿಯಲ್ಲಿ ರಾಜ್ಯದ ಬೆಂಗಳೂರು ನಗರ ಜಿಲ್ಲೆ ಸೇರಿದಂತೆ 7 ಜಿಲ್ಲೆಗಳಲ್ಲಿ 423.51 ಕೋಟಿ ರೂ. ಭೂ ಕಂದಾಯ ಬಾಕಿ ಇರುವುದರ ಬೆನ್ನಲ್ಲೇ ಇದೀಗ ಕಂದಾಯ ಇಲಾಖೆಯ ವ್ಯಾಪ್ತಿಯೊಂದರಲ್ಲೇ 1,484.29 ಕೋಟಿ ರೂ. ವಸೂಲಾತಿಗೆ ಬಾಕಿ ಇರುವ ವಿಚಾರವು ಮುನ್ನೆಲೆಗೆ ಬಂದಿದೆ.

2023-24ನೇ ಸಾಲಿನಲ್ಲಿ ಭೂ ಕಂದಾಯಕ್ಕೆ ಸಂಬಂಧಿಸಿದಂತೆ ನಾಲ್ಕು ವಿಭಾಗಗಳಿಂದ 36.96 ಕೋಟಿ ರೂ. ಬೇಡಿಕೆ ಇತ್ತು. ಈ ಪೈಕಿ 14.57 ಕೋಟಿ ರೂ. ವಸೂಲಾಗಿದೆ. ಇನ್ನೂ 22.38 ಕೋಟಿ ರೂ. ಬಾಕಿ ಇದೆ. ಒಟ್ಟಾರೆ ಶೇ.39.44ರಷ್ಟು ಮಾತ್ರ ಪ್ರಗತಿ ಸಾಧಿಸಿರುವುದು ವರದಿಯಿಂದ ಗೊತ್ತಾಗಿದೆ.

ಬೆಂಗಳೂರು ವಿಭಾಗದಲ್ಲಿ 4.84 ಕೋಟಿ ರೂ. ಬೇಡಿಕೆ ಇತ್ತು. ಈ ಪೈಕಿ 1.82 ಕೋಟಿ ರೂ. ಮಾತ್ರ ವಸೂಲಾಗಿದೆ. ಬಾಕಿ 3.02 ಕೋಟಿ ರೂ. ಇದೆ. ಮೈಸೂರು ವಿಭಾಗದಲ್ಲಿ 12.68 ಕೋಟಿ ರೂ. ಬೇಡಿಕೆ ಪೈಕಿ 11.81 ಕೋಟಿ ರೂ. ವಸೂಲಾಗಿದೆ. 84.32 ಲಕ್ಷ ರೂ. ಬಾಕಿ ಇದೆ. ಬೆಳಗಾವಿ ವಿಭಾಗದಲ್ಲಿ 3.31 ಕೋಟಿ ರೂ. ಬೇಡಿಕೆ ಪೈಕಿ 24.17 ಲಕ್ಷ ರೂ. ವಸೂಲಾಗಿದೆ. 3.07 ಕೋಟಿ ರೂ. ಬಾಕಿ ಇದೆ. ಕಲಬುರಗಿ ವಿಭಾಗದಲ್ಲಿ 16.11 ಕೋಟಿ ರೂ. ಬೇಡಿಕೆ ಪೈಕಿ 67.37 ಲಕ್ಷ ರೂ. ವಸೂಲಾಗಿದೆ. 15.44 ಕೋಟಿ ರೂ. ಬಾಕಿ ಇರುವುದು ತಿಳಿದು ಬಂದಿದೆ.

ನೀರಿನ ಕರ ಮತ್ತು ದಂಡ ವಸೂಲಾತಿ ಸಂಬಂಧ 2023-24ನೇ ಸಾಲಿಗೆ ಒಟ್ಟಾರೆ 865.20 ಕೋಟಿ ರೂ. ಬೇಡಿಕೆ ಅಂದಾಜಿಸಿತ್ತು. ನಾಲ್ಕು ವಿಭಾಗಗಳಿಂದ ಕೇವಲ 8.14 ಕೋಟಿ ರೂ. ವಸೂಲಾಗಿದೆ. ವಸೂಲಾತಿಗೆ 85.70 ಕೋಟಿ ರೂ. ಬಾಕಿ ಇದೆ.

ಬೆಂಗಳೂರು ವಿಭಾಗದಲ್ಲಿ 63.33 ಕೋಟಿ ರೂ. ಬೇಡಿಕೆ ಪೈಕಿ ಕೇವಲ 26.65 ಲಕ್ಷ ರೂ. ವಸೂಲಾಗಿದೆ. ವಸೂಲಾತಿಗೆ 63.06 ಕೋಟಿ ರೂ. ಬಾಕಿ ಇದೆ. ಮೈಸೂರು ವಿಭಾಗದಲ್ಲಿ 37.71 ಕೋಟಿ ರೂ. ಬೇಡಿಕೆ ಪೈಕಿ 4.25 ಕೋಟಿ ರೂ. ವಸೂಲಾಗಿದ್ದು 37.28 ಕೋಟಿ ರೂ. ಬಾಕಿ ಇದೆ. ಬೆಳಗಾವಿ ವಿಭಾಗದಲ್ಲಿ 13.16 ಕೋಟಿ ರೂ. ಬೇಡಿಕೆ ಪೈಕಿ ಕೇವಲ 2.07 ಲಕ್ಷ ರೂ. ವಸೂಲಾಗಿದ್ದು ಇನ್ನೂ 13.14 ಕೋಟಿ ರೂ. ಬಾಕಿ ಇದೆ. ಕಲಬುರಗಿ ವಿಭಾಗದಲ್ಲಿ 411.56 ಕೋಟಿ ರೂ. ಬೇಡಿಕೆ ಪೈಕಿ ಕೇವಲ 3.60 ಕೋಟಿ ರೂ. ಮಾತ್ರ ವಸೂಲಾಗಿದ್ದು 407.95 ಕೋಟಿ ರೂ. ವಸೂಲಾತಿಗೆ ಬಾಕಿ ಇರುವುದು ಗೊತ್ತಾಗಿದೆ.

ಇತರ ಬಾಕಿ ರೂಪದಲ್ಲಿಯೂ 2023-24ನೇ ಸಾಲಿನಲ್ಲಿ 611.9 ಕೋಟಿ ರೂ. ಬೇಡಿಕೆ ಇತ್ತು. ಈ ಪೈಕಿ ಕೇವಲ 7.05 ಕೋಟಿ ರೂ. ಮಾತ್ರ ವಸೂಲಾಗಿದೆ. ವಸೂಲಾತಿಗೆ 604.85 ಕೋಟಿ ರೂ. ಬಾಕಿ ಇದೆ. ಬೆಂಗಳೂರು ವಿಭಾಗದಲ್ಲಿ 88.97 ಕೋಟಿ ರೂ. ಬೇಡಿಕೆ ಪೈಕಿ 3.13 ಕೋಟಿ ರೂ. ವಸೂಲಾಗಿದೆ. 85.84 ಕೋಟಿ ರೂ. ಬಾಕಿ ಇದೆ.

ಮೈಸೂರು ವಿಭಾಗದಲ್ಲಿ 120.21 ಕೋಟಿ ರೂ. ಬೇಡಿಕೆ ಪೈಕಿ 64.20 ಲಕ್ಷ ರೂ. ಮಾತ್ರ ವಸೂಲಾಗಿದೆ. 119.57 ಕೋಟಿ ರೂ. ಬಾಕಿ ಇದೆ. ಬೆಳಗಾವಿ ವಿಭಾಗದಲ್ಲಿ 106.38 ಕೋಟಿ ರೂ. ಬೇಡಿಕೆ ಪೈಕಿ 2.57 ಕೋಟಿ ರೂ. ವಸೂಲಾಗಿದ್ದು ಇನ್ನೂ 103.80 ಕೋಟಿ ರೂ. ವಸೂಲಾತಿಗೆ ಬಾಕಿ ಇದೆ. ಕಲಬುರಗಿ ವಿಭಾಗದಲ್ಲಿ 296.33 ಕೋಟಿ ರೂ. ಬೇಡಿಕೆ ಪೈಕಿ ಕೇವಲ 70.31 ಲಕ್ಷ ರೂ. ಮಾತ್ರ ವಸೂಲಾಗಿದೆ. ಈ ಕುರಿತು ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ದಂಡ ಪರಿಹಾರದ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲು ಮಾಡುವ ವಿಷಯವನ್ನು ಸಕಾಲ ವ್ಯಾಪ್ತಿಗೊಳಪಡಿಸುವ ಸಂಬಂಧ ರೇರಾ ಪ್ರಾಧಿಕಾರ 2023ರ ಸೆ.26ರಂದು ನಡೆಸಿದ್ದ ಸಭೆಯಲ್ಲಿ 423.51 ಕೋಟಿ ರೂ. ಪ್ರಮಾಣದಲ್ಲಿ ಭೂ ಕಂದಾಯ ಬಾಕಿ ಇರುವ ವಿಚಾರವು ಚರ್ಚೆಗೆ ಬಂದಿತ್ತು.

ರೇರಾ ಕಾಯ್ದೆ ಅಡಿಯಲ್ಲಿ ವಿಧಿಸಲಾಗುವ ದಂಡ, ಪರಿಹಾರದ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ವಸೂಲು ಮಾಡುವ ಪ್ರಕ್ರಿಯೆಗೆ ತಗಲುವ ವೆಚ್ಚಗಳನ್ನು ಭರಿಸಲು ಮತ್ತು ವಸೂಲಾತಿ ಶುಲ್ಕಗಳನ್ನು ವಿಧಿಸಲು ರೇರಾ ನಿಯಮಗಳಲ್ಲಿ ಸೂಕ್ತ ತಿದ್ದುಪಡಿ ತರುವ ಬಗ್ಗೆ ಕ್ರಮ ವಹಿಸಲು ವಸತಿ ಇಲಾಖೆಗೆ ಸೂಚಿಸಿತ್ತು.

share
ಜಿ.ಮಹಾಂತೇಶ್
ಜಿ.ಮಹಾಂತೇಶ್
Next Story
X