Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಚಾರಣಿಗರ ನೆಚ್ಚಿನ ತಾಣ ಬಸರಿಕಟ್ಟೆಯ...

ಚಾರಣಿಗರ ನೆಚ್ಚಿನ ತಾಣ ಬಸರಿಕಟ್ಟೆಯ ಮೇರುತಿ ಗುಡ್ಡ

ಕೆ.ಎಲ್.ಶಿವು, ಕಳಸಕೆ.ಎಲ್.ಶಿವು, ಕಳಸ22 Dec 2025 11:22 AM IST
share
ಚಾರಣಿಗರ ನೆಚ್ಚಿನ ತಾಣ ಬಸರಿಕಟ್ಟೆಯ ಮೇರುತಿ ಗುಡ್ಡ
ರಾಜ್ಯದ 5ನೇ ಅತೀ ಎತ್ತರದ ಗಿರಿಶ್ರೇಣಿ

ಚಿಕ್ಕಮಗಳೂರು: ಕಾಫಿನಾಡಿನ ನೂರಾರು ಪ್ರವಾಸಿ ಕೇಂದ್ರಗಳ ಪೈಕಿ ಹಲವಾರು ಟ್ರಕ್ಕಿಂಗ್ ತಾಣಗಳು ಚಾರಣಿಗರ ಹಾಟ್‌ಸ್ಪಾಟ್ ಆಗಿವೆ. ಇಂತಹ ಸುಂದರ ಟ್ರಕ್ಕಿಂಗ್ ತಾಣಗಳಲ್ಲಿ ಮೇರುತಿ ಗುಡ್ಡವೂ ಒಂದಾಗಿದ್ದು, ಸಾವಿರಾರು ಚಾರಣಿಗರನ್ನು ತನ್ನತ್ತ ಸೆಳೆಯುತ್ತಿದೆ.

ಕಾಫಿನಾಡಿನ ಮಲೆನಾಡು ಭಾಗದ ತಾಲೂಕುಗಳಾದ ಕೊಪ್ಪಹಾಗೂ ಕಳಸ ತಾಲೂಕಿನ ಗಡಿಯಲ್ಲಿರುವ ಬಸರಿಕಟ್ಟೆ ಗ್ರಾಮದಿಂದ ಸುಮಾರು 8ಕಿಮೀ ದೂರದಲ್ಲಿದೆ ಮೇರುತಿ ಗುಡ್ಡ. ಮಲೆನಾಡಿಗೆ ಬರುವ ಚಾರಣಪ್ರಿಯರು ಯಾವುದೇ ಕಾರಣಕ್ಕೂ ಮೇರುತಿ ಗುಡ್ಡಕ್ಕೆ ಟ್ರಕ್ಕಿಂಗ್ ಹೋಗುವುದನ್ನು ತಪ್ಪಿಸಿಕೊಳ್ಳುವುದಿಲ್ಲ, ಕಾರಣ ಮೇರುತಿ ಗುಡ್ಡ ರಾಜ್ಯದ 5ನೇ ಅತೀ ಎತ್ತರದ ಗಿರಿಶ್ರೇಣಿಯಾಗಿದ್ದು, ಗಿರಿಶ್ರೇಣಿಯ ವೀವ್ ಪಾಯಿಂಟ್‌ನಿಂದ ಸುಂದರ ಮಲೆನಾಡಿನ ಪ್ರಾಕೃತಿಕ ಸೊಬಗು ಸವಿಯಲು ಎರಡು ಕಣ್ಣು ಸಾಲದು.

ಕಳಸ, ಕೊಪ್ಪ, ಶೃಂಗೇರಿ, ಜಯಪುರ, ಬಾಳೆಹೊನ್ನೂರು ಪಟ್ಟಣಗಳಿಗೆ ಹತ್ತಿರದಲ್ಲಿರುವ ಬಸರಿಕಟ್ಟೆ ಗ್ರಾಮದಿಂದ ಸುಮಾರು 8ಕಿ.ಮೀ. ದೂರ, ಕಾಫಿ ತೋಟದ ಮಧ್ಯೆ ಹಾದು ಹೋಗಿರುವ ಕಚ್ಛಾ ರಸ್ತೆಯ ಮೂಲಕ ಮೇರುತಿ ಗುಡ್ಡ ತಲುಪಬೇಕಿದೆ. ಮೇರ್ತಿಖಾನ್ ಕಾಫಿ ಎಸ್ಟೇಟ್ ಸಮೀಪದಲ್ಲಿರುವ ಮೇರುತಿ ಗುಡ್ಡ ಏರಲು ಕಡಿದಾದ ಕಾಲು ದಾರಿ ಬಿಟ್ಟರೆ ಅನ್ಯಮಾರ್ಗವಿಲ್ಲ. ಕಾಲು ದಾರಿಯ ಮೂಲಕ ಮುಗಿಲೆತ್ತರದ ಮೇರುತಿ ಗುಡ್ಡ ಏರಲು ಹರಸಾಹಸ ಮಾಡಬೇಕೆಂದೆನಿಸಿದರೂ ಸುಂದರ ಹಸಿರು ಪರಿಸರ ಗುಡ್ಡ ಏರುವ ಆಯಾಸವನ್ನು ಮರೆಸುತ್ತದೆ.

ಮೇರುತಿ ಗುಡ್ಡ ಏರುವ ಚಾರಣಿಗರ ಮುಂದೆ ಹೊಸದೊಂದು ಸುಂದರ ಪ್ರಾಕೃತಿಕ ಸೊಬಗಿನ ಪ್ರಪಂಚ ಕಣ್ಣಮುಂದೆ ತೆರೆದುಕೊಳ್ಳುತ್ತದೆ. ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಾಣುವ ಹಸಿರ ಗಿರಿಗಳ ಸಾಲು, ಹಾವಿನಂತೆ ಭಾಸವಾಗುವ ಭದ್ರಾ ನದಿ, ದಟ್ಟ ಕಾನನದ ನಡುವೆ ಅಲ್ಲಲ್ಲಿ ಕಾಣಸಿಗುವ ಕಾಫಿ, ಅಡಿಕೆ ತೋಟಗಳು ನೋಡುಗರ ಮನಸೂರೆಗೊಳ್ಳುತ್ತವೆ. ಕೈಗೆಟಕುವಷ್ಟು ಸಮೀಪದಲ್ಲೇ ಹಾದು ಹೋಗುವ ಮೋಡಗಳ ಸಾಲು, ಸದಾ ಗುಡ್ಡಕ್ಕೆ ಮುತ್ತಿಕ್ಕುತ್ತಿರುವಂತೆ ಕಾಣುವ ಮಂಜಿನ ವಾತಾವರಣ ಮೈಮನವನ್ನು ಪುಳಕಗೊಳಿಸುತ್ತದೆ.

ರಾಜ್ಯದ 5ನೇ ಎತ್ತರದ ಗಿರಿಶ್ರೇಣಿಯಾಗಿರುವ ಮೇರುತಿ ಗುಡ್ಡದ ಮೇಲೆ ನಿಂತು ಕಣ್ಣು ಹಾಯಿಸಿದರೆ ಕಳಸ, ಹೊರನಾಡು, ಜಯಪುರದಂತಹ ದೂರದ ಪಟ್ಟಣಗಳನ್ನು ನೋಡಬಹುದು. ದಟ್ಟ ಕಾಡು, ನುಣುಪಾದ ಬೆಟ್ಟಗಳ ಸಾಲು, ಹಸಿರ ಹೊದಿಕೆಯಂತೆ ಕಾಣುವ ಹುಲ್ಲು ಗಾವಲು ಪ್ರದೇಶ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಈ ಕಾರಣಕ್ಕೆ ಟ್ರಕ್ಕಿಂಗ್ ಪ್ರಿಯರು ಮೇರುತಿ ಗುಡ್ಡಕ್ಕೆ ಪ್ರತಿದಿನ ಚಾರಣಕ್ಕೆ ಬರುತ್ತಿದ್ದಾರೆ.

ಬಸರೀಕಟ್ಟೆ ಗ್ರಾಮದಿಂದ ಮೇರುತಿಗುಡ್ಡದ ತಪ್ಪಲಿನವರೆಗೆ ಹೋಗಲು ಸ್ಥಳೀಯವಾಗಿ ಬಾಡಿಗೆ ವಾಹನಗಳು ಲಭ್ಯ ಇವೆ. ಗುಡ್ಡ ಏರಿ ಹಿಂದಿರುಗಲು ಒಂದು ದಿನ ಮೀಸಲಿಡ ಬೇಕಾಗಿರುವುದು ಅನಿವಾರ್ಯವಾದರೂ ಮೇರುತಿಗುಡ್ಡದ ಸುಂದರ ಸೊಬಗು, ಅಲ್ಲಿಂದ ಕಾಣಸಿಗುವ ಮಲೆನಾಡಿನ ಪ್ರಾಕೃತಿಕ ಸೌಂದರ್ಯದ ರಾಶಿ ಇಡೀ ದಿನದ ಆಯಾಸ, ಪ್ರಯಾಸವನ್ನು ಮರೆಸುತ್ತದೆ. ಈ ಟ್ರಕ್ಕಿಂಗ್ ತಾಣ ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ತಾಣಗಳ ಪಟ್ಟಿಯಲ್ಲಿಲ್ಲದಿದ್ದರೂ ಪ್ರತಿದಿನ ನೂರಾರು ಚಾರಣಿಗರು ಮೇರುತಿ ಗುಡ್ಡ ಏರುತ್ತಾ ಸುಂದರ ಪರಿಸರದ ಸೊಬಗು ಸವಿಯುತ್ತಿದ್ದಾರೆ.


ತಲುಪುವುದು ಹೇಗೆ? :

ಚಿಕ್ಕಮಗಳೂರು, ಮಂಗಳೂರು, ಶಿವಮೊಗ್ಗ ಜಿಲ್ಲಾ ಕೇಂದ್ರಗಳಿಂದ ಮೇರುತಿಗುಡ್ಡ ಅಂದಾಜು 100-130ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿಂದ 320ಕಿ.ಮೀ. ದೂರದಲ್ಲಿದ್ದು, ದೂರದ ಪ್ರವಾಸಿಗರು ಮೇರುತಿ ಗುಡ್ಡ ತಲುಪಲು ಕಳಸ, ಹೊರನಾಡು, ಕೊಪ್ಪ, ಶೃಂಗೇರಿ, ಜಯಪುರ ಮೂಲಕ ಬಸರಿಕಟ್ಟೆಗೆ ಬಂದು ಅಲ್ಲಿಂದ ಬಾಡಿಗೆ ವಾಹನಗಳ ಮೂಲಕ ಮೇರುತಿ ಗುಡ್ಡದ ತಪ್ಪಲಿನವರೆಗೆ ಬರಬೇಕು. ಅಲ್ಲಿಂದ ಕಾಲ್ನಡಿಗೆಯಲ್ಲಿ ಗುಡ್ಡ ಏರಬೇಕಿದೆ.


share
ಕೆ.ಎಲ್.ಶಿವು, ಕಳಸ
ಕೆ.ಎಲ್.ಶಿವು, ಕಳಸ
Next Story
X